ಇದು ಮೊಬೈಲ್ ಕಳೆದುಕೊಂಡವರ ಕಥೆ ವ್ಯಥೆ

ಹೌದು, ಸಿಮ್ಯಾಂಟೆಕ್ ಎಂಬ ಸಂಸ್ಥೆ ನಡೆಸಿರುವ ಅಧ್ಯಯನದ ಪ್ರಕಾರ, ಶೇ. 53ರಷ್ಟು ಭಾರತೀಯರು ಒಂದಿಲ್ಲೊಂದು ಕಾರಣದಿಂದ, ಒಂದಿಲ್ಲೊಂದು ಹಂತದಲ್ಲಿ ಜೀವನದ ಅವಿಭಾಜ್ಯ ಅಂಗವೇ ಆಗಿರುವ ಮೊಬೈಲನ್ನು ಕಳೆದುಕೊಂಡಿರುತ್ತಾರೆ. ಇನ್ನೊಂದು ಕಳವಳಕಾರಿ ಸಂಗತಿಯೆಂದರೆ, ಇವರಲ್ಲಿ ಮೊಬೈಲ್ ಸೆಕ್ಯುರಿಟಿ ಬಗ್ಗೆ ತಲೆಕೆಡಿಸಿಕೊಳ್ಳುವವರು ಮತ್ತು ಕಳಕೊಂಡಿದ್ದನ್ನು ಹುಡುಕುವವರು ಶೇ.2ಕ್ಕಿಂತ ಕಡಿಮೆ!
ಕೆಲ ಮಾತುಗಳನ್ನು ಗಮನಿಸಿ
* ನಿನ್ ನಂಬರ್ ಕೊಡ್ತೀಯಾ, ಮೊಬೈಲ್ ಮೊನ್ನೆ ತಾನೆ ಕಳ್ಕೊಂಡೆ.
* 201 ರೂಟ್ ಬಸ್ಸಲ್ಲಿ ಹೋಗ್ತಿದ್ದೆ, ಯಾವ್ನೋ ಮೊಬೈಲ್ ಹೊಡ್ದಬಿಟ್ಟಾ.
* ಬಸ್ಸಲ್ಲಿ ಜೇಬಿಂದ ಹ್ಯಾಗೆ ಎತ್ತಿದ್ರೋ ಗೊತ್ತೇ ಆಗಲಿಲ್ಲ.
* ಆಟೋದಲ್ಲಿ ಹೋಗ್ತಿದ್ದೆ ಅಲ್ಲೆ ಬಿಟ್ಟುಬಿಟ್ಟೆ ಅಂತ ಕಾಣತ್ತೆ, ಕಾಲ್ ಮಾಡಿದ್ರೆ ಸ್ವಿಚ್ ಆಫ್ ಆಗಿದೆ.
* ಮಗು ಕೈಯಲ್ಲಿ ಕೊಟ್ಟಿದ್ದೆ, ಎಲ್ಲೋ ಕಳೆದುಹಾಕಿಬಿಟ್ಟ.
* ಹೆಂಡ್ತೀನ್ ಕಳ್ಕೊಂಡ್ರೂ ಇಷ್ಟು ಬೇಜಾರಾಗ್ತಾ ಇರಲಿಲ್ಲ ಕಣ್ಲಾ!
ಇಂಥ ಮಾತುಗಳನ್ನು ಸಂಬಂಧಿಕರೊಂದಿಗೆ ಮಾತಾಡುವಾಗ, ಸ್ನೇಹಿತರೊಂದಿಗೆ ಹರಟುವಾಗ ಕೇಳಿಯೇ ಇರುತ್ತೀರಿ. ಮತ್ತೊಂದು ಆಶ್ಚರ್ಯಕರ ಸಂಗತಿಯೆಂದರೆ, ಮೊಬೈಲ್ ಕಳಕೊಂಡ ಶೇ. 75ರಷ್ಟು ಜನ ಮೊಬೈಲ್ ಹುಡುಕುವುದನ್ನು ನಿಂತಲ್ಲಿಯೇ ಬಿಟ್ಟುಬಿಟ್ಟಿರುತ್ತಾರೆ. ಮೊಬೈಲ್ ಹೋಯ್ತೆಂದು ಚೀರಾಡುವುದು, ಬಾಯಿಗೆ ಬಂದಂತೆ ಬೈಯುವುದು ಬಿಟ್ಟು ಮೊಬೈಲ್ ಹುಡುಕುವುದಕ್ಕೆ, ನಂಬರ್ ಲಾಕ್ ಮಾಡಿಸುವುದಕ್ಕೆ ಪ್ರಯತ್ನ ಮಾಡುವುದೇ ಇಲ್ಲ. ಅಸಲಿಗೆ, ಇದನ್ನು ಹೇಗೆ ಮಾಡಿಸಬೇಕೆಂದು ಅನೇಕರಿಗೆ ಗೊತ್ತಿರುವುದಿಲ್ಲ. ಅಂಗಡಿಯವರೇ ಇನ್ಶೂರೆನ್ಸ್ ಮಾಡಿಸಿಕೊಟ್ಟಿದ್ದರೆ ಸರಿ, ಇಲ್ಲದಿದ್ದರೆ ಮೊಬೈಲ್ ಇನ್ಶೂರೆನ್ಸ್ ಮಾಡಿಸುವ ಬಗ್ಗೆ ತಲೆಯನ್ನೂ ಕೆಡಿಸಿಕೊಂಡಿರುವುದಿಲ್ಲ.
ಎದ್ದ ಕೂಡಲೆ ದೇವರ ಫೋಟೋ ನೋಡುವ ಮುನ್ನ ಗರ್ಲ್ ಫ್ರೆಂಡ್ ಳಿಂದ ಎಸ್ಎಮ್ಎಸ್ ಏನು ಬಂದಿದೆ ಎಂದು ನೋಡುವವರಿದ್ದಾರೆ. ಮೊಬೈಲಲ್ಲಿ ಮಾತಾಡುತ್ತ ತಿಂಡಿ ತಿನ್ನುವುದನ್ನೇ ಮರೆತವರಿರುತ್ತಾರೆ. ರಸ್ತೆಯಲ್ಲಿ ಹೋಗುವಾಗಲೇ ಇಂಟರ್ ವ್ಯೂ ಅಟೆಂಡ್ ಆಗಿ ಕೆಲಸ ಗಿಟ್ಟಿಸಿಕೊಂಡವರಿದ್ದಾರೆ. ಮಾತಾಡ್ ಮಾತಾಡುತ್ತಲೇ ಪಕ್ಕದಲ್ಲೇ ಬಡಪಾಯಿ ಗಂಡ ಇದ್ದಾನೆ ಎನ್ನುವುದನ್ನೂ ಮರೆತವರಿರುತ್ತಾರೆ. ಇನ್ನು ಟಾಯ್ಲೆಟ್ಟಿಗೂ ಸಂಗಾತಿಯಾಗಿ ಬರುವ ಮೊಬೈಲ್ ಫೋನನ್ನು ಕಳೆದುಕೊಂಡರೆ ಹೇಗಾಗಿರಬೇಡ?
ಅಧ್ಯಯನದ ಪ್ರಕಾರ
* ಶೇ.77ರಷ್ಟು ಜನ ಅಮೂಲ್ಯವಾದ ಮಾಹಿತಿ ಕಳೆದುಹೋಗಿದ್ದು ಜೀವನದ ಅತ್ಯಂತ ಕೆಟ್ಟ ಸಂಗತಿ ಅಂತ ಮರುಗುತ್ತಾರೆ.
* ಖಾಸಗಿ ಸಂಗತಿಗಳು ಅನ್ಯರ ಪಾಲಾಗಿದ್ದಕ್ಕೆ ಇಬ್ಬರಲ್ಲಿ ಒಬ್ಬರು ಪೇಚಾಡುತ್ತಾರೆ.
* ಶೇ.82ರಷ್ಟು ಮಂದಿ ಕಳಕೊಂಡಿದ್ದನ್ನು ಹುಡುಕುವುದು ಭಾರೀ ಕಷ್ಟದ ಕೆಲಸ ಅಂತ ನಂಬಿರ್ತಾರೆ.
* ಶೇ.50ಕ್ಕಿಂತ ಹೆಚ್ಚು ಜನ ಕಂಪ್ಲೆಂಟ್ ನೀಡಲು ಹಿಂಜರಿಯುತ್ತಾರೆ.
* ಐವರಲ್ಲಿ ಮೂವರು ಮಾತ್ರ ಪಾಸ್ ವರ್ಡ್ ಇಟ್ಟುಕೊಂಡು ಮೊಬೈಲನ್ನು ಸುರಕ್ಷಿತವಾಗಿರಿಸಿರುತ್ತಾರೆ.
* ಕಳೆದುಹೋದ ಮೊಬೈಲು ವಾಪಸ್ ಸಿಗುವುದು ಶೇ.1ಕ್ಕಿಂತ ಕಡಿಮೆ.
ಮಾತಾಡುವ ಮತ್ತು ಮಾತು ಕೇಳಿಸಿಕೊಳ್ಳುವಷ್ಟೇ ಸಾಧನವಾಗಿ ಮೊಬೈಲ್ ಉಳಿದಿಲ್ಲ. ಮೊಬೈಲ್ ಇಂದು ಅನೇಕರ ಜೀವನಶೈಲಿಯೇ ಆಗಿದೆ. ಇಂಟರ್ನೆಟ್ ಬ್ರೌಸಿಂಗ್, ಆನ್ ಲೈನ್ ಬ್ಯಾಂಕಿಂಗ್ ನಿಂದ ಹಿಡಿದುಕೊಂಡು ಅನೇಕ ಕಾರ್ಯಗಳನ್ನು ಮೊಬೈಲ್ ಮುಖಾಂತರವೇ ಮಾಡಬಹುದಾಗಿದೆ. ಟ್ವಿಟ್ಟರ್, ಫೇಸ್ ಬುಕ್, ಯುಟ್ಯೂಬ್ ಗಳಂತೂ ಇಂದಿನ ಯುವ ಪೀಳಿಗೆಗೆ ಇಡೀ ಜಗತ್ತಿನ ಆಗುಹೋಗುಗಳನ್ನು ಕಣ್ಣ ಮುಂದೆ ತೆರೆದಿಟ್ಟಿರುತ್ತವೆ.
ಆದರೂ, ಮೊಬೈಲ್ ಸುರಕ್ಷತೆಯ ಬಗ್ಗೆ ಭಾರತೀಯರಿಗೆ ಇಷ್ಟೊಂದು ಅಸಡ್ಡೆಯೇಕೆ? ಸದ್ಯಕ್ಕೆ ಇದೊಂದು ಬಗೆಹರಿಯದ ಪ್ರಶ್ನೆಯಾಗಿ ಉಳಿದಿದೆ. ಮೊಬೈಲ್ ದುರುಪಯೋಗವಾಗದಂತೆ ಏನು ಮಾಡಬಹುದು ಎಂಬ ಬಗ್ಗೆ ಚರ್ಚೆಗಳೂ ನಡೆಯುತ್ತಿವೆ. ಸ್ಮಾರ್ಟ್ ಫೋನುಗಳನ್ನು ಕೈಯಲ್ಲಿ ಹಿಡಿದುಕೊಂಡ ಮೇಲೆ ನಾವೂ ಸುರಕ್ಷತೆಯ ಬಗ್ಗೆ ಸ್ಮಾರ್ಟ್ ಆಗದಿದ್ದರೆ ಹೇಗೆ? ಈ ಸುದ್ದಿಯನ್ನು ಬರೆದಿರುವ ಉಪಸಂಪಾದಕ ಕೂಡ ಮೂರು ಬಾರಿ ಮೊಬೈಲ್ ಕಳೆದುಕೊಂಡಿದ್ದಾರೆ. ಏಕೆ, ಹೇಗೆ ಎಂದು ಮಾತ್ರ ಕೇಳಬೇಡಿ. ಅಂದ ಹಾಗೆ, ಮೊಬೈಲ್ ಕಳೆದುಕೊಂಡವರ ಪಟ್ಟಿಯಲ್ಲಿ ನಿಮ್ಮ ಹೆಸರನ್ನೂ ಸೇರಿಸಬಹುದಾ?
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications