Get Updates
Get notified of breaking news, exclusive insights, and must-see stories!

ಸಚಿವ ಅಶೋಕ್‌ ವಿರುದ್ಧ ಭೂ ಕಬಳಿಕೆ ಯತ್ನ ಆರೋಪ

R. Ashok
ಬೆಂಗಳೂರು, ಮೇ 24: ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಭುವನೇಶ್ವರಿ ನಗರದಲ್ಲಿನ ಗಂಗಮ್ಮ ದೇವಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಅರಣ್ಯ ಭೂಮಿಯನ್ನು ಕಬಳಿಸಲು ಸಚಿವ ಆರ್‌. ಅಶೋಕ್‌ ಯತ್ನಿಸಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಡಾ. ಬಿ. ಗುರಪ್ಪ ನಾಯ್ಡು ಆರೋಪಿಸಿದ್ದಾರೆ.

ಸಚಿವರು ಗಂಗಮ್ಮದೇವಿ ಜಾತ್ರಾ ಮಹೋತ್ಸವ ನೆಪದಲ್ಲಿ ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿದ್ದು, ಇದಕ್ಕೆ ಅವರ ಬೆಂಬಲಿಗರಾದ ಬಿಬಿಎಂಪಿ ಸದಸ್ಯರು ನೆರವಾಗುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಪದ್ಮನಾಭ ನಗರದ ಶಾಸಕರೂ ಆಗಿರುವ ಸಚಿವ ಅಶೋಕ್‌ ಅವರಿಗೆ ಭೂ ಕಬಳಿಕೆ ವಿಚಾರ ಗೊತ್ತಿದ್ದರೂ ಮೌನವಾಗಿ ಉಳಿಯುವ ಮೂಲಕ ಈ ಅಕ್ರಮಕ್ಕೆ ಸಹಕರಿಸುತ್ತಿದ್ದಾರೆ. ಅಲ್ಲದೆ, ಇದರಲ್ಲಿ ಅವರಿಗೂ ಪಾಲು ಇರುವ ಸಂಶಯವಿದೆ ಎಂದು ಹೇಳಿದರು.

ಗಂಗಮ್ಮ ದೇವಿ ದೇವಾಲಯವು ಅರಣ್ಯ ಇಲಾಖೆಗೆ ಸೇರಿದ ಪ್ರದೇಶದಲ್ಲಿದೆ. ಈ ಪ್ರದೇಶವನ್ನು ಕಬಳಿಸಲು ದೇವಿ ಜಾತ್ರೆಯನ್ನು ಸಚಿವರು ಹಾಗೂ ಅವರ ಬೆಂಬಲಿಗರು ಆಯೋಜಿಸಿ ಈ ಜಾಗದ ಮೇಲೆ ಹತೋಟಿ ಹೊಂದಲು ಯತ್ನಿಸುತ್ತಿದ್ದಾರೆ. ಸಚಿವರ ನಡವಳಿಕೆ ಕ್ಷೇತ್ರದ ಜನರಲ್ಲಿ ಸಂಶಯ ಹುಟ್ಟಿಸಿದೆ ಎಂದು ಅವರು ದೂರಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+