ಭ್ರಷ್ಟ ಪತ್ರಕರ್ತರನ್ನು ಜೈಲಿಗೆ ಕಳಿಸಿ: ಉಗ್ರಪ್ಪ

ಯು.ವಿ.ಸಿಂಗ್ ವರದಿಯಲ್ಲಿ ಉಲ್ಲೇಖವಾಗಿರುವ ಪತ್ರಕರ್ತರಿಗೆ ಒಂದು ಕ್ಷಣವೂ ಪತ್ರಕರ್ತರ ಸ್ಥಾನದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ. ಅಲ್ಲದೆ ಅಂತಹ ಪತ್ರಕರ್ತರು ಹಾಗೂ ಪತ್ರಿಕಾ ಸಂಸ್ಥೆಗಳು ರಾಜ್ಯದ ಜನತೆಗೆ ಸ್ಪಷ್ಟೀಕರಣ ನೀಡಬೇಕೆಂದು ಉಗ್ರಪ್ಪ ಒತ್ತಾಯಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ರಕರ್ತರು ಸಮಾಜದ ಕಾವಲುಗಾರರಿದ್ದಂತೆ. ಸಮಾಜದ ಅಂಕು ಡೊಂಕು ತಿದ್ದಬೇಕಿರುವ ಪತ್ರಿಕೋದ್ಯಮಕ್ಕೂ ಭ್ರಷ್ಟಾಚಾರದ ಕಳಂಕ
ತಟ್ಟಿರುವುದು ವಿಷಾದನೀಯ ಎಂದರು. ಬೇರೆಯವರು ತಪ್ಪು ಮಾಡಿದ್ದರೆ ಸುಮ್ಮನೆ ಬಿಡುತ್ತಿದ್ದಿರೇನು ಎಂಬ ಪ್ರಶ್ನೆಯನ್ನೂ ಸಹ ಎಸೆಯಲು ಉಗ್ರಪ್ಪ ಮರೆಯಲಿಲ್ಲ.












Click it and Unblock the Notifications