ನಕಲಿ ಆಂಟಿ ವೈರಸ್ ದಾಳಿ ಕಾದಿದೆ ಎಚ್ಚರ ಎಚ್ಚರ

ಮೋಝಿಲ್ಲಾ ಫೈರ್ ಫಾಕ್ಸ್ ವೆಬ್ ಬ್ರೌಸರ್ ಬಳಕೆದಾರರನ್ನು ಈ ನಕಲಿ ಆಂಟಿ ವೈರಸ್ ಗುರಿಯಾಗಿಸಿಕೊಂಡಿದೆ. ಮೈಕ್ರೋಸಾಫ್ಟ್ ಸೆಕ್ಯುರಿಟಿ ಸೆಂಟರ್ ನ ಸಂದೇಶವನ್ನು ನಕಲೀಕರಿಸಿ, ಗ್ರಾಹಕರನ್ನು ತನ್ನ ತಂತ್ರಕ್ಕೆ ಸಿಲುಕಿಸುತ್ತಿದೆ.Update your Windows ಎಂಬ ಸಾಮಾನ್ಯ ಸಂದೇಶಕ್ಕೆ ಓಗೊಟ್ಟು ಓಕೆ ಬಟನ್ ಒತ್ತಿದ್ದರೆ ಮುಗಿಯಿತು. ನಕಲಿ ಆಂಟಿ ವೈರಸ್ ತನ್ನ ಕೀಟಲೆ ತಂತ್ರಾಂಶವನ್ನು ನಿಮ್ಮ ಗಣಕದಲ್ಲಿ ಸ್ಥಾಪಿಸಿಬಿಡುತ್ತದೆ ಎಮ್ದು ಸೊಫೊಸ್ ಎಚ್ಚರಿಸಿದೆ.
ಒಮ್ಮೆ ನೀವು agree ಎಂದು ಒತ್ತಿದರೆ KB453396-ENU.zip ಎಂಬ ಫೈಲ್ ಡೌನ್ ಲೋಡ್ ಆಗುತ್ತದೆ. ಇದು ಹಾನಿಕಾರಕ ಕ್ರಿಮಿಯನ್ನು ಒಳಗೊಂಡಿದ್ದು, ನಿಮ್ಮ ಕಂಪ್ಯೂಟರ್ ಫೈಲ್ ಗಳು ನಾಶಗೊಳಿಸುತ್ತದೆ. ಇದಲ್ಲದೆ ಕೆಲವು ಬಳಕೆದಾರರಿಗೆ ಮೈಕ್ರೋಸಾಫ್ಟ್ ನ ಸೆಕ್ಯುರಿಟಿ ಅಸ್ಸುರೆಸ್ಸ್ ನಿರ್ದೇಶಕ ಸ್ಟೀವ್ ಲಿಪ್ನರ್ ನಿಂದ ಸುರಕ್ಷತೆ ಬಗ್ಗೆ ಇಮೇಲ್ ಬಂದಿದ್ದು ಇದು ಕೂಡಾ ನಕಲಿಯಾಗಿದೆ. ಮೈಕ್ರೋಸಾಫ್ಟ್ ಸಂಸ್ಥೆ ಈ ರೀತಿ ಯಾವುದೇ ವೈಯಕ್ತಿಕ ಇಮೇಲ್ ಕಳಿಸಿಲ್ಲ ಎಂದು ಸೊಫೋಸ್ ಹೇಳಿದೆ.
ಹ್ಯಾಕರ್ ಗಳು ಇಮೇಲ್ ನಲ್ಲಿ ಕ್ರಿಮಿ(worm)ಯನ್ನು ಸೇರಿಸಿ, ಎಲ್ಲರ ಮೇಲ್ ಬಾಕ್ಸ್ ಗಳನ್ನು ಸ್ಪ್ಯಾಮ್ ಮಾಡುತ್ತಿದ್ದಾರೆ. ಇದಕ್ಕೆ ಮೈಕ್ರೋಸಾಫ್ಟ್ ಹಿರಿಯ ಅಧಿಕಾರಿಗಳ ಹೆಸರನ್ನು ಬಳಸಲಾಗುತ್ತಿದೆ. ಒಂದಿಷ್ಟು ಸಂಶಯ ಬರದಂತೆ ಮೈಕ್ರೋಸಾಫ್ಟ್ ಲೆಟರ್ ಹೆಡ್ ಮೂಲಕ ಈ ಇಮೇಲ್ ಗಳು ಹರಿದಾಡುತ್ತಿದೆ. ಸೈಬರ್ ಕ್ರಿಮಿನಲ್ ಗಳು ತುಂಬಾ ಚತುರತೆಯಿಂದ ಗ್ರಾಹಕರನ್ನು ಬಲೆಗೆ ಕೆಡವುತ್ತಿದ್ದಾರೆ ಎಂದು ಸೊಫೊಸ್ ನ ಹಿರಿಯ ತಂತ್ರಜ್ಞಾನ ಸಲಹೆಗಾರ ಗ್ರಹಾಮ್ ಕ್ಲೂಲೆ ಹೇಳಿದ್ದಾರೆ. ಒಟ್ಟಿನಲ್ಲಿ, ವಿಂಡೋಸ್ ಗೆ ಅಂಟಿದ ದೋಷದ ದೆಶೆಯಿಂದ ಜನ ಫೈರ್ ಫಾಕ್ಸ್ ಅನ್ನು ಬೈಯುವಂತಾಗುತ್ತಿದೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications