ಬೀದಿ ಕಾಮಣ್ಣ ಕೀಟಲೆಗೆ ಪಾಪದ ಹುಡ್ಗಿ ಬಲಿ
ಯಲ್ಲಾಪುರ,
ಮಾ.3 : ಜಂಬೇಸಾಲ ವಿದ್ಯಾರ್ಥಿನಿಯೊಬ್ಬಳಿಗೆ ನಿರಂತರ ಕೀಟಲೆ ಕೊಟ್ಟು ಆಕೆಯ ಸಾವಿಗೆ ಕಾರಣರಾಗಿದ್ದ ಮೂವರು ಬೀದಿ ಕಾಮಣ್ಣರನ್ನು ಯಲ್ಲಾಪುರದ ಎಸ್ ಐ ಗೋಪಾಲಕೃಷ್ಣ ನಾಯಕ್ ಅವರು ಬಂಧಿಸಿದ್ದಾರೆ. ಸ್ಥಳೀಯ ಕಾಲೇಜಿನ ವಿದ್ಯಾರ್ಥಿನಿ ರಜನಿ ಗಣಪತಿಹೆಗಡೆ ಬಿಸಗೋಡ ಎಂಬಲ್ಲಿ ಇತ್ತೀಚೆಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು. id="toptextpromo">ಜಂಬೇಸಾಲದ
ರಜನಿ ಗಣಪತಿಹೆಗಡೆ(22) ಮೃತಪಟ್ಟ ನತದೃಷ್ಟೆ. ಈಕೆಗೆ ಕೀಟಲೆ ನೀಡಿದ ಆರೋಪದ ಮೇಲೆ ಸಯ್ಯದ್ ಹನೀಫ್ (24) ಸೈಯ್ಯದ್ ಹರೂನ್ ಷೇಕ್ (23) ಹಾಗೂ ಫಿಜಾಲ್ ಮಹಮ್ಮದ್ ಷೇಕ್( 31) ಎಂಬುವವರನ್ನು ಬಂಧಿಸಲಾಗಿದೆ. ಇವರುಗಳು ಸ್ಥಳೀಯ ರಿಕ್ಷಾ ಚಾಲಕರಾಗಿದ್ದಾರೆ. ಆರೋಪಿತರು ಜಂಬೇಸಾಲದ ಬಳಿ ಬಸ್ ಗಾಗಿ ರಜನಿ ಕಾಯುತ್ತಿದ್ದ ಸಂದರ್ಭದಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿ, ಅಶ್ಲೀಲವಾಗಿ ನಿಂದಿಸಿದ್ದರು.ಇದು ಸಾರ್ವಜನಿಕವಾಗಿ ಹರಡಿ, ಆಕೆ ತಲೆ ಎತ್ತಿ ಓಡಾಡಲು ಕಷ್ಟವಾಗುವಂತೆ ಮಾಡಿತ್ತು. id='are-slot-1' class='oiad oi-axt oiadv'> id='top-searched-articles'>ಇದರಿಂದ
ಮನನೊಂದ ಈಕೆ ಜಂಬೇಸಾಲದ ಮನೆಗೆ ತೆರಳದೇ ನೇರ ಬಿಸಗೋಡಿನ ತನ್ನ ಅಜ್ಜಿಮನೆಗೆ ತೆರಳಿದ್ದಾಳೆ. ಸಂಜೆ ವೇಳೆ ಯಾರೂ ಇಲ್ಲದ ಸಂದರ್ಭದಲ್ಲಿ ತನ್ನ ಚೂಡಿದಾರದ ವೇಲ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳೀಯ ಯುವಕರ ನೆರವಿನಿಂದ ಮೂವರು ಆರೋಪಿಗಳನ್ನು ಬಂಧಿಸಲು ಸಾಧ್ಯವಾಯಿತು ಎಂದು ಎಸ್ ಐ ಗೋಪಾಲಕೃಷ್ಣ ನಾಯಕ್ ಹೇಳಿದರು.











Click it and Unblock the Notifications