ಹಾಸನ ವೈದ್ಯಕೀಯ ಕಾಲೇಜ್ ಸಿಬ್ಬಂದಿಗಳಿಗೆ ಜಯ

ನ್ಯಾಯಮೂರ್ತಿ ರಾಮಮೋಹನ್ ರೆಡ್ಡಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದ್ದು, ಸಾಮಾಜಿಕ ನ್ಯಾಯ ಗಾಳಿಗೆ ತೂರಲಾಗಿದೆ ಜೊತೆಗೆ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಹಾಸನ ವೈದ್ಯಕೀಯ ಕಾಲೇಜಿನ ಬೋಧಕೇತರ ಸಿಬ್ಬಂದಿ ನೇಮಕಾತಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ರದ್ದುಗೊಳಿಸಿದ್ದರು. ಕೆಲಸ ಕಳೆದುಕೊಂಡ ಉದ್ಯೋಗಿಗಳು ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಬಗ್ಗೆ ಸರಕಾರ ನ್ಯಾಯಾಲಯಕ್ಕೆ ಎಲ್ಲ ದಾಖಲೆಗಳನ್ನು ಒದಗಿಸಿತ್ತು. ನೇಮಕಾತಿಗೆ ಸೂಕ್ತ ಪ್ರಚಾರ ನೀಡದೆ ಇರುವುದು. ಅರ್ಹತಾ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದರೂ ಕೃಪಾಂಕ ಮತ್ತು ಸಂದರ್ಶನ ಅಂಕಗಳನ್ನು ಹೆಚ್ಚಾಗಿ ನೀಡಿ ಸಿಬ್ಬಂದಿ ನೇಮಕಾತಿ ಮಾಡಿರುವುದು. ನಿಯಮ ಬಾಹಿರವಾಗಿ ಕೃಪಾಂಕ ಮತ್ತು ಸೇವಾ ಅಂಕಗಳನ್ನು ನೀಡಿರುವುದು ಹೀಗೆ ಹಲವು ಅಂಶಗಳನ್ನು ಸರಕಾರ ನ್ಯಾಯಾಲಯಕ್ಕೂ ಸಲ್ಲಿಸಿದ್ದರು. ಹಾಸನದ ವೈದ್ಯಕೀಯ ಕಾಲೇಜಿನ 281 ಮಂದಿ ಸಿಬ್ಬಂಗಳ ನೇಮಕಾತಿ ಸಕ್ರಮ ಎಂದು ನ್ಯಾಯಾಲಯ ಹೇಳಿದೆ.
ಮೈಸೂರು ವೈದ್ಯಕೀಯ ಕಾಲೇಜಿನ 84 ಬೋಧಕೇತರ ಸಿಬ್ಬಂದಿಗಳ ನೇಮಕಾತಿಗಳ 37 ಸಿಬ್ಬಂದಿಗಳ ನೇಮಕಾತಿ ಸಕ್ರಮ ಎಂದು ಹೇಳಿದ್ದರೆ, ಉಳಿದ 47 ಮಂದಿಯ ನೇಮಕಾತಿಯನ್ನು ಅಕ್ರಮ ಎಂದು ನ್ಯಾಯಾಲಯ ಹೇಳಿದೆ.












Click it and Unblock the Notifications