ಬೆಂಗಳೂರು, ಆಗಸ್ಟ್ 16: ತಮ್ಮ ಸಚಿವ ಸಂಪುಟವನ್ನು ಮೂರನೇ ಬಾರಿಗೆ ವಿಸ್ತರಣೆ ಮಾಡುವ ಹೊಸ್ತಿಲಲ್ಲಿರುವ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಅವರು ಎರಡನೇ ಹಂತದಲ್ಲಿ ವಿಸ್ತರಣೆ ಮಾಡಿ, ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದವರಿಗೆ ಮಂಗಳವಾರ ಖಾತೆ ಹೊಣೆಗಾರಿಕೆ ಹಂಚಿಕೆ ಮಾಡಿದ್ದಾರೆ.
ಖಾತೆ ಹಂಚಿಕೆ ಹೀಗಿದೆ: ವರ್ತೂರು ಪ್ರಕಾಶ್ - ಜವಳಿ ಖಾತೆ, ರಾಜೂಗೌಡ - ಸಣ್ಣ ಕೈಗಾರಿಕೆ, ಬಾಲಚಂದ್ರ ಜಾರಕಿಹೊಳಿ - ಪೌರಾಡಳಿತ, ಆನಂದ್ ಅಸ್ನೋಟಿಕರ್ - ವಿಜ್ಞಾನ, ತಂತ್ರಜ್ಞಾನ ಯೋಗೀಶ್ವರ್ - ಅರಣ್ಯ ಖಾತೆ