ಲೈಂಗಿಕ ಕಿರುಕುಳ : ತಪ್ಪಿತಸ್ಥ ಪ್ರೊಫೆಸರ್ ಗೆ ವಿವಿ ಶ್ರೀರಕ್ಷೆ?

ಕೆ ಯಶೋಧರಾ ನೇತೃತ್ವದ ತಂಡ ಸಲ್ಲಿಸಿದ ವರದಿಯನ್ನು ಗಾಳಿಗೆ ತೂರಲಾಗಿದ್ದು, ಇಲಾಖಾ ವರದಿಗೆ ಕಾಯಲಾಗುತ್ತಿದೆ. ಕೊನೆ ಪ್ರಯತ್ನ ಎಂಬಂತೆ ರಾಜ್ಯಪಾಲರನ್ನು ಭೇಟಿ ಮಾಡಿ ನ್ಯಾಯಕ್ಕಾಗಿ ಮೊರೆ ಇಡುತ್ತೇವೆ. ಇಲ್ಲೂ ನ್ಯಾಯ ಸಿಗದಿದ್ದರೆ ರಾಜಭವನದ ಎದುರು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಆ ಮೂಲಕವಾದರೂ ವಿವಿಯ ಇತರೆ ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಲಿ ಎಂದು ನೊಂದ ವಿದ್ಯಾರ್ಥಿನಿ ಸರಿತಾ ದಂಪತಿ ಹತಾಶೆಯಿಂದ ಹೇಳುತ್ತಿದ್ದಾರೆ.
ಜೂ 24 ರಂದು ನಡೆದ ವಿವಿ ಸಿಂಡಿಕೇಟ್ ಸಭೆಯಲ್ಲಿ ಯಾವುದೇ ಚರ್ಚೆ ನಡೆಯಲಿಲ್ಲ. ಇಲಾಖಾ ವರದಿ ಬಂದ ಬಳಿಕ ಪ್ರಾಧ್ಯಾಪಕರ ಭವಿಷ್ಯ ನಿರ್ಧರಿಸಲಾಗುವುದು ಎಂದು ವಿವಿ ಮೂಲಗಳಿಂದ ತಿಳಿದುಬಂದಿದೆ.ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆ ನಡೆಸುತ್ತಿರುವ ಬಗ್ಗೆ ತಿಳಿದಿಲ್ಲ. ಈ ಬಗ್ಗೆ ನನ್ನನು ಯಾರು ಪ್ರಶ್ನಿಸಿಲ್ಲ. ಮಾಹಿತಿ ಇಲ್ಲದೆ ತನಿಖೆ ಏನು ನಡೆಸುತ್ತಿದೆ. ಇದೆಲ್ಲವು ಶಿವಬಸವಯ್ಯ ಅವರನ್ನು ಬಚಾವ್ ಮಾಡುವ ತಂತ್ರ ಎಂದು ಸರಿತಾ ಹೇಳಿದ್ದಾರೆ. [ಕೇಸ್ ಹಿಸ್ಟರಿ ಇಲ್ಲಿದೆ]












Click it and Unblock the Notifications