ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಪ ಸಾಬೀತಾದ್ರೆ ಯಡಿಯೂರಪ್ಪನೇ ಹೋಗ್ತಾರೆ

By Srinath
|
Google Oneindia Kannada News

rajnath singh
ಬೆಂಗಳೂರು, ಫೆ.3 : ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸ್ಥಾನ ತ್ಯಜಿಸಿ ಎಂದು ಯಾರೂ ಹೇಳುವ ಅಗತ್ಯವಿಲ್ಲ. ಆರೋಪ ಸಾಬೀತಾದಲ್ಲಿ ಅವರೇ ಜಾಗ ಖಾಲಿ ಮಾಡುತ್ತಾರೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಹೇಳಿದ್ದಾರೆ.

ಭ್ರಷ್ಟಾಚಾರ ಆರೋಪ ಹೊತ್ತಿರುವ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಪಕ್ಷದ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅವರ ವಿರುದ್ಧದ ದೂರು ಸಾಬೀತಾಗಿಲ್ಲ. ಆದ್ದರಿಂದ ಸದ್ಯಕ್ಕೆ ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳುವುದಿಲ್ಲ ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಕಾಗದವೊಂದರಲ್ಲಿ ದೂರನ್ನು ಬರೆದುಕೊಂಡ ಬಂದ ಇಬ್ಬರು ನ್ಯಾಯವಾದಿಗಳ ಮಾತು ಕೇಳಿ ಯಡಿಯೂರಪ್ಪ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿದ ರಾಜ್ಯಪಾಲ ಎಚ್.ಆರ್. ಭಾರದ್ವಾಜ್‌ರ ನಿರ್ಧಾರವನ್ನು ಸಿಂಗ್ ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು.

ಯಡಿಯರಪ್ಪ ವಿರುದ್ಧ ಪಕ್ಷದ ವತಿಯಿಂದ ಯಾವುದೇ ಆಂತರಿಕ ವಿಚಾರಣೆ ನಡೆದಿಲ್ಲ. ಮಾಜಿ ನ್ಯಾಯಾಧೀಶರು ಮತ್ತು ಲೋಕಾಯುಕ್ತ ಮಾತ್ರ ವಿಚಾರಣೆ ನಡೆಸುತ್ತಿದ್ದಾರೆ. ಅದರ ಫಲಿತಾಂಶ ಬರುವವರೆಗೂ ಎಲ್ಲರೂ ತಾಳ್ಮೆ ವಹಿಸಬೇಕು ಎಂದು ಸಿಂಗ್ ತಿಳಿಸಿದರು.

ದೂರಸಂಪರ್ಕ ಮಾಜಿ ಸಚಿವ ರಾಜಾ ಬಂಧನದ ಬಳಿಕ ಬಿಜೆಪಿಯು ೨ಜಿ ಹಗರಣದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವಿಚಾರಣೆಯ ಪಟ್ಟು ಸಡಿಲಿಸುವುದಿಲ್ಲ. ಮುಂದಿನ ಬಜೆಟ್ ಅಧಿವೇಶನದಲ್ಲೂ ಜೆಪಿಸಿ ಆಗ್ರಹಿಸಿ ನಮ್ಮ ಆಂದೋಲನ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಫೆಬ್ರವರಿ 24 ರಂದು ರಾಜ್ಯ ಬಜೆಟ್ :
ಈ ಮಧ್ಯೆ, ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಫೆಬ್ರವರಿ 24 ರಂದು ಬಜೆಟ್ ಮಂಡಿಸುವುದಾಗಿ ಘೊಷಿಸಿದ್ದಾರೆ. ಇದರೊಂದಿಗೆ ಸದ್ಯಕ್ಕೆ ತಾವು ರಾಜೀನಾಮೆ ನೀಡುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ.

English summary
If a prima facie case is made out against Yeddyurappa he himself will quit. There is no need to tell him to quit the post said BJP president Rajnath Singh today in Banglore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X