ಬಿಜೆಪಿ ಹೈ ಕಮಾಂಡ್ ಗೆ ಯಡ್ಡಿ 500 ಕೋಟಿ ಲಂಚ

ರಾಜ್ಯದಲ್ಲಿ ಇತ್ತೀಚೆಗೆ ಬಿಜೆಪಿ ಶಾಸಕರು ಬಂಡಾಯ ಎದ್ದಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ದಿಲ್ಲಿಗೆ ಕಾರಿನಲ್ಲಿ ಪ್ರಯಾಣ ಬೆಳೆಸಿ ಬಿಜೆಪಿ ರಾಷ್ಟ್ರೀಯ ನಾಯಕರನ್ನು ರಹಸ್ಯ ಭೇಟಿಯಾಗಿ ತನ್ನ ಬೇಳೆ ಬೇಯಿಸಿಕೊಂಡಿದ್ದಾರೆ. 'ನಾನು ಸತ್ಯವನ್ನೇ ಹೇಳುತ್ತಿದೇನೆ. ಯಡಿಯೂರಪ್ಪ ಲಂಚದ ಬಲದಿಂದ ಮತ್ತೊಂದು ಅವಧಿಗೆ ಸಿಎಂ ಆಗಿ ಮುಂದುವರಿದಿದ್ದಾರೆ. ಅವರು ಕೇಂದ್ರೀಯ ಬಿಜೆಪಿ ನಾಯಕರಿಗೆ ಲಂಚ ನೀಡಿಲ್ಲ ಎಂಬುದನ್ನು ತನಿಖೆಯಿಂದ ಸಾಬೀತಾದರೆ ನಾನು ಅವರ ಮನೆಯಲ್ಲಿ ದುಡಿಯಲು ಸಿದ್ಧ' ಎಂದು ಉಗ್ರಪ್ಪ ಸಿಎಂ ಮತ್ತು ಅವರ ಸರ್ಕಾರಕ್ಕೆ ಸವಾಲೆಸೆದಿದ್ದಾರೆ.
"ಯಡಿಯೂರಪ್ಪ ಆಧುನಿಕ ಭಸ್ಮಾಸುರ" ಎಂದ ಉಗ್ರಪ್ಪ, "ಸಿಎಂ ಮತ್ತು ಅವರ ತಂಡ ಅಲಿಬಾಬಾ ಮತ್ತು 40 ಮಂದಿ ಕಳ್ಳರಂತೆ" ಅವರು ಬೇಕೆಂದಾಗ ವಿಕಾಸಸೌಧ, ವಿಧಾನಸೌಧ, ಲಾಲ್ಬಾಗ್, ಕಬ್ಬನ್ ಪಾರ್ಕುಗಳನ್ನೂ ಡಿನೋಟಿಫೈ ಮಾಡಿ ಬಿಡುತ್ತಾರೆ ಎಂದು ಟೀಕಿಸಿದ್ದಾರೆ.ಇಷ್ಟೇ ಅಲ್ಲದೆ ರಾಜ್ಯದಲ್ಲಿ ನಡೆದಿರುವ ಗಣಿಗಾರಿಕೆ ಹಗರಣಗಳ ಹಿನ್ನೆಲೆಯಲ್ಲೂ ರಾಜ್ಯ ಬಿಜೆಪಿಗರು (ಗಣಿಧಣಿಗಳು) ಪಕ್ಷದ ಕೇಂದ್ರ ನಾಯಕತ್ವಕ್ಕೆ ಭಾರೀ ಲಂಚ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.












Click it and Unblock the Notifications