ಬಡಮಕ್ಕಳ ಹೊಟ್ಟೆ ತುಂಬಿಸಲು ಈ ನಾಟಕ ನೋಡಿ

ಹಬೀಬ್ ತನ್ವೀರ್ ರಚಿಸಿದ, ಮೈಸೂರಿನ ನಟನ ತಂಡ ಪ್ರದರ್ಶಿಸುತ್ತಿರುವ ನಾಟಕ 21ರಂದು ಸಂಜೆ 7ಕ್ಕೆ ಮತ್ತು 22ರಂದು ಮಧ್ಯಾಹ್ನ 3.30 ಮತ್ತು ಸಂಜೆ 7 ಗಂಟೆಗೆ ಪ್ರದರ್ಶನಗೊಳ್ಳುತ್ತಿದೆ. ಬೆಂಗಳೂರಿನ ಹನುಮಂತ ನಗರದ ರಾಮಾಂಜನೇಯ ಗುಡ್ಡದ ಬಳಿಯ ಕೆಎಚ್ ಕಲಾಸೌಧದಲ್ಲಿ ಪ್ರದರ್ಶಿತಗೊಳ್ಳುತ್ತಿದೆ. ಪ್ರವೇಶ ದರ 100 ರು. ಇದ್ದು, ಇದರಲ್ಲಿನ 50 ರು. ಅವಶ್ಯಕತೆ ಇರುವ ಒಬ್ಬ ಬಡ ವ್ಯಕ್ತಿಯ ಒಂದು ಹೊತ್ತಿನ ಊಟಕ್ಕೆ ವಿನಿಯೋಗಿಸಲಾಗುವುದು ಎಂದು ಅವಿರತ ಹೇಳಿದೆ.
ಪ್ರತಿತಿಂಗಳು ಒಂದು ಅನಾಥಾಶ್ರಮಕ್ಕೆ ಭೇಟಿ ಕೊಟ್ಟು ಅಲ್ಲಿಯ ಮಕ್ಕಳಿಗೆ ಆ ದಿನದ ಊಟದ ವ್ಯವಸ್ಥೆ ಮಾಡುವ ಯೋಜನೆಯನ್ನು ಅವಿರತ ಮತ್ತು ಕಲಾವೇದಿಕೆ ಹಮ್ಮಿಕೊಂಡಿವೆ. ಎಷ್ಟೋ ಜನರಿಗೆ ಅನಾಥಾಶ್ರಮದ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡುವ ಆಸೆ ಇರುತ್ತೆ, ಆದರೆ ಒಬ್ಬರೆ ಮಾಡಲು ಕಷ್ಟ ಅನಿಸುವ ಕಾರಣ ಸುಮ್ಮನಾಗಿರುತ್ತಾರೆ. ಆದ ಕಾರಣ ನಾವೆಲ್ಲರು ಸೇರಿ ಒಟ್ಟಿಗೆ ಮಾಡಿದರೆ ಎಲ್ಲರು ಕೈ ಜೋಡಿಸಿದರೆ ನಾಲ್ಕಾರು ಬಡಮಕ್ಕಳ ಹೊಟ್ಟೆ ತುಂಬಿಸಿದಂತಾಗುತ್ತದೆ ಎಂಬುದು ಅವಿರತದ ಆಶಯ.
ಇದಕ್ಕಾಗಿ 50 ರು.ಗಳ ಕೂಪನ್ ಸಹ ಮಾಡಿದ್ದೇವೆ. ಆಸಕ್ತರು ಕೂಪನ್ ತೆಗೆದುಕೊಳ್ಳಬಹುದು. ಹನಿ ಹನಿಗೂಡಿದರೆ ಹಳ್ಳ ಅಲ್ಲವೆ? ದಯವಿಟ್ಟು ನಾಟಕಕ್ಕೆ ಬಂದು ಮನರಂಜನೆ ಪಡೆದು ಅನಾಥಮಕ್ಕಳಿಗೆ ಸಹಾಯ ಮಾಡಿ ಎಂದು ಅವಿರತ ಟ್ರಸ್ಟ್ ಕೇಳಿಕೊಂಡಿದೆ.
ಮತ್ತೆ ಗಮನಿಸಿ
ನಾಟಕ : ಚೋರ ಚರಣ ದಾಸ
ದಿನಾಂಕ : ಆಗಸ್ಟ್ 21 ಮತ್ತು 22
ಸ್ಥಳ : ಕೆಎಚ್ ಕಲಾಸೌಧ, ರಾಮಾಂಜನೇಯ ಗುಡ್ಡ, ಹನುಮಂತ ನಗರ, ಬೆಂಗಳೂರು.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications