ಆಣೆ-ಪ್ರಮಾಣ ಜಾಹೀರಾತು: ದುಡ್ಡು ಯಾರದು ಯಡಿಯೂರಪ್ಪ?

Sri Manjunatheshwara Temple, Dharmasthala
ಬೆಂಗಳೂರು, ಜೂನ್ 18: ಮಾಜಿ ಮುಖ್ಯಮಂತ್ರಿ ಜತೆಗಿನ 'ಕುಮಾರ ಸಂಧಾನ ಪರ್ವ'ಕ್ಕೆ ತಾರ್ಕಿಕ ಅಂತ್ಯ ಹಾಡಲು ರಾಜ್ಯದ ಹಾಲಿ ಮುಖ್ಯಮಂತ್ರಿ ನಿರ್ಧರಿಸಿರುವಂತಿದೆ. ಸದ್ಯಕ್ಕೆ ಕೇರಳದಲ್ಲಿ ವಾಸ್ತವ್ಯ ಹೂಡಿರುವ ಮಾನ್ಯ ಮುಖ್ಯಮಂತ್ರಿಗಳು ಅಲ್ಲಿಂದಲೇ ತರಾತುರಿಯಲ್ಲಿ ಭರ್ಜರಿ ಪತ್ರಿಕಾ ಜಾಹೀರಾತುಗಳನ್ನು ಹೊರಡಿಸಿ, ಎಚ್.ಡಿ. ಕುಮಾರಸ್ವಾಮಿಯವರ 'ಹಿಟ್ ಅಂಡ್ ರನ್' ಕೇಸಿಗೆ ಪ್ರತ್ಯುತ್ತರ ನೀಡಿದ್ದಾರೆ.

'ಗೌರವಾನ್ವಿತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೊಂದು ಬಹಿರಂಗ ಪತ್ರ ಬರೆದಿರುವ' ಪೂಜನೀಯ ಮುಖ್ಯಮಂತ್ರಿ ಯಡಿಯೂರಪ್ಪ, ಹಿಟ್ ಅಂಡ್ ರನ್ ಕೇಸ್ ಗೆ ಬಲವಾಗಿ ಉತ್ತರ ನೀಡಿದ್ದಾರೆ. (ಪತ್ರವನ್ನು ವಿವರವಾಗಿ ಓದಲು ಶನಿವಾರದ ಯಾವುದೇ ದಿನಪತ್ರಿಕೆಯನ್ನು ತಿರುವಿ ಹಾಕಬಹುದು).

'ಕುಮಾರಸ್ವಾಮಿಯವರೇ ಜನ ನಿಮ್ಮನ್ನು ನಂಬಬೇಕು ಎಂದರೆ ತಡಮಾಡದೆ ಧರ್ಮಸ್ಥಳಕ್ಕೆ ಬನ್ನಿ. 'ಕುಮಾರ ಸಂಧಾನ'ದ ಬಗ್ಗೆ ಅಲ್ಲಿ ಪ್ರಮಾಣ ಮಾಡಿ ಹೇಳಿ' ಎಂಬ ಒಕ್ಕಣೆಯ ಪತ್ರ ಅದು. ಇದಕ್ಕೆ ಸನ್ಮಾನ್ಯ ಕುಮಾರಸ್ವಾಮಿಯವರೂ ಪ್ರತಿಕ್ರಿಯಿಸಿದ್ದು, ಧರ್ಮಸ್ಥಳ ಭೇಟಿ ದಿನಾಂಕವನ್ನು ಇಬ್ಬರೂ ನಾಯಕರು ಚರ್ಚಿಸಿ ಮಹಾಜನತೆಗೆ ತಿಳಿಸುವ ಸಾಧ್ಯತೆ ಇದೆ. ಈ ಮಧ್ಯೆ, ಭಗವಂತಾ ಇಬ್ಬರಿಗೂ ಒಳ್ಳೆಯ ಬುದ್ಧಿ ಕೊಡು ಎಂದು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯನ್ನು ಜನತೆ ಬೇಡಿಕೊಂಡಿದ್ದಾರೆ.

ದುರ್ದೈವವೆಂದರೆ, ಇಬ್ಬರು ಮಹಾಮಹಿಮರು ತಮ್ಮ ವೈಯಕ್ತಿಕ ಮಟ್ಟದ ಜಗಳದಲ್ಲಿ ನಿರತರಾಗಿರುವಾಗ ಸನ್ಮಾನ್ಯ ಯಡಿಯೂರಪ್ಪನವರು ಸರಕಾರಿ ಹಣದಲ್ಲಿ ಬಹುತೇಕ ಎಲ್ಲ ವರ್ತಮಾನ ಪತ್ರಿಕೆಗಳ ಮುಖಪುಟಗಳಲ್ಲಿ ಸರಕಾರಿ ಸವಾಲ್ ಹಾಕಿದ್ದಾರೆ. 'ಯಡಿಯೂರಪ್ಪನವರೇ, ಇದರ ಜರೂರತ್ತು ನಿಮಗಿರಬಹುದು. ಆದರೆ ದುಡ್ಡು ಯಾರಪ್ಪನದು ಸ್ವಾಮಿ. ಯಾಕಿಂಥ ಕೆಲಸ ಮಾಡಿದಿರಿ?' ಎಂದು ಸಮಸ್ತ ಕರ್ನಾಟಕದ ಜನ ಕೇಳುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+