ಹೆದರಬೇಡಿ, ಜಗತ್ ಪ್ರಳಯ ದಿನಾಂಕ ಮುಂದೂಡಲಾಗಿದೆ

ಹೀಗಂತ ಭವಿಷ್ಯ ನುಡಿದವನು ಕ್ಯಾಲಿಫೋರ್ನಿಯಾದ ಚರ್ಚ್ ಪಾದ್ರಿ ಹೆರಾಲ್ಡ್ ಕಾಂಮ್ನಿಗ್. ಆತನಿಗೆ ಲೆಕ್ಕವಿಲ್ಲದಷ್ಟು ಬೆಂಬಲಿಗರು, ಅನುಯಾಯಿಗಳಿದ್ದಾರೆ. ಅವರೆಲ್ಲ ನಂಬಿಬಿಟ್ಟರು. ರಕ್ಷಕನಾದ ಕ್ರೈಸ್ತ ಜೀವಜಗತ್ತನ್ನು ಕಾಪಾಡಲೆಂದು ಇಂದು ಅವತರಿಸಿ ಬರಲಿದ್ದಾನೆ ಎಂದು ಕ್ರೈಸ್ತ ಸಮೂಹ ಕಾದು ಕುಳಿತಿತ್ತು
ಎಚ್ಚರಿಕೆ ಇಂದು ಜಗತ್ತೇ ಅಂತ್ಯವಾಗುತ್ತದೆ ಎಂದು ರೆಡಿಯೊ, ಟಿವಿ ಬಿತ್ತರಿಸಲಾರಂಬಿಸಿತ್ತು. ಸಾಯುತ್ತೇವೆ ಎಂದು ಭಾವಿಸಿ ಎಲ್ಲಾ ಮುಗಿಸಿ ಕುಳಿತ್ತಿದ್ದವರಿಗೆ ಅಚ್ಚರಿಯಾಗಿತ್ತು. ಯಾಕೆಂದರೆ ಮೇ 21 ಎಂದಿನಂತೆ ಮುಗಿದಿತ್ತು. [ಓದಿ: ಮೇ 21 : ಪ್ರಳಯ, ಕ್ರಿಸ್ತನ ನಿರೀಕ್ಷೆಯಲ್ಲಿ ಅಮೆರಿಕ!]
ಒಂದು ಕಡೆ ಬದುಕಿದೆ ಬಡಜೀವವೇ ಎಂಬ ನೆಮ್ಮದಿ. ಮತ್ತೊಂದೆಡೆ ಪಾದ್ರಿಯ ಮೇಲಿರುವ ನಂಬಿಕೆ. ಆದರೂ ಆತನ ಬಳಿ ಹೆಚ್ಚಿನವರು ಬಂದು "ಏನ್ ಸ್ವಾಮಿ, ಭೂಮಿ ಅದೇ ರೀತಿ ಇದೆಯಲ್ವ" ಅಂತ ಪ್ರಶ್ನಿಸಿದ್ದಾರೆ. ತಕ್ಷಣ ಆತ ಬೈಬಲ್, ಗ್ರಂಥಗಳನ್ನು, ಹಳೆಯ ರದ್ದಿ ಪುಸ್ತಕದಲ್ಲಿ ಟಿಕ್ ಮಾಡಿಟ್ಟಿದ್ದ ಅಂಕಿ ಅಂಶಗಳ ಪುನರ್ ಅವಲೋಕನ ಮಾಡಿದ್ದಾನೆ.
ಇನ್ನೇನೂ ಕಾದಿದೆಯೋ ಅಂತ ಆತನ ಬೆಂಬಲಿಗರು, ಅನುಯಾಯಿಗಳು ಆತನ ಮುಂದೆ ತಲೆ ಬಗ್ಗಿಸಿಕುಳಿತಿದ್ದರು. ಇಂದು ಆತ ಮತ್ತೆ ಬಾಯಿ ತೆರೆದಿದ್ದಾನೆ. ಜಗತ್ತಿನ ದೊಡ್ಡ ವರ್ಗವೊಂದು ಆತನ ಬ್ರಹ್ಮಾಂಡ ಬಾಯಿಂದ ಬಿದ್ದ ಸುದ್ದಿ ಕೇಳಿ ಬಿದ್ದುಬಿದ್ದು ನಕ್ಕಿದ್ದಾರೆ.
ಇದೀಗ ಬಂದ ಸುದ್ದಿ ಪ್ರಕಾರ, ಈ ಪ್ರಳಯವನ್ನು ಮುಂದೂಡಲಾಗಿದೆ. ಹಾಗಂತ ಹೆರಾಲ್ಡ್ ಪ್ರಕಟಿಸಿದ್ದಾನೆ. ಹೊಸ ದಿನಾಂಕ ಯಾವುದು ಅಂದ್ರೆ "ಅಕ್ಟೋಬರ್ 21" ಅಂತೆ. ಮತ್ತೆ ಸಾವಿನ ಭಯದಲ್ಲಿ ಹೆಚ್ಚಿನವರು ಮತ್ತೆ ಸಾಮೂಹಿಕ ಪ್ರಾರ್ಥನೆ ಆರಂಭಿಸಿದ್ದಾರೆ.
ಈತ ಪ್ರಳಯ ಭವಿಷ್ಯ ನುಡಿಯುತ್ತಿರುವುದು ಇದು ಮೊದಲಲ್ಲ. 1994ರಲ್ಲಿ ಈ ಕುರಿತು ವಿಶ್ವ ಅಂತ್ಯವಾಗುವ ಕುರಿತು ಪುಸ್ತಕವೊಂದನ್ನು ಬರೆದಿದ್ದ. ಈತನಿಗೆ 89 ವರ್ಷ ವಯಸ್ಸಾಗಿರುವುದರಿಂದ ಹೆಚ್ಚು ವರ್ಷ ಜನರು ಪ್ರಳಯ ಭೀತಿಯಲ್ಲಿ ಕಳೆಯಬೇಕಿಲ್ಲ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications