ಇಲ್ಲಿ ಹೆಜ್ಜೆಹೆಜ್ಜೆಗೂ ಒಂದು ಜೋಗದ ಗುಂಡಿ

ತುಮಕೂರಿನಿಂದ ಸಾಗರದವರೆಗೆ ರಸ್ತೆಯ ಗುಣಮಟ್ಟ ಮತ್ತು ಪ್ರವಾಸ ಹಾಗೂ ಹೀಗೂ ಪರವಾಗಿಲ್ಲ. ಆದರೆ, ಸಾಗರದಿಂದ ಹೊನ್ನಾವರ ನಡುವಿನ 75 ಕಿಲೋಮೀಟರ್ ರಸ್ತೆ ನರಕ ಸದೃಶ. ಈ ರಸ್ತೆಯಲ್ಲಿ ಪ್ರಯಾಣಿಸುವರ ಸೊಂಟ, ಹೆಗಲು, ಎಲಬುಗಳನ್ನು ಇಡಗುಂಜಿ ಗಣಪತಿಯೇ ಕಾಪಾಡಬೇಕು.
ಅಕ್ಕ ಪಕ್ಕ ನಿತ್ಯ ಹಸುರು ಕಾನನ ಮತ್ತು ಜಲಪಾತಗಳ ಜುಳುಜುಳು ಆಲಿಸುತ್ತ ಈ 75 ಕಿಮಿ ಉದ್ದದ ಈ ರಸ್ತೆಯಲ್ಲಿ ಪ್ರಯಾಣ ಮಾಡುವುದೇನೋ ಆನಂದ. ಆದರೆ ರಸ್ತೆ ಮಾತ್ರ ಡಬ್ಬಾ. ಹೆಜ್ಜೆ ಹೆಜ್ಜೆಗೂ ಒಂದೊಂದು ಜೋಗದ ಗುಂಡಿ. ರಾಜಾ ರಾಣಿ ರೋರರ್ ರಾಕೆಟ್.
ಮುಖ್ಯವಾಗಿ ಈ ರಸ್ತೆ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಹಾದಿ. ಸರಕಾರದ ಕರಪತ್ರಗಳಲ್ಲಿ, ಸ್ವಾಗತಕೋರುವ ಭಿತ್ತಿಫಲಕಗಳಲ್ಲಿ ಶಿವಮೊಗ್ಗ ಜಿಲ್ಲೆಯ ವೈಭವವನ್ನು ದಪ್ಪಕ್ಷರಗಳಲ್ಲಿ ಬಿಂಬಿಸಲಾಗಿರುತ್ತದೆ. ಶುದ್ಧ ನಗೆಪಾಟಲು. ಸ್ವಲ್ಪ ಸುತ್ತು ಬಳಸು ಆದರೂ ಪರವಾಗಿಲ್ಲ. ನೀವು ಮಾತ್ರ ಈ ರಸ್ತೆಯನ್ನು ಬಿಟ್ಟು ಬೇರೆ ಯಾವುದಾದರೂ ಮಾರ್ಗ ಹುಡುಕಿಕೊಳ್ಳಿ.
ಈ ದುರವಸ್ಥೆಯನ್ನು ಸರಿಪಡಿಸುವವರು ಯಾರು? ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಚುರುಕು ಮುಟ್ಟಿಸುವವರು ಯಾರು? ಇವತ್ತಿನಿಂದಲೇ ರಸ್ತೆ ರಿಪೇರಿ ಆರಂಭಿಸಿದರೂ ಮುಂದಿನ ಮಳೆಗಾಲದವರೆಗೂ ಪೂರ್ಣವಾಗುವ ಯೋಜನೆ ಇದಲ್ಲ. ಅಂದಹಾಗೆ ಈ ರಸ್ತೆಗೆ ರಿಪೇರಿ ಮಾಡಿ ಪ್ರಯೋಜನವಿಲ್ಲ. ಹೊಸ ರಸ್ತೆಯೇ ಆಗಬೇಕು.
ನಮ್ಮ ಸಲಹೆ ಏನೆಂದರೆ, ಈ ರಸ್ತೆಯ ಗುಣಮಟ್ಟ ಸುಧಾರಣೆಗೆ ಸಾಗರ, ಹೊನ್ನಾವರ, ಶಿವಮೊಗ್ಗ, ಭಟ್ಕಳ ಜಿಲ್ಲೆಯ ಮಾಧ್ಯಮ ಮಿತ್ರರು ಸಂಬಂಧಪಟ್ಟ ಅಧಿಕಾರಿಗಳನ್ನು ಬಡಿದೆಬ್ಬಿಸುವ ಸುದ್ದಿ ಸಮಾಚಾರಗಳನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸುವುದರ ಮೂಲಕ ಹಕ್ಕೊತ್ತಾಯ ಮಾಡಬೇಕು. ವಂದನೆಗಳು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications