Get Updates
Get notified of breaking news, exclusive insights, and must-see stories!

ಸಿಬಿಐನಿಂದ ಓಎಂಸಿ ಅದಿರಿನ ಗುಣಮಟ್ಟ ಪರೀಕ್ಷೆ

Central Bureau of Investigation
ಬಳ್ಳಾರಿ, ಏ. 7 : ಆಂಧ್ರ - ಕರ್ನಾಟಕದಲ್ಲಿಯ ಗಡಿಭಾಗದಲ್ಲಿ ಇರುವ ಓಬಳಾಪುರಂ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಗಣಿ ಪ್ರದೇಶಗಳಿಗೆ ಮತ್ತು ಗಣಿ ಗುತ್ತಿಗೆಯ ಕಂಪನಿಗಳ ಕಚೇರಿಗಳಿಗೆ ಸಿಬಿಐ ಅಧಿಕಾರಿಗಳ ತಂಡ ಗುರುವಾರ ಬೆಳಿಗ್ಗೆ 7 ಗಂಟೆಗೆ ಭೇಟಿ ನೀಡಿದೆ. ನಿನ್ನೆ ರಾತ್ರಿಯೇ ಆಗಮಿಸಿದ ಸಿಬಿಐ ತಂಡ ಬಳ್ಳಾರಿಯಲ್ಲಿ ಬೀಡುಬಿಟ್ಟಿತ್ತು.

ಮೂಲಗಳ ಪ್ರಕಾರ, ಹೈದರಾಬಾದ್‌ನಿಂದ ಆಗಮಿಸಿರುವ ಸಿಬಿಐ ಅಧಿಕಾರಿಗಳ ತಂಡ ಗುರುವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆಗೆ ಇಳಿದಿದೆ. ಗಡಿ ಪ್ರದೇಶದಲ್ಲಿ ಇರುವ ವಿವಾದಿತ ಆರು ಗಣಿ ಪ್ರದೇಶಗಳಿಗೆ ಮತ್ತು ಕಂಪನಿಗಳಿಗೆ ತಂಡ ಭೇಟಿ ಮಾಡಲಿದೆ ಎನ್ನಲಾಗಿದೆ.

ಈ ತಂಡದಲ್ಲಿ ಸಿಬಿಐ ತನಿಖಾ ಅಧಿಕಾರಿಗಳ ಜೊತೆಯಲ್ಲಿ ಸಿಂಗರೇನಿ ಕಾಲರೀಸ್ ಕಲ್ಲಿದ್ದಲು ಗಣಿ ಕಂಪನಿಯ ಜಿಯಾಲಜಿಸ್ಟ್ ಕೂಡ ಇರಲಿದ್ದು, ತಂಡದ ಸದಸ್ಯರು ವಿವಾದಿತ ಗಣಿಗಳಲ್ಲಿಯ ಕಬ್ಬಿಣದ ಅದಿರಿನ ಗುಣಮಟ್ಟ ಪರೀಕ್ಷೆಯನ್ನು ಎರಡನೇ ಬಾರಿ ನಡೆಸಲಿದ್ದಾರೆ. ಈ ಹಿಂದೆಯೇ ಒಮ್ಮೆ ಕಬ್ಬಿಣದ ಅದಿರಿನ ಗ್ರೇಡ್ ಪರೀಕ್ಷೆ ನಡೆದಿತ್ತು.

ಆಂಧ್ರದ ಅನಂತಪುರಂನ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಟಿ.ವಿ. ಸುಬ್ಬಾರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜರೆಡ್ಡಿ ಮತ್ತು ವಲಯ ಅರಣ್ಯ ಸಂರಕ್ಷಣಾಧಿಕಾರಿ ಕೆ. ನಾರಾಯಣಸ್ವಾಮಿ ನಾಯ್ಡು ಅವರು ತನಿಖಾ ತಂಡಕ್ಕೆ ಅಗತ್ಯ ಮಾಹಿತಿ ನೀಡಲಿದ್ದಾರೆ. ಅದಿರಿನ ಗ್ರೇಡ್ ಪರೀಕ್ಷೆಯ ನಂತರ ಈ ತಂಡ ಕಂಪನಿಗಳ ಕಚೇರಿಗಳಿಗೆ ಭೇಟಿ ನೀಡಿ ದಾಖಲೆ ಪತ್ರಗಳನ್ನು ಪರಿಶೀಲಿಸಲಿದೆ ಎಂದು ಹೇಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+