ಚಿರಂಜೀವಿ ವಚ್ಚಾಡು...ಅಭಿಮಾನಿಗಳಿಗೆ ಲಾಠಿ ಏಟು

ಆಂಧ್ರದಲ್ಲಿ ಬೆಳೆಯುತ್ತಿರುವ ತನ್ನ ರಾಜಕೀಯ ವರ್ಚಸ್ಸು ಗಡಿ ದಾಟಿ ಕರ್ನಾಟಕಕ್ಕೂ ಕಾಲಿರಿಸುವಂತೆ ಮಾಡಲು ಚಿರಂಜೀವಿ ಯೋಜನೆ ಹಾಕಿಕೊಂಡಿದ್ದಾರೆ. ಆದರೆ, ಆಂಧ್ರದಲ್ಲಿದ್ದಂತೆ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳ ಬೇಳೆ ಬೇಯುವುದಿಲ್ಲ. ಆದರೂ, ಪ್ರಜಾರಾಜ್ಯಂ ಪಕ್ಷದ ಕರ್ನಾಟಕ ವಿಭಾಗವನ್ನು ಅಧಿಕೃತವಾಗಿ ಆರಂಭಿಸಲು ಚಿರಂಜೀವಿ ಸಿದ್ಧತೆ ನಡೆಸಿದ್ದಾರೆ.
ಒದೆ ತಿಂದ ಅಭಿಮಾನಿಗಳು: ಹೈದರಾಬಾದಿನಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಚಿರಂಜೀವಿ, ನಂತರ ರಸ್ತೆ ಮಾರ್ಗವಾಗಿ ಅನಂತಪುರಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರದ ಚದಲಪುರ ಬಳಿ ಮೆಗಾ ಸ್ಟಾರ್ ರನ್ನು ಕಂಡ ಅಭಿಮಾನಿಗಳು ಹುಚ್ಚೆದ್ದು ಕುಣಿಯತೊಡಗಿದರು.
ಏಕಾಏಕಿ ನೂರಾರು ಜನ ಚಿರಂಜೀವಿ ಕಾರಿನೆಡೆಗೆ ಮುತ್ತತೊಡಗಿದರು. ಈ ಬಗ್ಗೆ ಅಷ್ಟಾಗಿ ತಿಳಿಯದಿದ್ದ ಸ್ಥಳೀಯ ಪೊಲೀಸರು ಅಭಿಮಾನಿಗಳನ್ನು ಸುಧಾರಿಸುವಲ್ಲಿ ಹರ ಸಾಹಸ ಪಡಬೇಕಾಯಿತು. ಏನು ಹೇಳಿದರೂ, ಕೇಳದ ಅಭಿಮಾನಿಗಳಿಗೆ ಕೊನೆಗೆ ಲಾಠಿ ರುಚಿ ತೋರಿಸಿದರು. ಕಾರಿನಲ್ಲಿ ಮುಗುಳ್ನಗುತ್ತಿದ್ದ ಚಿರಂಜೀವಿ ಅವರತ್ತ ನೋಡಿ ಸಲಾಂ ಹೊಡೆದ ಪೇದೆಗಳು ಅವರನ್ನು ಬೀಳ್ಕೊಟ್ಟರು.
ಅತ್ತ ಚಿರಂಜೀವಿ ಅನಂತಪುರ ತಲುಪಿದ ನಂತರ, ಕರ್ನಾಟಕದಲ್ಲಿ ನಡೆಯುವ ಮುಂದಿನ ಚುನಾವಣೆಯಲ್ಲಿ ಪ್ರಜಾರಾಜ್ಯಂ ಪಕ್ಷ ಸ್ಪರ್ಧಿಸಲಿದೆ ಎಂದು ಚಿರಂಜೀವಿ ಬೆನ್ನು ಬಿದ್ದಿದ್ದ ಖಾಸಗಿ ವಾಹಿನಿಯಲ್ಲಿ ಘೋಷಿಸತೊಡಗಿತ್ತು. ಒಟ್ಟಿನಲ್ಲಿ ರಾಜ್ಯ ರಾಜಕಾರಣದತ್ತ ಚಿರಂಜೀವಿ ಕಣ್ಣು ಹಾಕಿರುವ ಸೂಚನೆಯಂತೂ ಸಿಕ್ಕಿದೆ. ಯಾವುದಕ್ಕೂ ಮುಂದಿನ ಚುನಾವಣೆವರೆಗೂ ಕಾಯಬೇಕು. [ಚಿರಂಜೀವಿ]
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications