ಭ್ರಷ್ಟರ ಬಗ್ಗೆ ಮಾಹಿತಿ ನೀಡುವವರಿಗೆ ಮಹಾ ಬಹುಮಾನ

ಮಾಹಿತಿ ನೀಡುವವರನ್ನು ದಾಳವಾಗಿ ಬಳಸಿಕೊಂಡು ಸರಕಾರಿ ಅಧಿಕಾರಿಗಳ ಬಳಿಯಲ್ಲಿ ಜಮಾವಣೆಗೊಂಡಿರುವ ಅಕ್ರಮ ಸಂಪತ್ತು ಮತ್ತು ಭ್ರಷ್ಟಾಚಾರವನ್ನು ಬುಡ ಸಮೇತ ಕಿತ್ತುಹಾಕಲು ನಿರ್ಧರಿಸಬೇಕು ಎನ್ನುವ ಹಿರಿಯ ಬಿಜೆಪಿ ನಾಯಕ ಓಂ ಪ್ರಕಾಶ್ ಶರ್ಮಾ ಅವರ ಮಾತಿಗೆ ಪೂರಕವಾಗಿರುವ ಆರ್ ಟಿಐ ಪ್ರಶ್ನೆಗೆ ಗೃಹ ಇಲಾಖೆ ಉತ್ತರಿಸಿದೆ.
25 ಲಕ್ಷ ರು. ವರೆಗಿನ ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಿದವರಿಗೆ 10 ಸಾವಿರ ರು. ನಗದನ್ನು ಬಹುಮಾನವಾಗಿ ನೀಡಲಾಗುವುದು. 25 ಲಕ್ಷದಿಂದ 50 ಲಕ್ಷ ರು. ವರೆಗಿನ ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಿದವರಿಗೆ 25 ಸಾವಿರ ರು. ಬಹುಮಾನ, 50 ಲಕ್ಷ ರು. ಗಳಿಂದ 1 ಕೋಟಿ ರು. ವರೆಗೆ ಭ್ರಷ್ಟಾಚಾರವನ್ನು ಪತ್ತೆಮಾಡಿದವರಿಗೆ 50 ಸಾವಿರ ರು. ಮತ್ತು 1 ಕೋಟಿ ರು. ಗಳಿಂದ 5 ಕೋಟಿ ರು.ಗಳ ವರೆಗೆ ಭ್ರಷ್ಟಾಚಾರ ಪತ್ತೆ ಮಾಡಿದವರಿಗೆ 1 ಲಕ್ಷ ರು. ಹಾಗೂ 5 ಕೋ. ರು. ಗಿಂತ ಹೆಚ್ಚು ಅಕ್ರಮ ಸಂಪತ್ತನ್ನು ಹೊಂದಿರುವವರ ಬಗ್ಗೆ ಮಾಹಿತಿ ನೀಡಿದವರಿಗೆ 2 ಲಕ್ಷ ರು. ನಗದನ್ನು ನೀಡಿ ಗೌರವಿಸಲಾಗುವುದು ಎಂದು ಗೃಹ ಇಲಾಖೆ ತಿಳಿಸಿದೆ.












Click it and Unblock the Notifications