ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭೂ ಹಗರಣದಲ್ಲಿ ಮಾಜಿ ಲೋಕಾಯುಕ್ತ ವೆಂಕಟಾಚಲ
ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಲಿ. ನ ವತಿಯಿಂದ ವೆಂಕಟಾಚಲ ಅವರಿಗೆ 60X90 ವಿಸ್ತೀರ್ಣ ವಸತಿ ನಿವೇಶನ(ನಂ. 1381) ಮಂಜೂರು ಮಾಡಲಾಗಿತ್ತು.
ಸೊಸೈಟಿ ನಿಯಮದಂತೆ ಸೈಟ್ ಮಂಜೂರಾದ ಎರಡು ವರ್ಷದೊಳಗೆ ಅಲ್ಲಿ ಮನೆ ಕಟ್ಟಿಕೊಳ್ಳಬೇಕು. ಹಾಗೂ ವಸತಿ ನಿವೇಶನದಲ್ಲಿ ಬೇರೆ ಯಾವುದೇ ರೀತಿ ದುರ್ಬಳಕೆ ಮಾಡಿಕೊಳ್ಳುವಂತಿಲ್ಲ.
ಆದರೆ, ವೆಂಕಟಾಚಲ ಅವರು ವಸತಿ ನಿವೇಶನವನ್ನು ಟೆನ್ನಿಸ್ ಕೋರ್ಟ್ ಆಗಿ ಪರಿವರ್ತಿಸಿ ನಿಯಮ ಉಲ್ಲಂಘಿಸಿದ್ದಾರೆ.
ಈ ಬಗ್ಗೆ ಜುಡಿಷಿಯಲ್ ಲೇಔಟ್ ನ ನಿವಾಸಿಯೊಬ್ಬರು ದೂರು ನೀಡಿದ್ದಾರೆ. ಬೆಂಗಳೂರಿನಲ್ಲಿರುವ ಇತರೆ ಲೇಔಟ್ ಗಳಲ್ಲಿ ಪಾಲಿಸಲಾಗುವ ನಿಯಮಗಳು ಜುಡಿಷಿಯಲ್ ಲೇಔಟ್ ಗೂ ಅನ್ವಯವಾಗುತ್ತದೆ.
ಬಿಡಿಎ ಹಾಗೂ ಬಿಬಿಎಂಪಿ ನಿಯಮದ ಪ್ರಕಾರ ನಿವೇಶನವನ್ನು 10 ವರ್ಷಗಳ ತನಕ ಯಾರಿಗೂ ಮಾರಾಟ ಮಾಡುವಂತಿಲ್ಲ. ವಸತಿ ನಿವೇಶನದಲ್ಲಿ ವಾಣಿಜ್ಯ ಕಟ್ಟಡ ಕಟ್ಟುವಂತಿಲ್ಲ ಅಥವಾ ಇತರೆ ಯಾವುದೇ ಉಪಯೋಗಕ್ಕಾಗಿ ಬಳಸುವಂತಿಲ್ಲ.
ಆದರೆ, ಕಾನೂನು ಹೇಳುವ ವೆಂಕಟಾಚಲ ಅವರ ಪ್ರತಿಕ್ರಿಯೆ ಏನು?...
Comments
English summary
Former Lokayukta Justice N Venkatachala reportedly involved in serious land violation. Venkatachala has converted the residential site into a tennis court thus violating the Judicial society’s norms.
Story first published: Monday, October 3, 2011, 17:33 [IST]