ಅಕ್ರಮ ಗಣಿ ಸಿಬಿಐ ತನಿಖೆಗೆ: ಭಾರದ್ವಾಜ್ ಗೆ ಭಾರಿ ಸಂತಸ

ಮಾಜಿ ಸಚಿವ ಜನಾರ್ದನರೆಡ್ಡಿ ಮಾಲಕತ್ವದ ಎಎಂಸಿ ಕಂಪನಿಯು ರಾಜ್ಯದಲ್ಲಿ ನಡೆಸಿರುವ ಅಕ್ರಮ ಗಣಿಗಾರಿಕೆ ಕುರಿತು ಸವಿವರವಾದ ವರದಿಯನ್ನು ಈಗಾಗಲೆ ರಾಜ್ಯ ಲೋಕಾಯುಕ್ತ ಸಂಸ್ಥೆ ರಾಜ್ಯ ಸರಕಾರಕ್ಕೆ ಸಲ್ಲಿಸಿತ್ತು. ಆದರೆ ರಾಜ್ಯ ಸರಕಾರ ಯಾವ ಕ್ರಮವನ್ನು ತೆಗೆದುಕೊಳ್ಳದೆ ಕಾಲಹರಣ ಮಾಡುತ್ತಿದೆ. ರಾಜ್ಯದ ಬುದ್ಧಿವಂತ ಸಮಾಜ ಈ ಬಗ್ಗೆ ದನಿ ಎತ್ತದಿರುವುದು ಅಚ್ಚರಿಯ ಸಂಗತಿ ಎಂದು ಭಾರದ್ವಾಜ್ ವಿಷಾದಿಸಿದರು.
ರಾಜ್ಯದ ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಅವರು ಅಕ್ರಮ ಗಣಿಗಾರಿಕೆ ಕುರಿತಾದ ಲೋಕಾಯುಕ್ತ ವರದಿಯು ಅಪೂರ್ಣವಾಗಿದೆ. ಸಹಜ ನ್ಯಾಯ ಪಾಲಿಸಿಲ್ಲ ಎಂದು ಹೇಳಿರುವುದು 'ಸಹಜವಾಗಿಯೇ ಇದೆ' ಎಂದು ವ್ಯಂಗ್ಯವಾಡಿರುವ ಭಾರದ್ವಾಜ್, ಆಚಾರ್ಯರ ಹೇಳಿಕೆ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದು ತಿಳಿಸಿದರು.












Click it and Unblock the Notifications