ಅಯೋಧ್ಯೆಯಲ್ಲಿ ಮಂದಿರ, ಮಸೀದಿಗಿಂತ ಶಾಂತಿ ಮುಖ್ಯ

Ramjanmbhoomi-Babri Masjid Case
ಅಯೋಧ್ಯಾ, ಸೆ.2: ರಾಮಜನ್ಮಭೂಮಿ ಬಾಬ್ರಿ ಮಸೀದಿ ಕೇಸ್ ಅಂತಿಮ ತೀರ್ಪನ್ನು ದೇಶದ ಬಹುತೇಕ ಜನ ಬಹುನಿರೀಕ್ಷೆಯಿ ಎದುರು ನೋಡುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದ ಅಯೋಧ್ಯಾ ಪಟ್ಟಣದ ನಿವಾಸಿಗಳು ಮಾತ್ರ ನಿರಾಳವಾಗಿದ್ದಾರೆ.

ಅಲಹಾಬಾದ್ ನ ಹೈ ಕೋರ್ಟ್ ತೀರ್ಪು ಏನೇ ಆದರೂ ನಮ್ಮ ಕೋಮು ಸಾಮರಸ್ಯಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಎಂದು ಇಲ್ಲಿನ ನಿವಾಸಿಗಳು ಎದೆತಟ್ಟಿ ಹೇಳುತ್ತಾರೆ.

ಸರ್ಕಾರ ಹಾಗೂ ಪೊಲೀಸರು ತಲೆ ಕೆಡಿಸಿಕೊಂಡು ಸುರಕ್ಷತಾ ದೃಷ್ಟಿಯಿಂದ ಅಭೂತಪೂರ್ವ ಭದ್ರತಾ ವ್ಯವಸ್ಥೆ ಕಲ್ಪಿಸುತ್ತಿರುವುದನು ಕಾಣುತ್ತಿದ್ದೇವೆ. ಸೋಲು ಗೆಲುವು ಎರಡನ್ನು ಸಮಚಿತ್ತದಿಂದ ಸ್ವೀಕರಿಸಲು ನಾವು ಸಿದ್ಧರಿದ್ದೇವೆ. ಕೋರ್ಟಿನ ನಿರ್ಣಯದಿಂದ ಹಿಂದೂ ಮುಸ್ಲಿಂ ಐಕ್ಯತೆಗೆ ಭಂಗ ಬರುವುದಿಲ್ಲ ಎಂದು ಹಿಂದೂ ನಿವಾಸಿ ವಿಕಾಸ್ ಮಲ್ಹೋತ್ರ ಹೇಳಿದ್ದಾರೆ.

ವಿವಾದಿತ ಸ್ಥಳದಲ್ಲಿ ಮಸೀದಿ ಕಟ್ಟುತ್ತಾರೋ ಅಥವಾ ಮಂದಿರ ಕಟ್ಟುತ್ತಾರೋ ಜನರಿಗೆ ಶಾಂತಿ ಬೇಕಾಗಿದೆ. ಹಿಂದೂ ಸೋದರರು ಗೆದ್ದರೂ ಸರಿ, ಅಥವಾ ನಾವೇ ಗೆದ್ದರೂ ಸರಿ ನ್ಯಾಯಕ್ಕೆ ತಲೆ ಬಾಗುತ್ತೇವೆ ಎನ್ನುತ್ತಾರೆ ಕಾಸಿಫ್ ಶೇಖ್ ಚೌಧುರಿ.

ನ್ಯಾಯಾಲಯದ ಆದೇಶವನ್ನು ಪಾಲಿಸಬೇಕದ್ದು ನಮ್ಮ ಧರ್ಮ ಎಂದು ಶ್ಯಾಮ್ ಬಾಬು, ಮೊಹಮ್ಮದ್ ಸಿದ್ಧಿಕ್ಕಿ ಹೇಳುತ್ತಾರೆ. ಸೆ.17ಕ್ಕೆ ರಾಮ ಜನ್ಮಭೂಮಿ ಬಾಬ್ರಿ ಮಸೀದಿ ವಿವಾದಿತ ಕೇಸ್ ಗೆ ಅಲಹಾಬಾದ್ ಹೈ ಕೋರ್ಟ್ ಅಂತಿಮ ತೀರ್ಪು ನೀಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+