ಆಟೋ ಚಾಲಕರ ಹನ್ನೆರಡು ಮಹಾಪಾಪಗಳು

* ನೀವು ಕರೆದ ಕಡೆಗೆ ಅವರಪ್ಪನ ಆಣೆ ಬರುವುದಿಲ್ಲ.
* ಮೀಟರ್ ಸಖತ್ ಮೋಸ. ಮಿನಿಮಮ್ ಜಂಪ್ 25%.
* ಹಗಲಿನ ವೇಳೆನೇ ಒಂದೂವರೆ ಅಥವಾ ಡಬ್ಬಲ್ ಮೀಟರ್.
* ರಾತ್ರಿ ವೇಳೆ ಅಥವಾ ಬಂದ್ ಇದ್ದಾಗ ಅವರು ಕೇಳಿದಷ್ಟು ಪೀಕಬೇಕು.
* ಮಳೆ ಬರುತ್ತಿದ್ದರಂತೂ ಅವರದು ರಾವಣನ ಅಟ್ಟಹಾಸ.
* ಅವರ ಬಳಿ ಯಾವತ್ತೂ ಚಿಲ್ಲರೆ ಇರುವುದೇ ಇಲ್ಲ, ಪಾಪ.
* ನಿಮ್ಮಂಥವರನ್ನು ಬೇಜಾನ್ ನೋಡಿದೀನಿ ಎಂದು ಪ್ರಯಾಣಿಕರಿಗೆ ಆಗಾಗ 'ಆಶೀರ್ವಾದ'.
* ಪ್ರಶ್ನೆ ಕೇಳಿದರೆ ನಿಮ್ಮನ್ನು ಗುರಾಯಿಸಿ ನೋಡುವುದು.
* ಊರು ಗೊತ್ತಿಲ್ಲದಿದ್ದರಂತೂ ಸುಮ್ಮನೆ ಆಟೋ ಮೀಟರ್ ಸುತ್ತಾಡಿಸುವುದು.
* ಮಳೆ ನೀರಿನಿಂದ ರಕ್ಷಣೆಗೆ ಸೈಡ್ ಕವರ್ ಕಟ್ಟುವುದಿಲ್ಲ.
* ಗಾಡಿ ಓಡಿಸುವಾಗ ಒಂದೇ ಸಮನೆ ಫೋನಿನಲ್ಲಿ ಮಾತನಾಡುವುದು.
* ಪರವಾನಗಿ, ಪರ್ಮಿಟ್ ಮನೆಯಲ್ಲಿ ಇವರು ರಸ್ತೆಯಲ್ಲಿ.
ಬೆಂಗಳೂರು ಆಟೋ ಚಾಲಕರ ಈ ದುರಾಚಾರಗಳನ್ನು ಸಹಿಸಿಕೊಳ್ಳಲು ಸಿದ್ಧರಿಲ್ಲದ ಮತ್ತು ರೋಸಿಹೋದ ಪ್ರಯಾಣಿಕರು ಈಗ ಚಾಲಕರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸುಲಿಗೆಕೋರ ಆಟೋಗಳ ವಿರುದ್ಧ 'ಆಟೋ ಬಹಿಷ್ಕಾರ" ಆಂದೋಲನವೊಂದನ್ನು ಆನ್ಲೈನ್ ನಲ್ಲಿ ಹುಟ್ಟು ಹಾಕಿದ್ದಾರೆ. ವೆಬ್ ಸೈಟಿನ ಹೆಸರು ಮೀಟರ್ಜಾಮ್ ಡಾಟ್ ಕಾಂ.
ಆಗಸ್ಟ್ 12ರ ಗುರುವಾರ ಮೀಟರ್ ಜಾಮ್ ಆಂದೋಲನ ಹಮ್ಮಿಕೊಳ್ಳಲಾಗಿದೆ. ದುರ್ವರ್ತನೆ ಮಾಡುವ ಆಟೋ ಮತ್ತು ಟ್ಯಾಕ್ಸಿಗಳಿಗೆ 'ಹೋಗಯ್ಯ" ಎಂದು ಹೇಳಬೇಕು ಎಂದು ಜನತೆಯ ಗುಂಪು ಪಣತೊಟ್ಟಿದೆ. ಆಂದೋಲನ ನಡೆಸುತ್ತಿರುವವರು ಆಟೋ ಬಳಕೆದಾರರಾಗಿರುವುದರಿಂದ ಸ್ವಯಂಪ್ರೇರಿತರಾಗಿ ಚಳವಳಿಗೆ ಧುಮುಕಿದ್ದಾರೆ. ಮೀಟರ್ಜಾಮ್ ಡಾಟ್ ಕಾಂ ಆಂದೋಲನ ಎಷ್ಟು ಜನಪ್ರಿಯವಾಗಿದೆ ಎಂದರೆ ಅದನ್ನು ಪ್ರಸಾರ, ಮರುಪ್ರಸಾರ ಮಾಡುತ್ತಿರುವ ಫೇಸ್ ಬುಕ್ ಮತ್ತು ಟ್ವಿಟ್ಟರ್ ಜಾಲತಾಣಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಜಾಮ್ ಅನ್ನು ಮತ್ತಷ್ಟು ಬಂಪರ್ ಟು ಬಂಪರ್ ಜಾಮ್ ಮಾಡಲು ನಿಮಗೆ ದಟ್ಸ್ ಕನ್ನಡ ಆಹ್ವಾನ ನೀಡುತ್ತಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications