ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಗಾರಪೇಟೆ: ಕಾಂಗ್ರೆಸ್ ಪ್ರಚಾರಕ್ಕೆ ಚಿರು

By Mahesh
|
Google Oneindia Kannada News

Chiranjeevi to campaign in Karnataka By election
ಬಂಗಾರಪೇಟೆ, ಏ.6: ರಾಜ್ಯದ ಮೂರು ಕ್ಷೇತ್ರದ ಉಪಚುನಾವಣೆ ಪ್ರಚಾರ ಕಾರ್ಯ ಬಿರುಸಿನಿಂದ ಸಾಗಿದ್ದು, ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಬಿಜೆಪಿ ಪರ ಡ್ರೀಮ್ ಗರ್ಲ್ ಹೇಮಮಾಲಿನಿ, ಸುದೀಪ್ ಪ್ರಚಾರ ಕಾರ್ಯಕ್ಕೆ ಇಳಿದಿದ್ದಾರೆ. ಇತ್ತ ತೆಲುಗು ಭಾಷಿಕರನ್ನು ಹೊಂದಿರುವ ಬಂಗಾರಪೇಟೆ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯ ತೋರಿಸಲು ಕಾಂಗ್ರೆಸ್ ಮುಂದಾಗಿದ್ದು, ಮೆಗಾ ಸ್ಟಾರ್ ಚಿರಂಜೀವಿ ಅವರನ್ನು ಪ್ರಚಾರ ಕಾರ್ಯಕ್ಕೆ ಇಳಿಸಲಿದೆ.

ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ಕೆ ಮುನಿಯಪ್ಪ ಅವರ ಆಹ್ವಾನದ ಮೇರೆಗೆ ಗುರುವಾರ ಚಿರಂಜೀವಿ ಅವರು ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಅವರ ಪರ ಮತಯಾಚಿಸಲಿದ್ದಾರೆ ಎಂದು ಪ್ರಜಾರಾಜ್ಯಂ ಪಾರ್ಟಿ ವಕ್ತಾರರು ಹೇಳಿದ್ದಾರೆ.

ಇತ್ತೀಚೆಗೆ ಚಿಕ್ಕಬಳ್ಳಾಪುರ ಮೂಲಕ ಅನಂತಪುರಕ್ಕೆ ಸಾಗಿದ್ದ ಚಿರಂಜೀವಿಗೆ ಅಭಿಮಾನಿಗಳು ಮುತ್ತಿಗೆ ಹಾಕಿ, ಜೈ ಕಾರ ಹಾಕಿದ್ದರು. ಕರ್ನಾಟಕದಲ್ಲೂ ಪ್ರಜಾರಾಜ್ಯಂ ಪಕ್ಷ ಅಧಿಕೃತ ಎಂಟ್ರಿ ಪಡೆಯಲಿದೆ ಎಂದು ಚಿರಂಜೀವಿ ಹೇಳಿದ್ದರು. ರಾಜ್ಯದ ಮೂರು ಕ್ಷೇತ್ರದಲ್ಲಿ ಪ್ರಜಾರಾಜ್ಯಂ ಸ್ಪರ್ಧೆ, ಸಿದ್ದರಾಮಯ್ಯ ಪ್ರಜಾರಾಜ್ಯಂ ಸೇರ್ಪಡೆ ಈ ರೀತಿ ಸುದ್ದಿ ಈ ಹಿಂದೆ ಹರಡಿತ್ತು.

ಗಡಿ ಭಾಗದ ಪ್ರದೇಶಗಳಲ್ಲಿ ತೆಲುಗು ಸ್ಟಾರ್ ಚಿರಂಜೀವಿ ಬಗ್ಗೆ ಜನರಿಗಿರುವ ಕ್ರೇಜ್ ನ ಲಾಭ ಪಡೆಯಲು ಕಾಂಗ್ರೆಸ್ ಉದ್ದೇಶಿಸಿದೆ. ಇತ್ತೀಚೆಗೆ ಕಾಂಗ್ರೆಸ್ ಪಕ್ಷದೊಡನೆ ಕೈ ಜೋಡಿಸಿರುವ ಪ್ರಜಾ ರಾಜ್ಯಂ ಪಕ್ಷದ ಅಧ್ಯಕ್ಷ ಕೆ ಚಿರಂಜೀವಿ, ಸ್ಟಾರ್ ಕ್ಯಾಂಪೇನರ್ ಆಗಿದ್ದಾರೆ.

ಸೋನಿಯಾ ಗಾಂಧಿ ಅವರ ಅಣತಿಯಂತೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಅಜಾದ್ ಅವರ ಯೋಜನೆಯಂತೆ ಸದ್ಯಕ್ಕೆ ತಮಿಳುನಾಡು ಅಸೆಂಬ್ಲಿ ಚುನಾವಣೆಗೆ ಚಿರಂಜೀವಿ ಸ್ಟಾರ್ ಪ್ರಚಾರಕರಾಗಿದ್ದಾರೆ. ಕಾಂಗ್ರೆಸ್ ಡಿಎಂಕೆ ಮೈತ್ರಿಯನ್ನು ಬೆಂಬಲಿಸುವಂತೆ ಓಟ್ ಕೇಳುತ್ತಿರುವ ಚಿರು, ನಾಳೆ ಬಂಗಾರಪೇಟೆ ಕಡೆ ಬಂದು ಕಾಂಗ್ರೆಸ್ ಗೆ ಓಟು ಕೊಡಿ ಎನ್ನಲಿದ್ದಾರೆ.

English summary
Praja Rajyam Party President, Cine Artist Chiranjeevi will be campaigning for the Congress party in the Karnataka by election 2011 to Bangarapet Assembly. constituency in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X