ರಾಜಧಾನಿಯಲ್ಲಿ 'ಕರಗದ' ಮಹೋತ್ಸವ

Dharmarayana Karaga
ಬೆಂಗಳೂರು, ಏಪ್ರಿಲ್ 18: ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಾಯನ ಕರಗಕ್ಕೆ ಕರ್ನಾಟಕದ ರಾಜಧಾನಿ ಶೃಂಗಾರಗೊಳ್ಳುತ್ತಿದೆ. ಮಲ್ಲಿಗೆಯ ಘಮ ಘಮ ಆಗಲೇ ಪಸರಿಸಿದೆ. ಹತ್ತಾರು ವರ್ಷಗಳಿಂದ ನಡೆದು ಬಂದ ಸಂಪ್ರದಾಯದಂತೆ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಇಂದು ಮಧ್ಯ ರಾತ್ರಿ (ಏಪ್ರಿಲ್ 18) ಹೂವಿನ ಕರಗ ತಿಗಳರ ಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಟು, ಸುತ್ತಮುತ್ತಲ ಪ್ರದೇಶಗಳಲ್ಲಿ 12 ಕಿ.ಮೀ. ಸಂಚರಿಸಿ ಮಂಗಳವಾರ ಬೆಳಗ್ಗೆ 6 ಗಂಟೆಗೆ ವಾಪಸಾಗಲಿದೆ. ಅಂದಹಾಗೆ, ಇಂದು ಬೆಂಗಳೂರು ಸಂಸ್ಥಾಪನಾ ದಿನವೂ ಹೌದು.

ಚೈತ್ರ ಹುಣ್ಣಿಮೆಯ ದಿನ ನಡೆಯುವ ಕರಗದ ವೀಕ್ಷಣೆಗೆ ಬೆಂಗಳೂರಿಗರ ಜತೆಗೆ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ. ಕರಗ ಮಹೋತ್ಸವ 11 ದಿನಗಳ ಆಚರಣೆಯದ್ದಾಗಿದೆ. ಚೈತ್ರ ಶುಕ್ಲ ಸಪ್ತಮಿಯಿಂದ ಆರಂಭವಾಗಿ ಬಿದಿಗೆಯವರೆಗೆ. ಅಂದರೆ ಇಂದು ಕೊನೆಯ ದಿನ. ರಾತ್ರಿ ಆಚರಣೆ ಇದರ ವಿಶೇಷ.

ಕರಗ ಹೊತ್ತವರ ಅಕ್ಕ-ಪಕ್ಕ ಇರುವ ವೀರಕುಮಾರರು ಗೋವಿಂದಾ, ಗೋವಿಂದಾ ಎನ್ನುವುದು ಎಂಥವರಲ್ಲೂ ಭಕ್ತಿ-ಭಾವ ಹೊಮ್ಮಿಸುತ್ತದೆ. ಶ್ರದ್ಧೆ ಮತ್ತು ಭಕ್ತಿಯ ಪರಾಕಾಷ್ಠೆಯಲ್ಲಿ ಕೂಡಿದ ಈ ಮಹೋತ್ಸವದಲ್ಲಿ ದ್ರೌಪದಿಯ ಮೂರ್ತಿಯನ್ನು ಹೊತ್ತುಕೊಳ್ಳುವ ಗೌರವ ಈ ಬಾರಿಯೂ ಸಿ.ಎಂ. ಲೋಕೇಶ್ ಅವರದ್ದಾಗಿದೆ.

ಕೇಂಪೇಗೌಡರ 500ನೇ ಜಯಂತ್ಯುತ್ಸವ: ತಳಿರು ತೋರಣಗಳಿಂದ ಅಲಂಕೃತಗೊಂಡ ಕಟ್ಟಡಗಳು, ಎಲ್ಲೆಡೆ ರಾರಾಜಿಸುತ್ತಿರುವ ಬಾವುಟಗಳು, ಝಗಮಗಿಸುವ ವಿದ್ಯುತ್ ದೀಪಾಲಂಕಾರ, ಎಲ್ಲೆಲ್ಲೂ ಕೆಂಪೇಗೌಡ ಭಾವಚಿತ್ರಗಳ ಮಿಂಚು, ಒಟ್ಟಾರೆ ಹಬ್ಬದ ವಾತಾವರಣ. ಇದು ನಾಡಪ್ರಭು ಕೆಂಪೇಗೌಡರ ದಿನಾಚರಣೆಗೆ ಅದ್ದೂರಿಯಾಗಿ ಸಿಂಗಾರಗೊಂಡಿರುವ ಬೆಂಗಳೂರು ನಗರದ ಇಂದಿನ ಝಲಕ್. ಇದಕ್ಕೆ ಪುಟವಿಟ್ಟಂತೆ ಇಂದು ಧರ್ಮರಾಯನ ಕರಗವೂ ಮಿಳಿತವಾಗಿದೆ.

ಬಿಬಿಎಂಪಿ ಅಸ್ತಿತ್ವಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಕೆಂಪೇಗೌಡರ ದಿನಾಚರಣೆ ನಡೆಯುತ್ತಿದೆ. ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಭಾನುವಾರ ಸಂಜೆ ಮೇಯರ್ ಎಸ್.ಕೆ. ನಟರಾಜ್ ಅವರು ಕೇಂಪೇಗೌಡ ದಿನಾಚರಣೆಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ, ಐಟಿ-ಬಿಟಿ ಕ್ಷೇತ್ರದಲ್ಲಿನ ಅಂತಾರಾಷ್ಟ್ರೀಯ ಮಟ್ಟದ ಬೆಳವಣಿಗೆಯ ಸಮ್ಮುಖದಲ್ಲಿ ನಗರದ ಐತಿಹಾಸಿಕ ಪರಂಪರೆ ಎತ್ತ ಸಾಗಿದೆ ಎಂಬ ಪ್ರಶ್ನೆ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+