ಭ್ರಷ್ಟಾಚಾರದ ವಿರುದ್ಧ ಬೆಂಗಳೂರಿನಲ್ಲೂ ಜನಸಾಗರ

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೆಳಗ್ಗೆ ಒಂಬತ್ತು ಗಂಟೆಗೆ ಸುಮಾರು 100 ಜನರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ನಂತರ ಸತ್ಯಾಗ್ರಹದಲ್ಲಿ ಪಾಲ್ಗೊಂಡವರ ಸಂಖ್ಯೆ ಏರುತ್ತ ಸಾಗಿತ್ತು. ದೇಶದಲ್ಲಿ ಒಟ್ಟಾರೆ ನಿನ್ನೆ ನಡೆದ ಉಪವಾಸ ಸತ್ಯಾಗ್ರದಲ್ಲಿ ಸುಮಾರು ಎರಡು ಸಾವಿರದಷ್ಟು ಜನರು ಭಾಗವಹಿಸಿ ಭ್ರಷ್ಟಾಚಾರದ ವಿರುದ್ಧ ಕಹಳೆ ಮೊಳಗಿಸಿದ್ದಾರೆ.
ಈ ಉಪವಾಸ ಸತ್ಯಾಗ್ರಹಕ್ಕೆ ಕೇವಲ ಬಾಬಾ ರಾಮದೇವ್ ಅವರ ಪತಂಜಲಿ ಯೋಗ ಸಮಿತಿ ಮಾತ್ರ ಬೆಂಬಲ ಸೂಚಿಸಿಲ್ಲ. ಆರ್ಎಸ್ಎಸ್, ಡಿಸ್ಕವರ್ ಇಸ್ಲಾಂ ಎಜ್ಯುಕೇಷನ್ ಟ್ರಸ್ಟ್, ಇಂಡಿಯನ್ ಮುಸ್ಲಿಂ ಪೋರಮ್ ಫಾರ್ ಪೀಸ್ ಮತ್ತು ಎಬಿವಿಪಿ ಸಂಘಟನೆಗಳು ಬೆಂಬಲ ನೀಡಿದ್ದವು.












Click it and Unblock the Notifications