ಸಿಬಿಐನಿಂದ ಬಚಾವ್ ಆಗಲು ಜಗನ್ ವಾಸ್ತುಗೆ ಮೊರೆ

YS Jagan Mohan Reddy
ಕಡಪ, ಆ.24: ದೇಶದಾದ್ಯಂತ ಸಿಬಿಐ ನಡೆಸುತ್ತಿರುವ ಸತತ ದಾಳಿಯಿಂದ ವೈಎಸ್ ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಸಹಜವಾಗಿ ಕಂಗಾಲಾಗಿದ್ದಾರೆ. ಹೇಗಾದರೂ ಮಾಡಿ ಬಂಧನದಿಂದ ತಪ್ಪಿಸಿಕೊಳ್ಳಲು ಅನೇಕ ಮಾರ್ಗೋಪಾಯಗಳನ್ನು ಹುಡುಕತೊಡಗಿದ್ದಾರೆ.

ತಮ್ಮ ಹಾಗೂ ತಂದೇ ರಾಜಶೇಖರ ರೆಡ್ಡಿ ಬೆಂಬಲಿಗ ಶಾಸಕರು ಹಾಗೂ ಸಂಸದರು ರಾಜೀನಾಮೆ ನೀಡುವಂತೆ ಮಾಡುವಲ್ಲಿ ಯಶಸ್ವಿಯಾದ ಜಗನ್ ಈಗ ಮತ್ತೊಂದು ಪ್ರಯೋಗ ನಡೆಸುತ್ತಿದ್ದಾರೆ. ಕೋರ್ಟ್ ಸಹ ಜಾಮೀನು ನೀಡಲು ನಿರಾಕರಿಸುವ ಲಕ್ಷಣಗಳು ಕಂಡು ಬಂದಿರುವುದರಿಂದ ವಾಸ್ತು ಶಾಸ್ತ್ರಕ್ಕೆ ಮೊರೆ ಹೊಕ್ಕಿದ್ದಾರೆ.

ವಾಸ್ತು ರಕ್ಷಣೆ : ಜಗನ್ ತಲೆ ಮೇಲೆ ಕೈ ಇಟ್ಟಿರುವ ವಾಸ್ತು ಶಾಸ್ತಜ್ಞರು, ಸದ್ದಿಲ್ಲದೆ ಪುಲಿವೆಂದುಲದ ಜಗನ್ ನಿವಾಸದಲ್ಲಿ ಸಣ್ಣ ಪುಟ್ಟ ರಿಪೇರಿ ಮಾಡಿ, ಭಾರಿ ಮೊತ್ತದ ಸಂಭಾವನೆ ತಮ್ಮ ಜೋಳಿಗೆಯಲ್ಲಿ ತುಂಬಿಸಿಕೊಂಡು ಹೊರನಡೆದಿದ್ದರಂತೆ. [ಇನ್ನೊಂದು ಬಂಗಲೆ ವಿವರ ನೋಡಿ]

ಸುಮಾರು 45,000 ಚದರ ಅಡಿ ವಿಸ್ತೀರ್ಣದ ಬಂಗಲೆಯ ಮುಖ್ಯದ್ವಾರದ ಗೇಟ್ ಪೂರ್ವಾಭಿಮುಖವಾಗಿತ್ತು. ಈಗ ಇದನ್ನು ಕೆಡವಿ ಉತ್ತರ ದಿಕ್ಕಿನಲ್ಲಿ ಹೊಸ ಗೇಟ್ ಸ್ಥಾಪಿಸಲಾಗಿದೆ. ಜಗನ್ ಅವರ ಜನ್ಮ ನಕ್ಷತ್ರ, ರಾಶಿ ಅನುಗುಣವಾಗಿ ಪೂರ್ವ ದಿಕ್ಕಿಗಿಂತ, ಉತ್ತರ ದಿಕ್ಕು ಹೆಚ್ಚು ಶ್ರೇಯಸ್ಸು ಎನ್ನಲಾಗಿದೆ.

ಪೂರ್ವ ದಿಕ್ಕಿನಿಂದ ಎಲ್ಲವೂ ಶುಭಕರ ಕಿರಣಗಳೇ ಬರುವುದರಿಂದ ಮನೆ ಯಜಮಾನ ವಾಮಮಾರ್ಗದಿಂದ ಗಳಿಸಿದ ಸಂಪತ್ತು ಕರಗುವುದಂತೆ.

ಉತ್ತರ ದಿಕ್ಕಿನಿಂದ ಗೇಟ್ ಇದ್ದು, ದಕ್ಷಿಣಾಭಿಮುಖವಾಗಿ ಯಾವುದೇ ದಾಳಿ ನಡೆದರೂ ಜಗನ್ ಗೆ ಯಾವುದೇ ಬಾಧಕವಲ್ಲ ಎಂದು ವಾಸ್ತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸುದ್ದಿ ತಿಳಿದ ಸಿಬಿಐ ಅಧಿಕಾರಿಗಳು ಗಹಗಹಿಸಿ ನಕ್ಕು ತಮ್ಮ ದಾಳಿ ಮುಂದುವರೆಸಿದ್ದಾರೆ ಎಂಬುದು ಮೂಲಗಳಿಂದ ಸಿಕ್ಕ ಸುದ್ದಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+