ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಹೂರ್ತ ಫಿಕ್ಸ್- ಭಾನುವಾರ 3 ಗಂಟೆಗೆ ಯಡಿಯೂರಪ್ಪ ರಾಜೀನಾಮೆ
ಆಷಾಢ ಕಳೆಯುತ್ತಿದ್ದಂತೆ, ಭಾನುವಾರ ಮಧ್ಯಾಹ್ನ 3 ಗಂಟೆಗೆ ರಾಜ್ಯಪಾಲ ಭಾರದ್ವಾಜ್ ಅವರ ಕೈಗೆ ರಾಜೀನಾಮೆ ಪತ್ರ ಸಲ್ಲಿಸಲು ಯಡಿಯೂರಪ್ಪ ಸಮ್ಮತಿಸಿದ್ದಾರೆ. ಬಳಿಕ, ಭಾನುವಾರ ಸಂಜೆ 4 ಗಂಟೆಗೆ ಬಿಜೆಪಿ ಶಾಸಕರು ಸಭೆ ಸೇರಿ ನೂತನ ನಾಯಕನ ಆಯ್ಕೆ ಮಾಡುವುದು ಖಚಿತವಾಗಿದೆ.
ಈ ಮಧ್ಯೆ ಯಡಿಯೂರಪ್ಪ ಅವರ ಷರತ್ತುಗಳಿಗೆ ವರಿಷ್ಠರು ಒಪ್ಪಿದ್ದಾರೆಯೇ ಎಂಬುದು ಇನ್ನೂ ಬಹಿರಂಗವಾಗಿಲ್ಲ. ವರಿಷ್ಠರ ಜತೆ ಮಾತುಕತೆ ಮುಗಿಯುತ್ತಿದ್ದಂತೆ ತಮ್ಮ ನಿಷ್ಠಾವಂತ ಶಾಸಕರೊಂದಿಗೆ ಯಡಿಯೂರಪ್ಪ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆದಿದೆ. ನಾಳೆ ತಾವು ರಾಜೀನಾಮೆ ನೀಡುವುದು ಖಚಿತ ಎಂದು ಸಭೆಯಲ್ಲಿ ಯಡಿಯೂರಪ್ಪ ಘೋಷಿಸಿದ್ದಾರೆ.
Comments
ಅಕ್ರಮ ಗಣಿಗಾರಿಕೆ ಜ್ಯೋತಿಷ್ಯ ರಾಜೀನಾಮೆ ಯಡಿಯೂರಪ್ಪ ಲೋಕಾಯುಕ್ತ illegal mining lokayukta resignation astrology
English summary
After serious consultation with BJP leaders in Hotel Ashok on JUly 30 in the morning BS Yeddyurappa finally yeilds to BJP High command. BSY agrees to resign on July 31 at 3pm.
Story first published: Saturday, July 30, 2011, 9:23 [IST]