ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಳ್ಳಭಟ್ಟಿ: ದಾಳಿಗೆ ಹೋಗಿ ಕಲ್ಲೇಟು ತಿಂದ ರೇಣುಕಾ
1975ರಿಂದಲೂ ಇಲ್ಲಿನ ಬೆಟ್ಟ ಪ್ರದೇಶದಲ್ಲಿ ಕಳ್ಳಭಟ್ಟಿ ದಂದೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಸಚಿವ ರೇಣುಕಾಚಾರ್ಯ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು, ಡಿವೈ.ಎಸ್ಪಿ, ಇನ್ಸ್ಪೆಕ್ಟರ್ ಸೇರಿದಂತೆ ಅನೇಕ ಪೊಲೀಸರು ಮತ್ತು ಮಾಧ್ಯಮದವರೊಂದಿಗೆ ಗುರುವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ತೆರಳಿದ್ದರು.
ದಾಳಿಯ ಸುಳಿವು ಪಡೆದ ನೂರಾರು ಕಳ್ಳಭಟ್ಟಿಕೋರರು ಸಚಿವರ ತಂಡದ ಮೇಲೆ ಮಾರಕಾಸ್ತ್ರಗಳೊಂದಿಗೆ ದಾಳಿಗೆ ಮುಂದಾದರು. ಜತೆಗೆ ಕಲ್ಲು ತೂರಾಟವನ್ನು ನಡೆಸಿದರು. ದುಷ್ಕರ್ಮಿಗಳನ್ನು ಹಿಮ್ಮೆಟ್ಟಿಸಲು ಪೊಲೀಸರು ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಪರಿಸ್ಥಿತಿ ಬಿಗುವಿನಿಂದ ಕೂಡಿದೆ. ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಸಚಿವ ರೇಣುಕಾಚಾರ್ಯ, ದಾಳಿಕೋರರನ್ನು ಬಂಧಿಸಿ ಗಡಿಪಾರು ಮಾಡಲಾಗುವುದು ಎಂದು ತಿಳಿಸಿದ್ದಾರೆ.
Comments
English summary
Karnataka Excise Minister Raided Illicit Liqour area in Belagaum on Thursday. Including himself many officials got injured when miscreants hurled stones on them,
Story first published: Thursday, February 17, 2011, 13:03 [IST]