ಬೆಂಗಳೂರು ಡೆಸ್ಟ್ರಾಯ್ ಅಥಾರಿಟಿ ವಿರುದ್ಧ ನ್ಯಾ. ಶೈಲೇಂದ್ರ ವಾಗ್ದಾಳಿ!
ಬೆಂಗಳೂರು,
ಜುಲೈ 20: ಬಿಡಿಎ, ಕೆಐಎಡಿಬಿ ಸೇರಿದಂತೆ ಸರ್ಕಾರಿ ಸಂಸ್ಥೆಗಳ ವಿರುದ್ಧ ಈಗಾಗಲೇ ಹಲವು ಬಾರಿ ಕಿಡಿ ಕಾರಿರುವ ನ್ಯಾಯಮೂರ್ತಿ ಡಿ.ವಿ. ಶೈಲೇಂದ್ರ ಕುಮಾರ್, ಅವುಗಳ ವಿರುದ್ಧ ಮಂಗಳವಾರವೂ ವಾಕ್ಸಮರ ಮುಂದುವರಿಸಿದರು. id="toptextpromo">ನಾಡಪ್ರಭು
ಕೆಂಪೇಗೌಡ ಲೇಔಟ್ ನಿರ್ಮಾಣಕ್ಕೆ ಭೂಸ್ವಾಧೀನ ಪಡಿಸಿಕೊಂಡ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಬಿಡಿಎ ಎಂದರೆ ಬೆಂಗಳೂರು ಡೆಸ್ಟ್ರಾಯ್ ಅಥಾರಿಟಿ (ಬೆಂಗಳೂರನ್ನು ಹಾಳುಗೆಡಹುತ್ತಿರುವ ಪ್ರಾಧಿಕಾರ) ಎಂದು ಹೊಸದಾಗಿ ವ್ಯಾಖ್ಯಾನಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>'ಭೂಸ್ವಾಧೀನಕ್ಕೆ
ಸಂಬಂಧಿಸಿದಂತೆ ಮೊದಲು ಕೆಐಎಡಿಬಿ ಭ್ರಷ್ಟವಾಗಿತ್ತು. ಬಿಡಿಎ ಕೂಡ ಈ ಪಟ್ಟಿಯಲ್ಲಿ ಸೇರಿದೆ. ಎರಡೂ ಸಂಸ್ಥೆಗಳು ಭ್ರಷ್ಟಾಚಾರ, ಅವ್ಯವಹಾರದಲ್ಲಿ ತೊಡಗಿರುವಂತೆ ಗೋಚರವಾಗುತ್ತಿದೆ. ಜಿಲ್ಲಾಧಿಕಾರಿ, ಸಬ್-ರಿಜಿಸ್ಟ್ರಾರು ಸೇರಿದಂತೆ ಎಲ್ಲ ಅಧಿಕಾರಿಗಳೂ ಭ್ರಷ್ಟರಾಗಿದ್ದಾರೆ. 'ಧೂಮಪಾನ ನಿಷೇಧ ಜಾಗ' ಇರುವಂತೆ 'ಭ್ರಷ್ಟಾಚಾರ ವಿರೋಧಿ ಜಾಗ' ಇರಬೇಕಾಗಿದೆ ಎನ್ನಿಸುತ್ತಿದೆ ಎಂದರು.











Click it and Unblock the Notifications