ಮಾಫಿಯಾ ಕರಾಮತ್ತು: ಅಡುಗೆ ಅನಿಲ ಹೋಟೆಲ್ಗೆ ಆಹಾರ

ಇಡೀ ರಾಜ್ಯದಲ್ಲಿ ಕೇವಲ 1.2 ಕೋಟಿ ಕುಟುಂಬಗಳು ಇವೆಯಾದರೂ ಅಡುಗೆ ಅನಿಲ ಸಂಪರ್ಕ ಸಾಧಿಸುವ ಸಲುವಾಗಿ 1.6 ಕೋಟಿಗೂ ಅಧಿಕ ಸಂಖ್ಯೆಯ ಕಾರ್ಡುಗಳನ್ನು ಬಳಸಲಾಗುತ್ತಿದೆ. ಹಾಗಾದರೆ ಈ 40 ಲಕ್ಷ ಹೆಚ್ಚುವರಿ ಸಿಲಿಂಡರ್ಗಳಲ್ಲಿನ ಅನಿಲ ಎಲ್ಲಿ ಆವಿಯಾಗುತ್ತಿದೆ? ಎಂಬ ಭಯಾನಕ ಪ್ರಶ್ನೆಗೆ ಸರಕಾರದ ಬಳಿ ಸ್ಪಷ್ಟ ಉತ್ತರವಿಲ್ಲ. ಇನ್ನೂ ಆತಂಕದ ವಿಷಯವೆಂದರೆ ೩೦ ಲಕ್ಷ ಜನ ಈ ಸಬ್ಸಿಡಿ ಅನಿಲ ಸಂಪರ್ಕವನ್ನು ಬಳಸುತ್ತಿಲ್ಲ. ಹೀಗಾಗಿ ಸುಮಾರು 70 ಲಕ್ಷ ಅನಿಲ ಸಂಪರ್ಕಗಳನ್ನು ಯಾವ ಅಗ್ನಿಕುಂಡಕ್ಕೆ ಬಳಕೆಯಾಗುತ್ತಿದೆಯೋ?!
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಎ. ಹರೀಶ್ಗೌಡ ಅವರಂತೂ ಇದಕ್ಕೆಲ್ಲ ಉತ್ತರ ಕಂಡುಕೊಳ್ಳಲು ಯಾವುದೇ ಪೂರ್ವ ತಯಾರಿಯಿಲ್ಲದೆ ನಕಲಿ ಅನಿಲ ಸಂಪರ್ಕ ಪತ್ತೆದಾರಿಕೆಗೆ ಇತ್ತೀಚೆಗೆ ಮುಂದಾದರು. ಇದರಿಂದ ಸಾಮಾನ್ಯ ಬಳಕೆದಾರರು ಪರದಾಡಬೇಕಾಯಿತೇ ಹೊರತು ಅವರ ಉದ್ದೇಶ ಈಡೇರದೇ ಹೋಯಿತು.
ಈ ನಿಟ್ಟಿನಲ್ಲಿ ಇಲಾಖೆಯು ಮಾಜಿ ಸಚಿವ ಬಿ. ಸೋಮಶೇಖರ್ ಅವರ ನೆರವು ಪಡೆಯಬಹುದು ಎನಿಸುತ್ತದೆ. ಮಂಡ್ಯದಲ್ಲಿ ೧೯೮೧ರಿಂದ ಅನಿಲ ವಿತರಣೆ ಏಜೆನ್ಸಿ ಹೊಂದಿರುವ ಮಾಜಿ ಸಚಿವರಿಗೆ ಅನಿಲ ಸಂಪರ್ಕ ಹೇಗೆಲ್ಲ ದುರ್ಬಳಕೆಯಾಗುತ್ತದೆ ಎಂಬುದು ಚೆನ್ನಾಗಿ ಗೊತ್ತಂತೆ.
ವಾಣಿಜ್ಯ ಮತ್ತು ಗೃಹ ಬಳಕೆ ಅನಿಲದ ದರ ವ್ಯತ್ಯಾಸ ಭಾರಿಯಾಗಿದೆ. ಇದರ ಲಾಭ ಪಡೆಯಲು ಸಮಾಜಘಾತುಕ ಶಕ್ತಿಗಳು ತಮ್ಮದೇ ಆದ ಜಾಲವನ್ನು ಹೊಂದಿವೆ. ಇಲಾಖೆಯಿಂದ ನಕಲಿ ಕಾರ್ಡುಗಳನ್ನು ಪಡೆದು ಅದರಿಂದ ಸುಲಭವಾಗಿ ಗೃಹ ಬಳಕೆ ಅನಿಲ ಸಂಪರ್ಕ ಪಡೆಯುತ್ತಾರೆ. ಅವುಗಳನ್ನೇ ವಾಣಿಜ್ಯ ಬಳಕೆಗೆ ಅಂದರೆ ವಾಹನಗಳು ಮತ್ತು ಹೋಟೆಲ್ಗಳಿಗೆ ವಿತರಿಸುತ್ತಾರೆ. ಈ ರೀತಿ ಒಂದು ಸಿಲಿಂಡರ್ ಮಾರಾಟದಿಂದ ಕನಿಷ್ಠ ೪೦೦ ರೂ. ಲಾಭ ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ ಸೋಮಶೇಖರ್. ಈ ಬಹಿರಂಗ ಸತ್ಯವನ್ನು ಗಮನಿಸಿ, ಇಲಾಖೆ ಇನ್ನಾದರೂ ಎಚ್ಚೆತ್ತುಕೊಳ್ಳುತ್ತದೆಯೇ?
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications