ದೀಪಾವಳಿ ವೇಳೆ ರಾಜ್ಯಕ್ಕೆ ಎಣ್ಣೆ ದೀಪವೇ ಗಟ್ಟಿ

ಬಹುತೇಕ ಅಕ್ಟೋಬರ್ 18ರ ವೇಳೆಗೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ(KERC) ತನ್ನ ಆದೇಶ ನೀಡಲಿದೆ. ಬೆಲೆ ಏರಿಕೆ ಕುರಿತ ಎಸ್ಕಾಂಗಳ ಮನವಿ ಯನ್ನು ಮನ್ನಿಸಿ ಅಯಾ ಕೇಂದ್ರಗಳಿಗೆ ಭೇಟಿ ಕೊಟ್ಟು ಸಾರ್ವಜನಿಕ ವಿಚಾರಣೆ ನಡೆಸಲಾಗುವು ಎಂದು ಕೆಇಆರ್ಸಿ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ ಹೇಳಿದ್ದಾರೆ.
ರೈತರಿಗೆ ಉಚಿತ ವಿದ್ಯುತ್ ನೀಡುತ್ತಿರುವುದರಿಂದ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲ್ಲಿದ್ದಲು ದರ ಹೆಚ್ಚಳವಾಗಿರುವುದರಿಂದ ವಿದ್ಯುತ್ ದರವನ್ನು ಹೆಚ್ಚಿಸುವುದು ಅನಿವಾರ್ಯ ಎನ್ನಲಾಗಿದೆ. ದರ ಏರಿಕೆ ನಿರ್ಧಾರ ಆಯೋಗದ ಕೈಯಲ್ಲಿದೆ. ಬೆಲೆ ಏರಿಕೆ ಬಗ್ಗೆ ಇಂಧನ ಸಚಿವ ಶೋಭಾ ಕರಂದ್ಲಾಜೆ ಅವರು ಜೂನ್ ತಿಂಗಳ ಕೊನೆಯಲ್ಲೇ ಸೂಚನೆ ನೀಡಿದ್ದರು.












Click it and Unblock the Notifications