ವರಿಷ್ಠರೆ, ಯಡಿಯೂರಪ್ಪ ಆಟ ಇನ್ನೂ ಮುಗಿದಿಲ್ಲ!

ಹೊಸ ನಾಯಕನ ಆಯ್ಕೆ ಇನ್ನು ಸಲೀಸು ಎಂದು ವರಿಷ್ಠರು ಅಂದುಕೊಳ್ಳುತ್ತಿರುವ ಸಂದರ್ಭದಲ್ಲಿಯೆ, ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ ಎಂಬಂತೆ ಮತ್ತೆ ತೊಂದರೆಗಳು ಬಿಜೆಪಿ ಹಿರಿಯ ನಾಯಕರೆದಿರು ವಕ್ಕರಿಸಿವೆ. ಯಡಿಯೂರಪ್ಪನವರ ಆಟ ಇನ್ನೇನು ಮುಗಿಯಿತು ಅನ್ನುವಾಗಲೇ ಹೊಸ ಆಟಗಳನ್ನು ಅವರು ಶುರುಹಚ್ಚಿಕೊಂಡಿದ್ದಾರೆ.
ತೆರೆಯ ಮರೆಯಲ್ಲಿ ನಿಂತು ಹೊಸ ತಂತ್ರಗಳನ್ನು ಹೂಡುತ್ತಿರುವ ಯಡಿಯೂರಪ್ಪನವರು ಈ ಬಾರಿ ತಮ್ಮ ಬೆಂಬಲಿಗರಾದ 62 ಜನ ಶಾಸಕರನ್ನು ಛೂಬಿಟ್ಟಿದ್ದಾರೆ. ಅವರ ಬೆಂಬಲಿಗರು ಮೂರು ಷರತ್ತುಗಳನ್ನು ಮುಂದಿಡಲಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.
ಮೊದಲನೆಯದು, ಯಡಿಯೂರಪ್ಪನವರ ಹಿತಶತ್ರು ಅನಂತ್ ಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬಾರದು. ಎರಡನೆಯದು, ಯಡಿಯೂರಪ್ಪನವರನ್ನೇ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಬೇಕು. ಮೂರನೆಯದು, ಯಡಿಯೂರಪ್ಪವರೇ ಸೂಚಿಸಿದ ವ್ಯಕ್ತಿ ಮುಖ್ಯಮಂತ್ರಿಯಾಗಬೇಕು. [ಮುಖ್ಯಮಂತ್ರಿ ರೇಸ್ ನಲ್ಲಿ ಯಾರ್ಯಾರಿದ್ದಾರೆ?]












Click it and Unblock the Notifications