ರತ್ನಗಿರಿಯಲ್ಲಿ ಭೂಕುಸಿತ:ಕೊಂಕಣ ರೈಲು ಯಾನ ಸ್ಥಗಿತ

ರತ್ನಗಿರಿ ರೈಲ್ವೇ ನಿಲ್ದಾಣದ ಸಮೀಪ ಕೊಂಕಣ ರೈಲ್ವೇ ಹಳಿಗಳ ಮೇಲೆ ಬಂಡೆಕಲ್ಲು, ಭಾರೀ ಪ್ರಮಾಣದ ಮಣ್ಣು ಬಿದ್ದಿರುವುದಾಗಿ ತಿಳಿದುಬಂದಿದೆ. ಬಂಡೆಕಲ್ಲು, ಮಣ್ಣು ತೆರವು ಕಾರ್ಯಾಚರಣೆ ಯುದ್ದೋಪಾದಿಯಲ್ಲಿ ನಡೆಯುತ್ತಿದ್ದು ಮುಂದಿನ ಎರಡು ದಿನಗಳ ಕಾಲ ರೈಲಿ ಯಾನ ಅಸಾಧ್ಯವೆನ್ನಲಾಗಿದೆ.
ಶನಿವಾರ ಮತ್ತು ಭಾನುವಾರ ಮಂಗಳೂರಿನಿಂದ ಮುಂಬೈಗೆ ಹೀಗುವ ಮತ್ತು ಆಕಡೆಯಿಂದ ಬರುವ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದ್ದು ಮುಂಗಡ ಟಿಕೇಟು ಕಾದಿರಿಸಿದ್ದವರಿಗೆ ಹಣ ವಾಪಸು ಮಾಡಲಾಗಿದೆ. ರೈಲು ಸಂಚಾರ ರದ್ದಾದಕಾರಣ ಮಂಗಳೂರು-ಮುಂಬೈ ನಡುವೆ ಸಂಚರಿಸುವ ಖಾಸಗಿ ಬಸ್ಸುಗಳಿಗೆ ಶುಕ್ರದೆಸೆ.












Click it and Unblock the Notifications