ವಿಮ್ಸ್ ವೈದ್ಯರ ಸಾಧನೆ ಮುಂಗೈ ಮರುಜೋಡಣೆ

ತಿಪ್ಪೇಸ್ವಾಮಿಗೆ ಅಪಘಾತವಾಗಿದ್ದು ಆಗಸ್ಟ್ 16 ರಂದು. ಅಪಘಾತವಾದ ಕೂಡಲೇ ರಾಯದುರ್ಗದ ಸ್ಥಳೀಯ ವೈದ್ಯ ಡಾ. ಸತೀಶ್ ಅವರಲ್ಲಿ ಹೋಗಿದ್ದ ತಿಪ್ಪೇಸ್ವಾಮಿಗೆ ಅವರು, ಈತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ತುಂಡಾದ ಎಡಗೈ ಮುಂಗೈ ಅನ್ನು ಸ್ಚಚ್ಚಗೊಳಿಸಿ, ಪ್ಲಾಸ್ಟಿಕ್ ಕವರಿನಲ್ಲಿ ಕಟ್ಟಿ, ನಂತರ ಐಸ್ ಕಂಟೈನರ್ನಲ್ಲಿ ಇರಿಸಿ ತುರ್ತಾಗಿ ಬಳ್ಳಾರಿಯ ವಿಮ್ಸ್ಗೆ ದಾಖಲಾಗುವಂತೆ ಶಿಫಾರಸ್ಸು ಮಾಡಿದರು.
ಗಾಯಾಳು ತಿಪ್ಪೇಸ್ವಾಮಿ ಕೂಡ ದುಡಿದುಣ್ಣುವ ಈ ವಯಸ್ಸಿನಲ್ಲಿ ಮುಂಗೈಯನ್ನು ಕಳೆದುಕೊಳ್ಳದೇ ಮುಂಗೈ ಮರುಜೋಡಣೆ ಆಗುತ್ತದೆ ಎನ್ನುವ ವಿಶ್ವಾಸದಲ್ಲೇ ಡಾ. ಸತೀಶ್ ಅವರ ಸಲಹೆಯನ್ನು ಚಾಚೂತಪ್ಪದೇ ಪಾಲಿಸಿದನು. ಕಾರಣ ಆತನಿಗೆ ಎಡಗೈ ಮುಂಗೈ ಮರುಜೋಡಣೆ ಆಗಿದ್ದು, ಈಗಾಗಲೇ ಬೆರಳುಗಳು ಚಲನಾ ಶಕ್ತಿಯನ್ನು ಪಡೆದಿರುವುದು ವಿಶೇಷ. ಮತ್ತು ವೈದ್ಯ ಲೋಕದ ಸಾಧನೆ ಆಗಿದೆ.
ಗಾಯಾಳು ತಿಪ್ಪೇಸ್ವಾಮಿ ಕತ್ತರಿಸಿದ ಎಡಗೈ ಮುಂಗೈ ಪುನರ್ ಜೋಡಣೆ ಆಗುತ್ತದೆ ಎನ್ನುವ ಕನಸುಕಟ್ಟಿಕೊಂಡೇ ಬಳ್ಳಾರಿಯ ವಿಮ್ಸ್ಗೆ (ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ)ಗೆ ಬಂದಾಗ ಕೂಡ ಆತನಲ್ಲಿ ಕನಸು ನನಸಾಗುವ ವಿಶ್ವಾಸ, ಭರವಸೆಗಳೇ ಇರಲಿಲ್ಲ. ಆದರೆ, ಇಂದು ಆತನಿಗೆ ಮುಂಗೈ ಮರು ಪಡೆದು ಇಡೀ ವೈದ್ಯಕೀಯ ವ್ಯವಸ್ಥೆಯ ಮೇಲೆ ಅಪಾರ ವಿಶ್ವಾಸ ಮೂಡಿದೆ. ನಂಬಿಕೆ - ಭರವಸೆಗಳು ಹುಟ್ಟಿವೆ.
ವಿಮ್ಸ್ಗೆ ದಾಖಲಾದ ತಿಪ್ಪೇಸ್ವಾಮಿಯ ಸ್ಥಿತಿಯನ್ನು ಗಮನಿಸಿದ ವಿಮ್ಸ್ನ ನಿರ್ದೇಶಕ ಡಾ|| ದೇವಾನಂದ, ಅಧೀಕ್ಷಕ ಡಾ|| ವಿದ್ಯಾಧರ ಕಿನ್ನಾಳ ಅವರು, ಈತನಿಗೆ ಶಸ್ತ್ರಚಿಕಿತ್ಸೆ ಮಾಡಿ ಕತ್ತರಿಸಿದ ಎಡಗೈ ಮುಂಗೈಯನ್ನು ಮರುಜೋಡಿಸುವ ಸವಾಲನ್ನು ಸ್ವೀಕರಿಸ ಶಸ್ತ್ರಚಿಕಿತ್ಸೆಗೆ ಮುಂದಾದರು. ಈ ಜವಾಬ್ದಾರಿಯನ್ನು ಪ್ಲಾಸ್ಟಿಕ್ ಸರ್ಜರಿ ವೈದ್ಯ ಡಾ|| ಸೋಮಶೇಖರ ಸಮಗಂಡಿ ಅವರಿಗೆ ವಹಿಸಿದರು.
ಡಾ. ಸೋಮಶೇಖರ ಸಮಗಂಡಿ ಅವರ ನೇತೃತ್ವದಲ್ಲಿ 9 ವೈದ್ಯರ ತಂಡ ಆಗಸ್ಟ್ 16 ರಂದೇ ರಾತ್ರಿ 9.30 ರಿಂದ ಬೆಳಗ್ಗೆ 8.30 ರ ವರೆಗೆ ಸತತ 11 ತಾಸು ಶಸ್ತ್ರಚಿಕಿತ್ಸೆ ನಡೆಸಿ ತಿಪ್ಪೇಸ್ವಾಮಿಗೆ ಮುಂಗೈಯನ್ನು ಮರುಜೋಡಣೆ ಮಾಡುವಲ್ಲಿ ಯಶಸ್ವಿ ಆಗಿದ್ದಾರೆ.
ಶಸ್ತ್ರಚಿಕಿತ್ಸೆ ನಡೆಸಿದ ಕ್ರಮ:ಡಾ. ಸೋಮಶೇಖರ ಸಮಗಂಡಿ ನೇತೃತ್ವದಲ್ಲಿ ಪ್ರಾರಂಭದಲ್ಲಿ ಎಲುಬು ಕೀಲುಗಳ ತಜ್ಞರ ಸಹಾಯದಿಂದ ಎಲುಬುಗಳನ್ನು ಕೆ - ವೈರ್ (k - wire)ಗಳ ಮೂಲಕ ಜೋಡಿಸಿ, ಕೈ ಅನ್ನು ಭದ್ರಪಡಿಸಿ ಅದರಲ್ಲಿ ಇರುವ ರಕ್ತ ನಾಳಗಳು, ಸ್ಪರ್ಶ ನರಗಳು, ಮತ್ತು ಬೆರಳಾಡಿಸುವ ನರಗಳನ್ನು ಮೈಕ್ರೋಸ್ಕೋಪಿನ ನೆರವಿನಿಂದ ಹಂತಹಂತವಾಗಿ ಜೋಡಿಸುವಲ್ಲಿ ಯಶಸ್ವಿ ಆದರು.
ಡಾ. ಸೋಮಶೇಖರ ಸಮಗಂಡಿ ಅವರು, ಈ ಶಸ್ತ್ರ ಚಿಕಿತ್ಸೆಯು ತಮಗೆ ಪ್ರಯೋಗಕ್ಕೆ ದೊರೆತಂತಾಗಿದೆ. ಆರಂಭದಲ್ಲಿ ಆಸ್ಪತ್ರೆಗೆ ದಾಖಲಾದಾಗ ತಿಪ್ಪೇಸ್ವಾಮಿ ಮಾನಸಿಕವಾಗಿ ಕುಗ್ಗಿಹೋಗಿ ಖಿನ್ನನಾಗಿದ್ದ. ಆತನಿಗೆ ಮಾನಸಿಕ ಸ್ಥೈರ್ಯ ತುಂಬಿ, ಶಸ್ತ್ರಚಿಕಿತ್ಸೆ ಮಾಡಲಾಯಿತು. ಇನ್ನು 3-4 ತಿಂಗಳೊಳಗೆ ಪೂರ್ಣ ಪ್ರಮಾಣದಲ್ಲಿ ಗುಣಮುಖವಾಗಲಿದ್ದಾನೆ.
ಯಾವುದೇ ಅಪಘಾತಗಳು ಸಂಭವಿಸಿದಾಗ ತುಂಡರಿಸಿದ, ಕತ್ತರಿಸಿದ ಭಾಗಗಳನ್ನು ಎಸೆಯದೇ, ತಕ್ಷಣವೇ ಸ್ಚಚ್ಚಗೊಳಿಸಿ ಪ್ಲಾಸ್ಟಿಕ್ ಕವರಿನಲ್ಲಿ ಕಟ್ಟಿ, ಐಸ್ ಕಂಟೈನರ್ನಲ್ಲಿ ಹಾಕಿ ಅಪಘಾತ ಸಂಭವಿಸಿದ 6 ಗಂಟೆಗಳೊಳಗೆ ಶಸ್ತ್ರ ಚಿಕಿತ್ಸೆಗಾಗಿ ಆಸ್ಪತ್ರೆಗೆ ತರಬೇಕು ಎಂದು ಅವರು ಹೇಳಿದ್ದಾರೆ.
ವೈದ್ಯರ ತಂಡ:ಡಾ. ಸೋಮಶೇಖರ ಸಮಗಂಡಿ ಅವರು ಈ ಶಸ್ತ್ರಚಿಕಿತ್ಸೆಯ ನೇತೃತ್ವವಹಿಸಿದ್ದು, ಡಾ. ದೇವಾನಂದ, ಡಾ. ವಿದ್ಯಾಧರ ಕಿನ್ನಾಳ್, ಡಾ. ಬಾಲಸುಬ್ರಮಣ್ಯಂ, ಡಾ. ಕಿರಣ್ ಚಂದನ್, ಡಾ. ಪ್ರಭಂಜನ್ ಕುಮಾರ್, ಡಾ. ಬಸವರೆಡ್ಡಿ, ಡಾ. ಸಂದೀಪ, ಸ್ಟಾಫ್ ನರ್ಸ್ ಮಲ್ಲೇಶ ಅವರು ಪಾಲ್ಗೊಂಡಿದ್ದರು.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications