ಅಮೆರಿಕನ್ನರ ಉದ್ಯೋಗ ಕಸಿಯುವುದಿಲ್ಲ : ಪ್ರಧಾನಿ

ಹೊರಗುತ್ತಿಗೆ ಎಂದಿಗೂ ಮಾರಕವಲ್ಲ. ಇದರಿಂದ ಸಂಸ್ಥೆಯ ಕಾರ್ಯಕ್ಷಮತೆ ಹೆಚ್ಚುವುದಲ್ಲದೆ, ಉತ್ಪನ್ನದ ಅಭಿವೃದ್ಧಿಯಾಗುತ್ತದೆ. ತನ್ಮೂಲಕ ಅಮೆರಿಕಕ್ಕೂ ಲಾಭವಿದೆ ಎಂದು ಪ್ರಧಾನಿ ಸಿಂಗ್ ಅಭಿಪ್ರಾಯಪಟ್ಟರು. ತಂತ್ರಜ್ಞಾನ ವಿನಿಮಯ, ವಾಣಿಜ್ಯ, ವ್ಯವಹಾರ ಒಪ್ಪಂದ, ಬಂಡವಾಳ ಹೂಡಿಕೆ ಮೂಲಕ ಉದ್ಯೋಗ ಸೃಷ್ಟಿ ಅಲ್ಲದೆ, ನಾಗರಿಕರ ಜೀವನ ಮಟ್ಟ ಸುಧಾರಣಾ ಕ್ರಮದ ಬಗ್ಗೆ ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಉದ್ಯೋಗ ಸೃಷ್ಟಿ ಮೂಲ ಮಂತ್ರ: ಅಮೆರಿಕದಲ್ಲಿದ್ದಾಗ ಹೊರಗುತ್ತಿಗೆ ಬಗ್ಗೆ ಕಿಡಿಕಾರಿದ್ದ ಒಬಾಮಾ, ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಏನನ್ನೂ ಹೇಳದೆ ನುಣಚಿಕೊಂಡರು. ಆದರೆ, ಭಾರತ ಪ್ರವಾಸದ ಮೂಲ ಉದ್ದೇಶಗಳಲ್ಲಿ ಉದ್ಯೋಗ ಸೃಷ್ಟಿ ಪ್ರಮುಖವಾದದ್ದು ಎಂದು ಸ್ಪಷ್ಟಪಡಿಸಿದರು. ಕನಿಷ್ಠ 50 ಸಾವಿರ ಜನರ ಉದ್ಯೋಗ ಖಾತ್ರಿಪಡಿಸುವುದು ನನಗೆ ಮುಖ್ಯವಾಗಿತ್ತು ಎಂದರು.
ಒಬಾಮಾರ ಆರ್ಥಿಕ ನೀತಿ ಹಾಗೂ ಉದ್ಯೋಗ ನೀತಿಯ ಬಗ್ಗೆ ಅಮೆರಿಕದಲ್ಲಿ ಅಪಸ್ವರಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಭಾರತದೊಂದಿಗಿನ ಈ ಉದ್ಯೋಗ ಖಾತ್ರಿ ಒಪ್ಪಂದ ಮಹತ್ವದ್ದಾಗಿದೆ. ಇದಲ್ಲದೆ 10 ಬಿಲಿಯನ್ ಮೌಲ್ಯದ ಸುಮಾರು 20ಕ್ಕೂ ಅಧಿಕ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿಹಾಕಲಾಗಿದೆ.
ಭಾರತವನ್ನು ಸೂಪರ್ ಪವರ್ ಎಂದಿರುವ ಒಬಾಮಾರ ಆರ್ಥಿಕ ನೀತಿಗೆ ಮೆಚ್ಚುಗೆ ಸೂಚಿಸಿದ ಪ್ರಧಾನಿ ಮನಮೋಹನ್ ಸಿಂಗ್, ಅಮೆರಿಕದ ಉದ್ಯಮಿಗೆ ಹೆಚ್ಚಿನ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದರು. ಈ ಮೂಲಕ ಮುಂದಿನ ಮೂರು ದಶಕಗಳಲ್ಲಿ ಶೇ. 9 ರಿಂದ 10 ರಷ್ಟು ಔದ್ಯೋಗಿಕ ಬೆಳವಣಿಗೆ ಕಾಣಬಹುದು ಎಂದರು.
ರಫ್ತು ನಿರ್ಬಂಧ ಸಡಿಲ: ಮಿಲಿಟರಿ ಹಾಗೂ ನಾಗರೀಕ ಸೌಲಭ್ಯ ಸೇರಿದಂತೆ ಕೆಲ ಪ್ರಮುಖ ಕ್ಷೇತ್ರಗಳಲ್ಲಿನ ರಫ್ತು ನಿಯಮಾವಳಿಗಳಿಗೆ ಬದಲಾವಣೆ ತಂದು, ವ್ಯಾಪಾರ ವಹಿವಾಟು ಸುಗುಮಗೊಳಿಸುವ ಭರವಸೆಯನ್ನು ಒಬಾಮಾ ನೀಡಿದರು. ಭಾರತ US ಕಾರ್ಗೋ ವಿಮಾನಗಳ ಖರೀದಿಸಿದರೆ ಅಮೆರಿಕದಲ್ಲಿ ಸುಮಾರು 22 ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತದೆ ಎಂದರು.
ಕೃಷಿ ಪ್ರಧಾನ ರಾಷ್ಟ್ರವಾದ ಭಾರತಕ್ಕೆ ಬೇಕಾದ ಅಗತ್ಯ ತಂತ್ರಜ್ಞಾನವನ್ನು ಒದಗಿಸುವಂತೆ ಪ್ರಧಾನಿ ಸಿಂಗ್ ಮಾಡಿದ ಮನವಿಗೆ ಒಬಾಮಾ ಪ್ರತಿಕ್ರಿಯಿಸಿ, ತಂತ್ರಜ್ಞಾನ ಪಡೆಯಿರಿ, ಉದ್ಯೋಗ ಸೃಷ್ಟಿಸಿ ಎಂದು ಮಾರ್ಮಿಕವಾಗಿ ನುಡಿದರು. ಒಟ್ಟಾರೆ ಯಾವುದೇ ವಿವಾದಿತ ಹೇಳಿಕೆಯಾಗಲಿ, ಒಪ್ಪಂದಕ್ಕಾಗಲಿ ಸಿಲುಕದೆ ನಾಜೂಕಾಗಿ ಒಬಾಮಾ ತಮ್ಮ ಪ್ರವಾಸವನ್ನು ಮುಕ್ತಾಯಗೊಳಿಸುವ ಹಂತಕ್ಕೆ ತಲುಪಿದ್ದಾರೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications