ನನ್ನ ಕೈ ಕೊಳಕೆಂದು ಸಾಬೀತಾದರೆ, ಗುಡ್ ಬೈ

ಇದನ್ನು ಮಾಧ್ಯಮಗಳ ಹಿರಿಯರಾದ ನೀವು ಒಪ್ಪಿಕೊಳ್ಳುತ್ತೀರಾ? ಹಲವು ವರ್ಷಗಳಿಂದ ಚುನಾಯಿತ ಪ್ರತಿನಿಧಿಯಾದ ನಾನು ರಾಜ್ಯ ಯಾವುದೇ ಜನರಿಂದ, ಅಧಿಕಾರಿಗಳಿಂದ, ಉದ್ಯಮಿಗಳಿಂದ ಲಂಚ ಪಡೆದಿದ್ದೇನೆಂದು ಯಾರಾದರೂ ಸಾಬೀತು ಮಾಡಿದರೆ ನಾನು ಸಾರ್ವಜನಿಕ ಬದುಕಿನಿಂದ ದೂರವಾಗಲು ತಯಾರಿದ್ದೇನೆ.
ನಾನು ವಿದೇಶದಲ್ಲಿ ಹಣ ತೊಡಗಿಸಿದ್ದೇನೆಂಬ ಎಂತಹ ಅಪ್ಪಟ ಸುಳ್ಳನ್ನು ಬಿತ್ತರಿಸಿದ್ದೀರಿ. ಒಂದು ಸುಳ್ಳನ್ನು ನೂರು ಬಾರಿ ಹೇಳಿ ಜನರ ಮನಸ್ಸಿನಲ್ಲಿ ಸತ್ಯ ಮಾಡಬಹುದೆಂಬುದು ನಿಮ್ಮ ಹುನ್ನಾರವಿರಬಹುದು. ಅತ್ಯಂತ ಪಾರದರ್ಶಕವಾಗಿ ನನ್ನ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ.
ಗ್ರಾಮೀಣಾಭಿವೃದ್ಧಿ ಇಲಾಖೆ, ಈಗಿರುವ ಇಂಧನ ಮತ್ತು ಆಹಾರ ಇಲಾಖೆಯ ಅಧಿಕಾರಿಗಳನ್ನು ಯಾರಾದರೂ ವಿಚಾರಿಸಲಿ. ನಾನು ಎಂದಾದರೂ ಎಂಜಲು ಕಾಸಿಗೆ ಕೈಯೊಡ್ಡಿದ್ದೇನೆಯೇ ಕೇಳಿ ನೋಡಿ. ಹೀಗಿರುವಾಗ ನಾನು ವಿದೇಶದಲ್ಲಿ ಹಣ ಇಟ್ಟಿದ್ದೇನೆಂದು ಹೇಗೆ ಹೇಳಿದ್ದೀರಿ ?
ನಿಮಗೆ ನನ್ನ ಸವಾಲಿದೆ. ನಾನು ವಿದೇಶದಲ್ಲಿ ಹಣ ಇಟ್ಟಿದ್ದನ್ನು ನೀವು ಸಾಬೀತು ಮಾಡಬೇಕು. ಕೇಂದ್ರ ಸರ್ಕಾರದಿಂದ ಈ ಮಾಹಿತಿ ತರಿಸಿಕೊಳ್ಳಬೇಕು. ಈ ಆರೋಪ ಸಾಬೀತಾದರೆ ಯಾವ ಶಿಕ್ಷೆಗೂ ನಾನು ಸಿದ್ದಳಿದ್ದೇನೆ. ಇದು ನನ್ನನ್ನು ಆರಿಸಿರುವ ಜನತೆಯಲ್ಲಿ ಮಾಡುವ ಕಳಕಳಿಯ ಮನವಿ.
-ಶೋಭಾ ಕರಂದ್ಲಾಜೆ, ಬೆಂಗಳೂರು












Click it and Unblock the Notifications