ಸಂಪುಟದ ದುರ್ಬಳಿಕೆ : ಕಾಂಗ್ರೆಸ್, ರಾಜ್ಯಪಾಲರ ನಡೆ...?

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಸ್ವಜನ ಪಕ್ಷಪಾತ, ಭ್ರಷ್ಟಚಾರ ಮೀತಿಮೀರಿದೆ. ಅವರು ನಡೆಸಿರುವ ಅಕ್ರಮಗಳು ಕಣ್ಣಿಗೆ ರಾಚುತ್ತವೆ. ಇದರಿಂದ ಬಚಾವ್ ಆಗಲು ಸಂಪುಟವನ್ನು ಅಶ್ರಯಿಸಿದ್ದಾರೆ. ಬುಧವಾರ ನಡೆದ ಸಚಿವ ಸಂಪುಟವು ಮೊಕದ್ದಮೆ ಹೂಡಲು ರಾಜ್ಯಪಾಲರು ಅನುಮತಿಯನ್ನು ನೀಡದಂತೆ ಮನವಿ ಮಾಡಿರುವುದು ಹಾಗೂ ರಾಜ್ಯಪಾಲರ ವಿರುದ್ಧ ಕರ್ನಾಟಕ ಬಂದ್ ನಡೆಸುವ ಬ್ಲಾಕ್ ಮೇಲ್ ತಂತ್ರ ಅನುಸರಿಸುತ್ತಿರುವುದನ್ನು ಪರಮೇಶ್ವರ್ ತೀವ್ರವಾಗಿ ಖಂಡಿಸಿದ್ದಾರೆ.
ರಾಜ್ಯಪಾಲರ ನಡೆ : ಕರ್ನಾಟಕದ ರಾಜ್ಯಪಾಲರಾಗಿ ಬಂದ ಎಚ್ ಆರ್ ಭಾರದ್ವಾಜ್ ಅವರು ಎಂದಿಗೂ ಸುಮ್ಮನೆ ಕುಂತಿಲ್ಲ. ಸ್ವತಃ ಕಾನೂನು ಪಂಡಿತರಾಗಿರುವ ಅವರು ಸರಕಾರ ತೆಗೆದುಕೊಂಡಿರುವ ನಿರ್ಣಯಕ್ಕೆ ಒಪ್ಪಿಕೊಳ್ಳುತ್ತಾರೋ ಎನ್ನುವುದು ಕುತೂಹಲ ಮೂಡಿಸಿದೆ. ಮಾಜಿ ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ ಪ್ರಕಾರ, ರಾಜ್ಯಪಾಲರ ನಿರ್ಧಾರದಲ್ಲಿ ಮೂಗು ತೂರಿಸುವಂತಿಲ್ಲ. ಸಂಪುಟದ ತೀರ್ಮಾನವನ್ನು ರಾಜ್ಯಪಾಲರು ಮಾನ್ಯ ಮಾಡಬೇಕೆಂದಿಲ್ಲ ಎಂದು ನಾನಾ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟನೆ ನೀಡಿದೆ. ಮುಖ್ಯಮಂತ್ರಿಗಳಿಂದ ವಿವರಣೆ ಕೇಳುವುದು ರಾಜ್ಯಪಾಲರ ವಿವೇಚನೆಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.(ಯಡಿಯೂರಪ್ಪ)












Click it and Unblock the Notifications