ಇಂಡಿಯಾ, ಇಂಗ್ಲೆಂಡ್ ಕದನಕ್ಕೆ ಮಳೆರಾಯ ಅಂಪೈರ್
ಬೆಂಗಳೂರು, ಫೆ.26 : ಕ್ರಿಕೆಟ್ ಅಭಿಮಾನಿಗಳು ಕೆಎಸ್ ಸಿಎ ಜೊತೆ ಗುದ್ದಾಟ ನಡೆಸಿ ಹಾಗೋ ಹೀಗೋ ಟೆಕೆಟ್ ಪಡೆದರೂ ವಿಶ್ವಕಪ್ 2011ರ ಮಹತ್ವದ ಪಂದ್ಯ ನೋಡುವ ಅವಕಾಶದಿಂದ ವಂಚಿತರಾಗುವ ಸಾಧ್ಯತೆಯಿದೆ. ಭಾನುವಾರದ ಭಾರತ-ಇಂಗ್ಲೆಂಡ್ ಹಣಾಹಣಿಗೆ ಎಲ್ಲವೂ ಸಿದ್ಧ ಎನ್ನುವ ಹೊತ್ತಿಗೆ ಅಕಾಲಿಕ ಮಳೆ ಪಂದ್ಯವನ್ನು ನುಂಗುವ ಬೆದರಿಕೆ ಒಡ್ಡಿದೆ.
ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಬಿ ಪುಟ್ಟಣ್ಣ ಅವರು ನೀಡುರ್ವ ಮುನ್ಸೂಚನೆ ಪ್ರಕಾರ ಶನಿವಾರ ಮತ್ತು ರವಿವಾರ ಬೆಂಗಳೂರಿನಲ್ಲಿ ಭಾರೀ ಗುಡುಗು ಸಹಿತ ಮಳೆಯ ನಿರೀಕ್ಷೆ ಇದೆ. ಶುಕ್ರವಾರ ಸಂಜೆಯೂ ಭಾರೀ ಮಳೆಯಲ್ಲಿ ನಗರ ಸ್ನಾನ ಮಾಡಿದೆ. ಭಾರತ ಹಾಗೂ ಇಂಗ್ಲೆಂಡ್ ಆಟಗಾರರ ತಾಲೀಮಿಗೂ ಮಳೆ ಅಡ್ಡಿ ಪಡಿಸಿದೆ. ಮಳೆ ಮುಂದುವರಿದರೆ ಕ್ರಿಕೆಟ್ ಅಭಿಮಾನಿಗಳು ನಿರಾಸೆ ಅನುಭವಿಸುವುದು ಖಂಡಿತ. ಮಳೆರಾಯರನ್ನು ಶಪಿಸುತ್ತಾ, ಸೂರ್ಯದೇವನನ್ನು ಸ್ತುತಿಸುತ್ತಾ ಅಭಿಮಾನಿಗಳು ದೊಮ್ಮಲೂರಿನ ಸೂರ್ಯನಾರಾಯಣ ದೇಗುಲದಲ್ಲಿ ವಿಶೇಷ ಪೂಜೆ ನಡೆಸಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(KSCA)ಯಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಅನಿಲ್ ಕುಂಬ್ಳೆ ನೇತೃತ್ವದ ಆಡಳಿತ ಮಂಡಳಿಗೆ ಒಂದಿಲ್ಲೊಂದು ಎಡವಟ್ಟುಗಳು ಎದುರಾಗುತ್ತಿವೆ. ಪ್ರಾರಂಭದಲ್ಲಿ ವಿಶ್ವಕಪ್ ಪಂದ್ಯಗಳಿಗೆ ಕ್ರೀಡಾಂಗಣಕ್ಕೆ ಭದ್ರತೆ ಒದಗಿಸುವ ವಿಚಾರ ಕುರಿತಂತೆ ಪೊಲೀಸರನ್ನು ಎದುರು ಹಾಕಿಕೊಂಡರು. ಗುರುವಾರ ಟಿಕೆಟ್ ಮಾರಾಟ ಸಂದರ್ಭದಲ್ಲಿ ಲಭ್ಯವಿದ್ದ ಆರೇಳು ಸಾವಿರ ಟಿಕೆಟ್ಗೆ 20 ರಿಂದ 25 ಸಾವಿರ ಜನ ಮುಗಿಬಿದ್ದ ಪರಿಣಾಮ ದೊಡ್ಡ ದೊಂಬಿಯೇ ನಡೆದು ಪೊಲೀಸರು ಲಾಠಿ ಬೀಸಿದರು. ಅನೇಕರು ಗಾಯಾಳುಗಳಾದರೆ, ಇಬ್ಬರು ಗಂಭೀರವಾಗಿ ಗಾಯಗೊಂಡರು. ಈ ಟಿಕೆಟ್ ಗಲಾಟೆ ವಿದೇಶಿ ಮಾಧ್ಯಮಗಳಲ್ಲೂ ದೊಡ್ಡ ಸುದ್ದಿಯಾಯಿತು. ಈಗ ಇದ್ದಕ್ಕಿದ್ದಂತೆ ಆಕಾಶ ಬಿರಿದು ಮಳೆ ಸುರಿಸುವ ಮೂಲಕ ಕ್ರಿಕೆಟ್ ಹಬ್ಬಕ್ಕೆ ತಣ್ಣೀರು ಸುರಿಯುವ ಹುನ್ನಾರ ನಡೆಸಿದೆ.
ಕೆಎಸ್ಸಿಎಗೆ ಭೀತಿ ಇಲ್ಲ: ಆದರೆ ಕೆಎಸ್ಸಿಎ ಎಂಥಾ ಮಳೆಗೂ ತಾನು ಸಿದ್ಧವಾಗಿರುವುದಾಗಿ ಹೇಳಿಕೊಂಡಿದೆ. ದೇಶದಲ್ಲೇ ಅತ್ಯಂತ ವೃತ್ತಿಪರ ಕ್ರಿಕೆಟ್ ಸಂಸ್ಥೆ ಎಂದು ಹೆಸರಾಗಿರುವ ಕೆಎಸ್ಸಿಎ ಅಂಗಣದಲ್ಲಿ ಒಳಚರಂಡಿ ವ್ಯವಸ್ಥೆ ಅತ್ಯುತ್ತಮವಾಗಿದೆ. ಎರಡು ಸೂಪರ್ ಸಾಪರ್ ಯಂತ್ರಗಳಿದ್ದು, ಇಡೀ ಮೈದಾನಕ್ಕೆ ಹೊದಿಸುವಷ್ಟು ಉತ್ತಮ ಹೊದಿಕೆ ಲಭ್ಯವಿದೆ. ಮಳೆ ನಿಂತರೆ, ಕೂಡಲೇ ಪಂದ್ಯವನ್ನು ಆಟಕ್ಕೆ ಸಜ್ಜುಗೊಳಿಸುವುದಕ್ಕೆ ನಾವು ಸಿದ್ಧರಾಗಿದ್ದೇವೆ ಎಂದು ಕೆಎಸ್ಸಿಎ ವಕ್ತಾರ ಮಾಜಿ ಆಟಗಾರ ಸುಜಿತ್ ಸೋಮಸುಂದರ್ ಹೇಳಿದ್ದಾರೆ.
ರನ್ ಮಳೆ: ಮಳೆಯನ್ನು ತಡೆಯುವುದು ಸಾಧ್ಯವಿಲ್ಲ. ಆದರೆ ಪಿಚ್ಗೆ ಹಾನಿಯಾಗದಂತೆ, ಆಟಕ್ಕೆ ತೊಂದರೆಯಾಗದಂತೆ ತ್ವರಿತವಾಗಿ ಸಜ್ಜುಗೊಳಿಸುವ ದಕ್ಷ ವ್ಯವಸ್ಥೆ ನಮ್ಮಲ್ಲಿದೆ ಎಂದು ಸುಜಿತ್ ಹೇಳಿದರು. ಈ ನಡುವೆ ರನ್ ಹೊಳೆ ಹರಿಯುವಂತೆ ಪಿಚ್ ಸಿದ್ಧಪಡಿಸಲಾಗಿದೆ ಎಂದು ಕ್ಯೂರೆಟರ್ ನಾರಾಯಣ ರಾಜು ಹೇಳಿದ್ದಾರೆ. ಆದರೆ, ಬೆಂಗಳೂರಿನ ಪಿಚ್ ಸ್ಪರ್ಧಾತ್ಮಕವಾಗಿದ್ದು, ಮಳೆ ಬಿದ್ದರೆ ಯಾವ ರೀತಿ ಬದಲಾವಣೆಯಾಗುತ್ತದೆ ಎಂದು ಹೇಳಲು ಬರುವುದಿಲ್ಲ. ಮಳೆಯಿಂದ ಇಂಗ್ಲೆಂಡ್ ವೇಗಿಗಳಿಗೆ ಅನುಕೂಲವಾಗುವ ಸಾಧ್ಯತೆಯೂ ಇದೆ ಎಂದು ರಾಜು ಹೇಳಿದರು.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications