ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಅಶೋಕ್‌ ವಿರುದ್ಧ ಭೂ ಕಬಳಿಕೆ ಯತ್ನ ಆರೋಪ

By Srinath
|
Google Oneindia Kannada News

R. Ashok
ಬೆಂಗಳೂರು, ಮೇ 24: ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಭುವನೇಶ್ವರಿ ನಗರದಲ್ಲಿನ ಗಂಗಮ್ಮ ದೇವಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಅರಣ್ಯ ಭೂಮಿಯನ್ನು ಕಬಳಿಸಲು ಸಚಿವ ಆರ್‌. ಅಶೋಕ್‌ ಯತ್ನಿಸಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಡಾ. ಬಿ. ಗುರಪ್ಪ ನಾಯ್ಡು ಆರೋಪಿಸಿದ್ದಾರೆ.

ಸಚಿವರು ಗಂಗಮ್ಮದೇವಿ ಜಾತ್ರಾ ಮಹೋತ್ಸವ ನೆಪದಲ್ಲಿ ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿದ್ದು, ಇದಕ್ಕೆ ಅವರ ಬೆಂಬಲಿಗರಾದ ಬಿಬಿಎಂಪಿ ಸದಸ್ಯರು ನೆರವಾಗುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಪದ್ಮನಾಭ ನಗರದ ಶಾಸಕರೂ ಆಗಿರುವ ಸಚಿವ ಅಶೋಕ್‌ ಅವರಿಗೆ ಭೂ ಕಬಳಿಕೆ ವಿಚಾರ ಗೊತ್ತಿದ್ದರೂ ಮೌನವಾಗಿ ಉಳಿಯುವ ಮೂಲಕ ಈ ಅಕ್ರಮಕ್ಕೆ ಸಹಕರಿಸುತ್ತಿದ್ದಾರೆ. ಅಲ್ಲದೆ, ಇದರಲ್ಲಿ ಅವರಿಗೂ ಪಾಲು ಇರುವ ಸಂಶಯವಿದೆ ಎಂದು ಹೇಳಿದರು.

ಗಂಗಮ್ಮ ದೇವಿ ದೇವಾಲಯವು ಅರಣ್ಯ ಇಲಾಖೆಗೆ ಸೇರಿದ ಪ್ರದೇಶದಲ್ಲಿದೆ. ಈ ಪ್ರದೇಶವನ್ನು ಕಬಳಿಸಲು ದೇವಿ ಜಾತ್ರೆಯನ್ನು ಸಚಿವರು ಹಾಗೂ ಅವರ ಬೆಂಬಲಿಗರು ಆಯೋಜಿಸಿ ಈ ಜಾಗದ ಮೇಲೆ ಹತೋಟಿ ಹೊಂದಲು ಯತ್ನಿಸುತ್ತಿದ್ದಾರೆ. ಸಚಿವರ ನಡವಳಿಕೆ ಕ್ಷೇತ್ರದ ಜನರಲ್ಲಿ ಸಂಶಯ ಹುಟ್ಟಿಸಿದೆ ಎಂದು ಅವರು ದೂರಿದರು.

English summary
Karnataka Pradesh Congress Committee member Dr. B Gurappa Nnaidu on Monday (May 23) alleged that the state Home and Transport Minister R. Ashok has illegally acquired land in south Bangalore. He alleged and contended that this was a case of a minister "misusing" his powers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X