ಅಧಿವೇಶನಕ್ಕೆ ಅಸ್ತು; ರಾಜ್ಯಪಾಲರ ವಾಪಸ್ ಗೆ ಆಗ್ರಹ

ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಶಿಫಾರಸು ಮಾಡಿ ರಾಜ್ಯಪಾಲರು ಈ ತಿಂಗಳ 16ರಂದು ಕಳುಹಿಸಿದ್ದ ವಿಶೇಷ ವರದಿಯನ್ನು ಕೇಂದ್ರ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ತಾವು ಬಿಜೆಪಿ ಪಕ್ಷದ ವರಿಷ್ಠರು, ಗವರ್ನರ್ ಮತ್ತು ಕೇಂದ್ರ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಯಡಿಯೂರಪ್ಪ ಅವರು ಇಂದು ಸಂಜೆ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ರಾಜ್ಯಪಾಲರ ಶಿಫಾರಸನ್ನು ಮಾನ್ಯ ಮಾಡದೆ ಜನಾದೇಶ ಸರಕಾರ ಮುಂದುವರಿಕೆಗೆ ಕೇಂದ್ರ ಸರಕಾರ ಅನುವು ಮಾಡಿಕೊಟ್ಟಿರುವುದು ಪ್ರಜಾತಂತ್ರಕ್ಕೆ ಸಂದ ಜಯ ಎಂದು ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಪ್ರತಿಪಕ್ಷಗಳು ರಾಜ್ಯದ ಅಭಿವೃದ್ಧಿಗೆ ಮಾರಕವಾಗುವ ಇಂತಹ ಪಿತೂರಿಗಳಿಂದ ದೂರವುಳಿಯುವಂತಾಗಲಿ ಎಂದು ಅವರು ಆಶಿಸಿದರು.












Click it and Unblock the Notifications