ಕಾಕಾರನ್ನು ಬಲೆಗೆ ಬೀಳಿಸಿದವನಿಗೆ ಆಸ್ಕರ್?
ಜೋಹಾನ್ಸ್ ಬರ್ಗ್, ಜೂ.22: ಛೇ! ಹೀಗಾಗಬಾರದಿತ್ತು...ಇದು ಎಲ್ಲರ ಒಕ್ಕೊರಲ ಉದ್ಗಾರ. ಬ್ರೆಜಿಲ್ ತಂಡದ ಸ್ಟಾರ್ ಆಟಗಾರ ಕಾಕಾರನ್ನು ಫ್ರೆಂಚ್ ರೆಫ್ರಿ ಸ್ಟಿಫನ್ ನೊಯ್ ವಿನಾಕಾರಾಣ ಮೈದಾನದಿಂದ ಹೊರಕ್ಕೆ ಕಳಿಸಿದ್ದು, ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಪಂದ್ಯದಲ್ಲಿ ಎರೆಡೆರಡು ಹ್ಯಾಂಡ್ ಬಾಲ್ ಆದರೂ ರೆಫ್ರಿ ಕಣ್ಣಿಗೆ ಬೀಳದೇ ಹೋದದ್ದು ಹೇಗೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಹಳದಿ ಕಾರ್ಡ್ ನಿಯಮಕ್ಕೆ ಬದಲಾವಣೆ ತಂದಿದ್ದೇವೆ. ಸ್ಟಾರ್ ಆಟಗಾರರನ್ನು ಮುಂದಿನ ಹಂತದವರೆಗೂ ಉಳಿಸಿಕೊಳ್ಳಲಾಗುವುದು ಎಂದು ಫೀಫಾ ಇತ್ತೀಚೆಗೆ ಬೊಬ್ಬೆ ಹಾಕಿದ್ದು, ಬಹುಶಃ ಫ್ರಾನ್ಸ್ ನ ರೆಫ್ರಿ ಕಿವಿಗೆ ಬಿದ್ದಂತ್ತಿಲ್ಲ.
ಬ್ರೆಜಿಲ್ ಹಾಗೂ ಐವರಿ ಕೋಸ್ಟ್ ಪಂದ್ಯದಲ್ಲಿ ಅಬ್ದುಲ್ ಕದರ್ ಕೈಟ ನಾಟಕೀಯವಾಗಿ ಬಿದ್ದು,ಮುಖಮುಚ್ಚಿಕೊಂಡದ್ದನ್ನು ನೋಡಿದ ರೆಫ್ರಿಗೆ ಕರ್ತವ್ಯ ಜಾಗೃತಿಕೊಂಡು, ಮೊದಲೇ ಹಳದಿ ದಿರಿಸಿನಲ್ಲಿ ಸುಂದರವಾಗಿ ಕಾಣುತ್ತಿದ್ದ ಕಾಕಾಗೆ ಹಳದಿ ಕಾರ್ಡ್ ತೋರಿಸಿ, ಎರಡನೇ ಹಳದಿ ಕಾರ್ಡ್ ಪಡೆದ ಮೈದಾನದಿಂದ ಹೊರಗಟ್ಟಿಬಿಟ್ಟ.
ನಿಜ. ಮರಡೋನಾ ಸುಮ್ಮನೆ ಏನೇನೊ ಬಡಬಡಾಯಿಸುವ ಪೈಕಿಯಲ್ಲ. ಅರ್ಜೆಂಟೀನಾದ ಸ್ಟಾರ್ ಆಟಗಾರರಾದ ಮೆಸ್ಸಿ, ಟೆವೆಜ್ ಗೆ ಎದುರಾಳಿ ತಂಡದ ಒರಟಾಟದಿಂದ ರಕ್ಷಣೆ ಬೇಕಿದೆ ಎಂದಿದ್ದರು. ಈ ಮಾತು ಬ್ರೆಜಿಲ್ ಆಟಗಾರರಿಗೂ ಅನ್ವಯಿಸುತ್ತದೆ. ತನ್ನದಲ್ಲದ ತಪ್ಪಿಗೆ ಕಾಕಾ ಬಲಿಯಾಗಿದ್ದಾರೆ.
ಮಾಧ್ಯಮಗಳು ಐವರಿ ಕೋಸ್ಟ್ ಆಟಗಾರ ಕೈಟರನ್ನು ಸಕತ್ತಾಗಿ ಕಿಚಾಯಿಸಿವೆ. ಹಾಲಿವುಡ್ ನ ಮುಂದಿನ ಸೂಪರ್ ಸ್ಟಾರ್ ಎಂದರೆ, ಕೆಲವರು ಮುಂದಿನ ಆಸ್ಕರ್ ಪ್ರಶಸ್ತಿಗೆ ಕೈಟ ಸಂಪೂರ್ಣ ಅರ್ಹ ಎಂದಿದ್ದಾರೆ. ಕಾಕಾ ಮುಖಕ್ಕೆ ಒದಿಯುವ ಸಾಧ್ಯತೆಯೇ ಇರಲಿಲ್ಲ. ಕಾಕಾ ಹ್ಯಾರಿ ಪಾಟರ್ ನಂತೆ ಜಾದೂ ಮಾಡಿ ಕೈಟ ಮುಖ ಮುಟ್ಟಬಹುದಾಗಿತ್ತು ಅಷ್ಟೇ ಎಂದು ಗೇಲಿ ಮಾಡಲಾಗಿದೆ.
ಕಾರಣ, ಕೈಟ ಮಾಡಿದ ನಟನೆ ಹಾಗಿತ್ತು. ಕಾಕಾ ಟಾಂಗ್ ಕೊಟ್ಟಂತೆ ನಟಿಸಿ ಬಿದ್ದ ಕೈಟ, ಮುಖ ಮುಚ್ಚಿಕೊಂಡಿದ್ದು ಯಾಕೆ ಎಂದು ನಾಲ್ಕಾರು ಬಾರಿ ರಿಪ್ಲೇ ನೋಡಿದ ಮಾಧ್ಯಮದವರಿಗೆ, ಅಭಿಮಾನಿಗಳಿಗೆ ಇನ್ನೂ ಆರ್ಥವಾಗದ ಸಂಗತಿ.
ಭಾನುವಾರ ನಡೆದ ಪಂದ್ಯದಲ್ಲಿ ನಡೆದ ಈ ಘಟನೆ, ಇನ್ನೂ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿರುವ ಸುದ್ದಿಯಗಿದೆ. ಪಂದ್ಯವನ್ನು ಬ್ರೆಜಿಲ್ 3-1 ಅಂತರದಿಂದ ಗೆದ್ದರೂ, ಬ್ರೆಜಿಲ್ ಆಟ ಕೂಡಾ ಕಳಂಕದಿಂದ ಹೊರತಾಗಿರಲಿಲ್ಲ. ಫ್ಯಾಬಿಯಾನೊ ಹೊಡೆದ ಎರಡನೇ ಗೋಲಿಗೂ ಮುನ್ನ ಹ್ಯಾಂಡ್ ಬಾಲ್ ಆದರೂ, ಲೆಕ್ಕಿಸದೆ ಮೋಸದಾಟ ಆಡಿದ್ದು, ಅಗ್ರತಂಡಕ್ಕೆ ಶೋಭೆ ತರುವ ವಿಚಾರವೇನಲ್ಲ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications