ಎಚ್ಚರ, ಹಸ್ತಲಾಘವವನ್ನು ಲಘುವಾಗಿ ಪರಿಗಣಿಸದಿರಿ
ಪರ್ಫೆಕ್ಟಾಗಿ ಹಸ್ತಲಾಘವ ಮಾಡುವ ಬಗೆಯಾದರೂ ಯಾವುದು? ಹಸ್ತಲಾಘವದಿಂದ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಅಳೆಯಲು ಸಾಧ್ಯವೆ? ಹ್ಯಾಂಡ್ ಶೇಕ್ ನಿಂದ ಆಗುವ ಲಾಭ ಮತ್ತು ದುಷ್ಪರಿಣಾಮಗಳು ಯಾವುದು?
ಈ ಪ್ರಶ್ನೆಗಳನ್ನು ಕೇಳಿದವರು, ಓದಿದವರು ಸಿಕ್ಕಪಟ್ಟೆ ನಗಬಹುದು. ಹಸ್ತಲಾಘವ ಮಾಡಲೂ ಒಂದು ವಿಧಾನವಿದೆಯೆ ಎಂದು ತಮಾಷೆ ಮಾಡಬಹುದು. ಹಸ್ತಲಾಘವದಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ಗಂಭೀರವಾಗಿ ಗಮನಿಸಿದರೆ ಈ ವಿಷಯವನ್ನು ನೀವು ಲಘುವಾಗಿ ನೋಡಲಾರಿರಿ.
ಎಚ್1ಎನ್1 ವೈರಸ್ ಎಬ್ಬಿಸುತ್ತಿರುವ ಹಾವಳಿ ಗಮನಿಸಿದರೆ, ಕೈಯನ್ನು ಸ್ವಚ್ಛವಾಗಿ ಇಡುವುದಿರಲಿ, ಅಪರಿಚಿತರಿಗೆ ಹಸ್ತಲಾಘವ ನೀಡುವುದು ಬಲೇ ಅಪಾಯಕಾರಿ. ಪರಿಚಿತರಿಗೂ ಹಸ್ತಲಾಘವ ನೀಡುವಾಗ ಹಿಂದೆ ಮುಂದೆ ನೋಡಬೇಕು, ಹಾಗಿದೆ ಪರಿಸ್ಥಿತಿ. ನಿಜ ಹೇಳಬೇಕೆಂದರೆ, ಹಸ್ತಲಾಘವ ನೀಡುವುದು ಮುತ್ತಿಡುವುದಕ್ಕಿಂತಲೂ ಆಪಾಯಕಾರಿ.

ಆದರೆ, ಹ್ಯಾಂಡ್ ಶೇಕ್ ಮಾಡುವಾಗ ಸರಿಯಾದ ವಿಧಾನ ಬಳಸಿದರೆ, ಇಂಥ ಅನೇಕ ಅಪಾಯಗಳಿಂದ ದೂರವಿರಬಹುದು ಅನ್ನುವುದು ವಿಜ್ಞಾನಿಗಳ ಅಂಬೋಣ. ಅಷ್ಟು ಮಾತ್ರವಲ್ಲ, ಎದುರಿಗಿರುವ ವ್ಯಕ್ತಿಯ ವ್ಯಕ್ತಿತ್ವವನ್ನು ಕೂಡ ಅಳೆದುತೂಗಿ ನೋಡಬಹುದು ಎಂಬುದು ಅವರ ಸ್ಪಷ್ಟ ನುಡಿ.
ಹಸ್ತಲಾಘವ ಆಧುನಿಕ ಆಚರಣೆಯೇನಲ್ಲ, ಅನಾದಿ ಕಾಲದಿಂದಲೂ ಬಂದಂತಹ ಬೆಳವಣಿಗೆ. ಪರಿಚಯಿಸಿಕೊಳ್ಳುವಾಗ, ಶುಭ ಹಾರೈಸುವಾಗ, ಹಾಗೆ ಸುಮ್ಮನೆ ಪರಿಚಿತರಿಗೆ ಹಸ್ತಲಾಘವ ನೀಡುವುದು ನಮ್ಮ ವಾಡಿಕೆ. ಹಸ್ತಲಾಘವ ನಂಬಿಕೆಯ, ಗೌರವದ ಸಂಕೇತ. ಒಂದು ಹಸ್ತಲಾಘವದಲ್ಲಿ ಮನಸ್ತಾಪಗಳನ್ನು ಕ್ಷಣದಲ್ಲಿ ಬಗೆಹರಿಸುವ ಶಕ್ತಿಯೂ ಇರುತ್ತದೆ. ಆದರೆ, ಅನೇಕ ಬಾರಿ ಸಾಕಷ್ಟು ಕಿರಿಕಿರಿಗಳನ್ನೂ ಮಾಡುತ್ತದೆ.
ಕೆಲವರು ಕೈ ಹಿಡಿದರೆ ಬಿಡಿಸಿಕೊಳ್ಳುವವರೆಗೆ ಬಿಡುವುದಿಲ್ಲ, ಕೆಲವರು ಕೊಡುವ ಹಂತದಲ್ಲಿಯೇ ಕೈಕೊಸರಿಕೊಂಡಿರುತ್ತಾರೆ, ಕೆಲವರು ಕೊಟ್ಟ ಹಸ್ತಲಾಘವದಿಂದ ಬೆರಳಿನ ಮೂಳೆಮೂಳೆಗಳೆಲ್ಲ ಲಟಲಟ ಅಂದಿರುತ್ತವೆ. ಹದಿಹರೆಯದ ಹುಡುಗ ಹುಡುಗಿ ಹಸ್ತಲಾಘವ ನೀಡುವಾಗ ಮೌನದಲ್ಲೇ ಮಾತು ಮುಗಿದುಹೋಗಿರುತ್ತದೆ. ಕೆಲ ಬಾರಿ ಕೈ ಯಾವ ಪರಿ ಬೆವೆತು ಹೋಗಿರುತ್ತದೆಂದರೆ ಹಸ್ತಲಾಘವ ನೀಡವುದಕ್ಕಿಂತ ಅವರಿಗೆ ಮುತ್ತಿಡುವುದೇ ವಾಸಿ ಅನ್ನಿಸಿಬಿಡುತ್ತದೆ. ಅನೇಕ ಬಾರಿ ಕೈ ನೀಡಿದಾಗ ಕಣ್ಣು ಇನ್ನೇನೋ ಹುಡುಕುತ್ತಿರುತ್ತದೆ. ಕೆಲ ಬಾರಿ ಎಡಚರು ಎಡಗೈ ನೀಡಿ ಎಡವಟ್ಟು ಮಾಡಿಕೊಂಡುಬಿಟ್ಟಿರುತ್ತಾರೆ.
ಇಲ್ಲಿವೆ ನೋಡಿ ಕೆಲ ನಿಯಮಗಳು
* ಹಸ್ತ ನೀಡುವಾಗ ಬಲಗೈಯನ್ನೇ ನೀಡಿ.
* ಹಸ್ತಗಳ ಸೇರಿದಾಗ ಸಡಿಲಾಗಿಯೂ ಇರಬಾರದು, ತೀರ ಬಿಗಿಯಾಗಿಯೂ ಇರಬಾರದು.
* ಕೈಗಳು ಒಣ ಇರಲಿ, ಬೆವತಿರಬಾರದು.
* ಶೇಕಿಂಗ್ ಮೂರಕ್ಕಿಂತ ಜಾಸ್ತಿ ಇರಬಾರದು.
* ಹಸ್ತಲಾಘವ ಎರಡರಿಂದ ಮೂರು ಸೆಕೆಂಡಿಗಿಂತ ಹೆಚ್ಚು ಇರಬಾರದು.
* ಹಸ್ತಲಾಘವ ಮಾಡುವಾಗ ದೃಷ್ಟಿ ನೇರವಿರಲಿ ಕಣ್ಣು ಸಂಧಿಸುತ್ತಿರಲಿ.
* ಅಪರಿಚಿತರಿಗೆ ಹಸ್ತಲಾಘವ ನೀಡಿದ ಮೇಲೆ ಸೋಪಿನಿಂದ ಕೈ ತೊಳೆಯುವುದನ್ನು ಮರೆಯಬೇಡಿ.
ನೆನಪಿಡಿ, ಸರಿಯಾದ ರೀತಿಯಲ್ಲಿ ಹಸ್ತಲಾಘವ ಮಾಡುವುದರಿಂದ ಮುಂದಿರುವ ವ್ಯಕ್ತಿಯನ್ನು ಅಳೆಯುವುದು ಮಾತ್ರವಲ್ಲ ಅನೇಕ ರೋಗಳಿಂದಲೂ ದೂರವಿರಬುಹುದು.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications