ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂದಿರಕ್ಕೂ, ಮಸೀದಿಗೂ ಜಯ, ಪೇಜಾವರ ಶ್ರೀ

By Mrutyunjaya Kalmat
|
Google Oneindia Kannada News

Vishweshatirtha Swamiji
ಲಖನೌ, ಸೆ. 30 : ಅಲಬಾಹಾದ್ ಹೈಕೋರ್ಟ್ ನೀಡಿರುವ ತೀರ್ಪುನ್ನು ಗೌರವಿಸುತ್ತೇನೆ. ಸಂತರಲ್ಲಿ ಇದರ ಬಗ್ಗೆ ಭಿನ್ನಾಭಿಪ್ರಾಯವಿದ್ದರೂ ವೈಯಕ್ತಿಕ ನನಗೆ ತೀರ್ಪು ಸಂತಸವನ್ನುಂಟು ಮಾಡಿದೆ ಎಂದು ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳು ಹೇಳಿದ್ದಾರೆ.

ತೀರ್ಪು ಹೊರಬಿದ್ದ ನಂತರ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು, ನಾನು ಅನೇಕ ದಿನಗಳಿಂದಲೂ ವಿವಾದಿತ ಪ್ರದೇಶ ಅಯೋಧ್ಯೆಯಲ್ಲಿ ಮಂದಿರವೂ ಇರಲಿ, ಮಸೀದಿಯೂ ಇರಲಿ ಎಂದು ಪ್ರತಿಪಾದಿಸುತ್ತಾ ಬಂದಿದ್ದೇನೆ. ಇದೀಗ ನ್ಯಾಯಾಲಯ ಎರಡು ಭಾಗವನ್ನು ಹಿಂದುಗಳಿಗೆ ಮತ್ತು ಒಂದು ಭಾಗವನ್ನು ಮುಸ್ಲಿಮರಿಗೆ ನೀಡಿದೆ. ಇದೊಂದು ಉತ್ತಮವಾದ ತೀರ್ಮಾನ ಎಂದು ಶ್ರೀಗಳು ಹೇಳಿದರು.

ರಾಮಜನ್ಮಭೂಮಿಯಲ್ಲಿ ಮುಸ್ಲಿಮರಿಗೆ ಜಾಗ ನೀಡುವುದನ್ನು ಸಂತರ ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಮಸೀದಿ ನಿರ್ಮಿಸಿದರೆ, ಘರ್ಷಣೆ ಉಂಟಾಗುವ ಸಾಧ್ಯತೆ ಇದ್ದು, ಅಯೋಧ್ಯೆ ರಾಮನ ಸ್ಥಳ. ಹೀಗಾಗಿ ಆ ಜಾಗ ಹಿಂದೂಗಳಿಗೆ ಸೇರಬೇಕು ಎನ್ನುವುದು ಸಂತರ ಅಭಿಪ್ರಾಯವಾಗಿದೆ ಎಂದು ಪೇಜಾವರ ಶ್ರೀಗಳು ಹೇಳಿದರು.

ತೀರ್ಪಿನ ವಿರುದ್ಧ ಸುನ್ನಿ ಬೋರ್ಡ್ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದೆ. ಈ ವಿಷಯವನ್ನು ಸಂತರ ಹಾಗೂ ಸುನ್ನಿ ವಕ್ಫ್ ಬೋರ್ಡ್ ಮುಖಂಡರೊಂದಿಗೆ ಕೂತು ಚರ್ಚಿಸಿ ಸುಪ್ರೀಂಕೋರ್ಟ್ ಗೆ ತೆರೆಳದಂತೆ ಮನವಿ ಮಾಡಿಕೊಳ್ಳಲಾಗುವುದು. ನ್ಯಾಯಾಲಯದಿಂದ ಹೊರಗೆ ಈ ವಿಷಯವನ್ನು ಬಗೆಹರಿಸಿಕೊಳ್ಳಲು ಮನವೊಲಿಸುವುದಾಗಿ ಅವರು ಹೇಳಿದರು.

ಮೋಹನ್ ಭಾಗ್ವತ್ ಹೇಳಿಕೆ : ಇದು ಯಾರೊಬ್ಬರ ಗೆಲುವು ಅಲ್ಲ. ಯಾರೊಬ್ಬರ ಸೋಲು ಅಲ್ಲ ಎಂದು ಆರ್ ಎಸ್ಎಸ್ ಮುಖಂಡ ಮೋಹನ್ ಭಾಗ್ವತ್ ಅವರು ತೀರ್ಪುಗೆ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X