ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುದರ್ಶನ್ ಹೇಳಿಕೆಗೆ ಆರೆಸ್ಸೆಸ್ ವಿಷಾದ

By Mrutyunjaya Kalmat
|
Google Oneindia Kannada News

RSS Flag
ನವದೆಹಲಿ, ನ. 13 : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ಕೆಎಸ್ ಸುದರ್ಶನ್ ನೀಡಿರುವ ವಿವಾದಿತ ಹೇಳಿಕೆಯ ಬಗ್ಗೆ ಆರೆಸ್ಸೆಸ್ ವಿಷಾದ ವ್ಯಕ್ತಪಡಿಸಿದೆ. ಸುದರ್ಶನ್ ಹೇಳಿಕೆ ಸಂಘಟನೆಯ ಅಭಿಪ್ರಾಯವಲ್ಲವೆಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಭಾವನೆಗಳಿಗೆ ಘಾಸಿ ಉಂಟು ಮಾಡಿರುವ ಸುದರ್ಶನರ ಹೇಳಿಕೆಯ ಕುರಿತು ಆರೆಸ್ಸೆಸ್‌ನ ಜಂಟಿ ಮಹಾಕಾರ್ಯದರ್ಶಿಯಾಗಿ ನಾನು ವಿಷಾದ ವ್ಯಕ್ತಪಡಿಸುತ್ತಿದ್ದೇನೆ. ಆ ಬಳಿಕದ ಬೆಳವಣಿಗೆಗಳು ದುರದಷ್ಟಕರ ಎಂದು ಸಂಘದ ನಾಯಕ ಸುರೇಶ್ ಭಯ್ಯಿಜಿ ಜೋಶಿ ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ. ಶಾಂತಿ ಹಾಗೂ ಸಂಯಮ ಕಾಪಾಡುವಂತೆ ಅವರು ಎಲ್ಲರಿಗೂ ಮನವಿ ಮಾಡಿಕೊಂಡಿದ್ದಾರೆ.

ಈ ವಿಚಾರದಲ್ಲಿ ಬಿಜೆಪಿಯ ಅಭಿಪ್ರಾಯವೂ ಆರೆಸ್ಸೆಸ್‌ನಂತೆಯೇ ಇದೆಯೆಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಸ್ಪಷ್ಟಪಡಿಸಿದ್ದಾರೆ. ಆರೆಸ್ಸೆಸ್ ಕ್ರಮ ಇರಸು ಮುರಸು ತಂದಿದೆಯೇ ಎಂಬ ಪ್ರಶ್ನೆಗೆ ಆ ರೀತಿಯಾಗಿ ನಾವೇನೂ ಹೇಳುತ್ತಿಲ್ಲ ಎಂದು ಬಿಜೆಪಿ ಹೇಳಿದೆ. ಸುದರ್ಶನ್ ಹೇಳಿಕೆ ದೇಶಾದ್ಯಂತ ಪ್ರತಿಭಟನೆ ನಡೆಸಿದ ನಂತರ ಆರೆಸ್ಸೆಸ್ ಮತ್ತು ಬಿಜೆಪಿಯಿಂದ ಈ ಸ್ಪಷ್ಟೀಕರಣ ವ್ಯಕ್ತವಾಗಿದೆ.

English summary
RSS leader Suresh Bhaiyyaji Joshi said: “As the joint general secretary of RSS, I express my heartfelt deep regrets over the alleged statement (of Sudarshan), which had hurt the sentiments, and the subsequent developments that are unfortunate.”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X