ಚಳಿಗಾಲದ ಅಧಿವೇಶನದಲ್ಲಿ ಹಗರಣಗಳ ಬಿಸಿ
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕೋಟ್ಯಂತರ ರುಪಾಯಿ ಹಗರಣದ ಆರೋಪದಿಂದಾಗಿ ಸಂಘಟನಾ ಸಮಿತಿ ಅಧ್ಯಕ್ಷರಾಗಿದ್ದ ಸುರೇಶ್ ಕಲ್ಮಾಡಿ ತಲೆದಂಡಕ್ಕೆ ಬಿಜೆಪಿ ನೇತೃತ್ವದ ಪ್ರತಿಪಕ್ಷಗಳು ಆಗ್ರಹಿಸುತ್ತಿದ್ದವು. ಕಲ್ಮಾಡಿ ನೀಡಿದ ರಾಜೀನಾಮೆ ಅಂಗೀಕರಿಸಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಮಂಗಳವಾರ ತಿಳಿಸಿದ್ದಾರೆ.
ಚರ್ಚೆ ವಿಷಯಗಳು: ಚಳಿಗಾಲ ಅಧಿವೇಶನಕ್ಕೂ ಮುನ್ನಾದಿನ ಅಮೆರಿಕ ಅಧ್ಯಕ್ಷ ಒಬಾಮ ಸಂಸತ್ತನ್ನುದ್ದೇಶಿಸಿ ಮಾಡಿದ ಭಾಷಣ, ಕಾಮನ್ವೆಲ್ತ್, ಆದರ್ಶ, 2ಜಿ ಸ್ಪೆಕ್ಟ್ರಮ್ ಸೇರಿದಂತೆ ಹಲವು ಹಗರಣಗಳನ್ನು ಮೊದಲ ದಿನವೇ ಪ್ರಸ್ತಾಪಿಸಿ ಸರಕಾರವನ್ನು ಮುಜುಗರಕ್ಕೀಡುಮಾಡಲು ವಿರೋಧ ಪಕ್ಷಗಳು ಸಿದ್ಧವಾಗಿವೆ.
ಈ
ಹಿನ್ನೆಲೆಯಲ್ಲಿಯೇ
ಲೋಕಸಭಾಧ್ಯಕ್ಷೆ
ಮೀರಾ
ಕುಮಾರ್
ಸರ್ವಪಕ್ಷಗಳ
ನಾಯಕರ
ಸಭೆಯನ್ನು
ಕರೆದು
ಅಧಿವೇಶನದ
ಮೊದಲ
ದಿನ
ಕಲಾಪ
ಸರಾಗವಾಗಿ
ನಡೆಯುವಂತೆ
ಸಹಕರಿಸಲು
ಮಾಡಿಕೊಂಡ
ಮನವಿ
ವಿಫಲವಾಗಿದೆ.
ಅಂಗೀಕಾರಕ್ಕೆ
ಕಾದಿರುವ
ವಿಧೇಯಕಗಳು:
ಡಿ.13ರ
ವರೆಗೂ
ನಡೆಯಲಿರುವ
ಚಳಿಗಾಲದ
ಅಧಿವೇಶನದ
ಸಂದರ್ಭದಲ್ಲಿ
ಕೆಲ
ಪ್ರಮುಖ
ವಿಧೇಯಕಗಳನ್ನು
ಸದನ
ಮುಂದಿಡಲು
ಯುಪಿಎ
ಸರ್ಕಾರ
ಸಜ್ಜಾಗಿದೆ.
ಅವುಗಳಲ್ಲಿ
ಮಹಿಳಾ
ಮೀಸಲಾತಿ
ವಿಧೇಯಕ
2008(108
ತಿದ್ದುಪಡಿ):-
ಲೋಕಸಭೆ
ಹಾಗೂ
ವಿಧಾನಸಭೆಗಳ
ಒಟ್ಟು
ಸ್ಥಾನಗಳಲ್ಲಿ
ಮೂರನೇ
ಒಂದು
ಭಾಗ
ಮಹಿಳೆಯರಿಗೆ
ಮೀಸಲಿರುವಂತೆ
ತಿದ್ದುಪಡಿ
ತರಲಾಗಿದೆ.
ಭೂ ಕಬಳಿಕೆ (ತಿದ್ದುಪಡಿ)ವಿಧೇಯಕ 2010: ಗಣಿಗಾರಿಕೆ ಹೆಸರಿನಲ್ಲಿ ಮನೆ ಕಳೆದುಕೊಂಡ ನಿರ್ಗತಿಕರಿಗೆ(ಮುಖ್ಯವಾಗಿ ಬುಡಕಟ್ಟು ಜನಾಂಗ) ಪುನರ್ವಸತಿ ಕಲ್ಪಿಸುವ ಬಗ್ಗೆ ಮಸೂದೆ ಮಂಡನೆ.
ಅಭಿವೃದ್ಧಿಗಾಗಿ ಭೂ ಕಬಳಿಕೆ ಹಾಗೂ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆಯಲ್ಲಿ ಸಮತೋಲನ ಕಾಯ್ದುಕೊಳ್ಳಲಾಗುವುದು. ಸಾರ್ವಜನಿಕರ ಹಿತಕ್ಕಾಗಿ ಭೂ ಸ್ವಾದೀನಕ್ಕೆ ಒಪ್ಪಿಗೆ ಸೂಚಿಸುವುದು ಇವೇ ಮುಂತಾದ ತಿದ್ದುಪಡಿಗಳನ್ನು 1894ರ ಭೂ ಸ್ವಾಧೀನ ಕಾಯಿದೆಗೆ ಅನ್ವಯವಾಗುವಂತೆ ಮಾಡಲಾಗಿದೆ.
ಗಣಿ ಹಾಗೂ ಖನಿಜ ಕಾಯಿದೆ(ಅಭಿವೃದ್ಧಿ ಹಾಗೂ ನಿಯಂತ್ರಣ ತಿದ್ದುಪಡಿ) 2009: ಗಣಿಗಾರಿಕೆಗೆ ಲೈಸನ್ ಒದಗಿಸುವುದು, ಲೈಸನ್ ರದ್ದು ಪಡಿಸುವುದು ಅಥವಾ ಭೋಗ್ಯಕ್ಕೆ ಇರುವ ಗಣಿಗಾರಿಕೆ ಭೂಮಿಯನ್ನು ಸರ್ಕಾರ ನೀಡುವುದು ಮುಂತಾದ ವಿಷಯಗಳನ್ನು ಒಳಗೊಂಡಿದೆ.
ಶಸ್ತ್ರಾಸ್ತ್ರ (ತಿದ್ದುಪಡಿ) ಕಾಯಿದೆ, 2010 : ಶಸ್ತ್ರಾಸ್ತ್ರ ಹೊಂದಲು ಬೇಕಾದ ಅಗತ್ಯ ಲೈಸನ್ಸ್ ನೀಡಿಕೆಗೆ ನಿಯಮಾವಳಿಗಳನ್ನು ರೂಪಿಸುವುದು ಇದರ ಪ್ರಮುಖ ಅಂಶವಾಗಿದೆ.