ಸುದರ್ಶನ್ ಹೇಳಿಕೆಗೆ ಆರೆಸ್ಸೆಸ್ ವಿಷಾದ

ಭಾವನೆಗಳಿಗೆ ಘಾಸಿ ಉಂಟು ಮಾಡಿರುವ ಸುದರ್ಶನರ ಹೇಳಿಕೆಯ ಕುರಿತು ಆರೆಸ್ಸೆಸ್ನ ಜಂಟಿ ಮಹಾಕಾರ್ಯದರ್ಶಿಯಾಗಿ ನಾನು ವಿಷಾದ ವ್ಯಕ್ತಪಡಿಸುತ್ತಿದ್ದೇನೆ. ಆ ಬಳಿಕದ ಬೆಳವಣಿಗೆಗಳು ದುರದಷ್ಟಕರ ಎಂದು ಸಂಘದ ನಾಯಕ ಸುರೇಶ್ ಭಯ್ಯಿಜಿ ಜೋಶಿ ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ. ಶಾಂತಿ ಹಾಗೂ ಸಂಯಮ ಕಾಪಾಡುವಂತೆ ಅವರು ಎಲ್ಲರಿಗೂ ಮನವಿ ಮಾಡಿಕೊಂಡಿದ್ದಾರೆ.
ಈ ವಿಚಾರದಲ್ಲಿ ಬಿಜೆಪಿಯ ಅಭಿಪ್ರಾಯವೂ ಆರೆಸ್ಸೆಸ್ನಂತೆಯೇ ಇದೆಯೆಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಸ್ಪಷ್ಟಪಡಿಸಿದ್ದಾರೆ. ಆರೆಸ್ಸೆಸ್ ಕ್ರಮ ಇರಸು ಮುರಸು ತಂದಿದೆಯೇ ಎಂಬ ಪ್ರಶ್ನೆಗೆ ಆ ರೀತಿಯಾಗಿ ನಾವೇನೂ ಹೇಳುತ್ತಿಲ್ಲ ಎಂದು ಬಿಜೆಪಿ ಹೇಳಿದೆ. ಸುದರ್ಶನ್ ಹೇಳಿಕೆ ದೇಶಾದ್ಯಂತ ಪ್ರತಿಭಟನೆ ನಡೆಸಿದ ನಂತರ ಆರೆಸ್ಸೆಸ್ ಮತ್ತು ಬಿಜೆಪಿಯಿಂದ ಈ ಸ್ಪಷ್ಟೀಕರಣ ವ್ಯಕ್ತವಾಗಿದೆ.












Click it and Unblock the Notifications