ಬಾಬಾ ಸಾವಿಗೆ ಆಸ್ಪತ್ರೆ ವಾಸ್ತು ದೋಷ ಕಾರಣ

ಬಡವರಿಗೆ ಕಷ್ಟಕಾಲದಲ್ಲಿ ನೆರವಾಗಲೆಂದು ಬಾಬಾ ಅವರು 1991ರಲ್ಲಿ 80 ಎಕರೆ ಸುವಿಶಾಲ ಪ್ರದೇಶದಲ್ಲಿ 220 ಹಾಸಿಗೆಯುಳ್ಳ ಶ್ರೀ ಸತ್ಯ ಸಾಯಿಬಾಬಾ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (SSSIHMS) ನಿರ್ಮಿಸಿದರು.
'ಈ ಆಸ್ಪತ್ರೆಗೆ ವಾಸ್ತು ದೋಷವಿದೆ ಎಂದು ಆರಂಭದಿಂದಲೂ ನಮಗೆ ಅನಿಸುತ್ತಿದೆ. ಅದು ಬಾಬಾ ಸಾವಿನೊಂದಿಗೆ ಮತ್ತೆ ರುಜುವಾತಾಗಿದೆ. ಬೇರೆ ಇನ್ಯಾವುದಾದರೂ ಆಸ್ಪತ್ರೆಗೆ ಅಥವಾ ಬೆಂಗಳೂರಿನಲ್ಲಿ ಅವರೇ ನಿರ್ಮಿಸಿರುವ ವೈಟ್ ಫೀಲ್ಡ್ ಆಸ್ಪತ್ರೆಗಾದರೂ ವರ್ಗಾಯಿಸುವಂತೆ ಎಂದು ಅವರನ್ನು ನೋಡಿಕೊಳ್ಳುತ್ತಿದ್ದ ವೈದ್ಯ ತಂಡವನ್ನು ಈ ಒಂದು ತಿಂಗಳಲ್ಲಿ ಪರಿಪರಿಯಾಗಿ ಕೇಳಿಕೊಂಡೆವು. ಆದರೆ ಎಲ್ಲ ನಿಷ್ಫಲವಾಗಿದೆ' ಬಾಬಾ ಕುಟುಂಬದ ಆಪ್ತ ನೆಂಟರೊಬ್ಬರು ಹೇಳಿದ್ದಾರೆ.
ಬಾಬಾ ಭಾನುವಾರ ಬೆಳಗ್ಗೆ 7.40ಕ್ಕೆ ಇಹಲೋಕ ತ್ಯಜಿಸುತ್ತಿದ್ದಂತೆ ಅವರನ್ನು ಬಂದು ನೋಡಿಕೊಂಡು ಹೋಗಲು ಬಾಬಾ ಬಂಧುವರ್ಗಕ್ಕೆ ವೈದ್ಯ ತಂಡ ಸೂಚಿಸಿತ್ತು. 'ವಿಧಿಯಿಲ್ಲದೆ ನಾವು ಇಲ್ಲಿಗೆ ಬಂದಿದ್ದೇವೆ. ಆಸ್ಪತ್ರೆಯಲ್ಲಿ ಅನೇಕ ನಕಾರಾತ್ಮಕ ಅಂಶಗಳಿವೆ. ಆದರೆ ನಮ್ಮ ಮಾತಿಗೆ ಯಾರೂ ಕಿವಿಗೊಡುತ್ತಿಲ್ಲ' ಎಂದು ಆ ನೆಂಟರು ಅಲವತ್ತುಕೊಂಡರು.
ವಾಸ್ತು ದೋಷದ ಇತಿಹಾಸ: ಸಾಯಿಬಾಬಾ ಹಿರಿಯಣ್ಣ ರತ್ನಂ ಶೇಷ ರಾಜು 1984ರಲ್ಲಿ ಸಾವಿಗೀಡಾದರು. ಸಾಯಿಬಾಬಾ ಸೋದರ ಸಂಬಂಧಿಗಳ ಪೈಕಿ ಎರಡನೆಯವರಾದ ವೆಂಕಮ್ಮ1993ರಲ್ಲಿ ಅಸುನೀಗಿದರು. ಬಾಬಾ ಅವರ ಎರಡನೆಯ ಸೋದರಿ ಪಾರ್ವತಮ್ಮ ನಾಲ್ಕು ವರ್ಷಗಳ ಬಳಿಕ ಮೃತಪಟ್ಟರು. 2003ರಲ್ಲಿ ಬಾಬಾ ತಮ್ಮಜಾನಕಿರಾಮಯ್ಯ ಸಹ ನಿಧನರಾದರು. ಇವರೆಲ್ಲ ಇದೇ ಆಸ್ಪತ್ರೆಯಲ್ಲಿ ಸಾವಿಗೀಡಾಗಿರುವುದು ಶೋಚನೀಯ. ಇಷ್ಟೇ ಅಲ್ಲ. ಬಾಬಾ ಅವರ ದೂರದ ಸಂಬಂಧಿಗಳ ಪೈಕಿ ಇನ್ನೂ ಅನೇಕ ಮಂದಿ ಇಲ್ಲಿ ಸಾವಿಗೀಡಾಗಿದ್ದಾರೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications