ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕ್ಯಾಪಿಟಲ್ ಹೋಟೆಲಿನಲ್ಲಿ ಬಿಜೆಪಿ ಶಾಸಕರ ಮಾರಾಮಾರಿ
ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದ ಇಬ್ಬರೂ ವೀಕ್ಷಕರು ಮುಖ್ಯಮಂತ್ರಿಗಾದಿಗಾಗಿ ಸದಾನಂದ ಗೌಡ ಮತ್ತು ಜಗದೀಶ್ ಶೆಟ್ಟರ್ ಅವರ ಹೆಸರುಗಳನ್ನು ಆಖೈರುಗೊಳಿಸಿ, ರಹಸ್ಯ ಮತದಾನಕ್ಕೆ ಆದೇಶಿಸಿದ್ದಾರೆ.
ಪ್ರಮುಖವಾಗಿ ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮತ್ತು ಅನಂತಕುಮಾರ್ ಬಣಗಳ ಮಧ್ಯೆ ಮಾರಾಮಾರಿ ನಡೆದಿದೆ. ಗೊಂದಲಮಯ ವಾತಾವರಣದಲ್ಲಿ ಶಾಸಕರು ತಮ್ಮ ಬೆಂಬಲಿತ ಅಭ್ಯರ್ಥಿ ಮತ್ತು ನಾಯಕರ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಪಕ್ಷದ ವೀಕ್ಷಕರಾದ ಅರುಣ್ ಜೇಟ್ಲಿ ಮತ್ತು ರಾಜನಾಥ ಸಿಂಗ್ ಅವರ ಸಮ್ಮುಖದಲ್ಲಿ ಶಾಸಕರು ಮನಸೋ ಇಚ್ಛೆ ಬೈದಾಡುತ್ತಿದ್ದು, ಶೆಟ್ಟರೋ, ಗೌಡರೋ ಎಂಬ ಕೂಗಾಟ ಕೇಳಿಬರುತ್ತಿದೆ.
ಸಭೆಯಲ್ಲಿ ಒಟ್ಟು 115 ಶಾಸಕರು ಹಾಜರಿದ್ದಾರೆ. ಉಳಿದ 5 ಶಾಸಕರು ಗೈರು ಹಾಜರಾಗಿದ್ದಾರೆ. ಸಭೆ ಆರಂಭವಾಗುತ್ತಿದ್ದತೆ ವರಿಷ್ಠರ ಸೂಚನೆಯ ಮೇರೆಗೆ ಪಕ್ಷದಸಂಸದರು ಮತ್ತು ಮೇಲ್ಮನೆ ಸದಸ್ಯರನ್ನು ಹೊರಗೆ ಕಳಿಸಲಾಯಿತು.
Comments
ರಾಜೀನಾಮೆ ಯಡಿಯೂರಪ್ಪ ರಾಷ್ಟ್ರಪತಿ ಆಡಳಿತ ಅಕ್ರಮ ಗಣಿಗಾರಿಕೆ yediyurappa hd kumaraswamy illegal mining resignation
English summary
Karnataka BJP legislatures who met in Hotel Capitol in Bangalore a short while ago failed to elect new Chief Minister of Karnataka. (2 pm, Aug 3, 2011). The Hotel witness a pitches battle between the legislatures in front of BJP high command.
Story first published: Wednesday, August 3, 2011, 13:22 [IST]