ಮೆಸ್ಸಿ, ಟೆವೆಜ್ ಗೆ ರಕ್ಷಣೆ ಬೇಕಿದೆ: ಮರಡೋನಾ
ಜೋಹಾನ್ಸ್ ಬರ್ಗ್, ಜೂ.17: ಬಹುಶಃ ಪಾದರಸದಂತೆ ಅತ್ತಿಂದ ಇತ್ತ ಓಡಾಡುತ್ತಾ, ಇನ್ನೂ ತಾನು ಹಾಲಿ ಆಟಗಾರನೆಂಬ ಭ್ರಮೆಯಲ್ಲಿರುವ ಕೋಚ್ ಅನ್ನು ಫೀಫಾ ನೋಡಿರಲಿಲ್ಲ. ಡಿಯಾಗೋ ಮರಡೋನಾ ಆ ಕೊರತೆಯನ್ನು ನೀಗಿಸಿದ್ದಾರೆ. ಪೀಲೆ ಜೊತೆಗಿನ ವಾಕ್ಸಮರ ಬಿಟ್ಟು ಆದಷ್ಟು ಮೈದಾನತ್ತ ತಮ್ಮ ಚಿತ್ತ ಹರಿಸಿರುವ ಮರಡೋನಾ ಈಗ ಮತ್ತೊಂದು ವರಸೆ ತೆಗೆದಿದ್ದಾರೆ. ನಮ್ಮ ಪ್ರಮುಖ ಆಟಗಾರಿಗೆ ಸೂಕ್ತ ರಕ್ಷಣೆ ನೀಡಿ ಎಂದು ರೆಫ್ರಿಗಳಿಗೆ ಮರಡೋನಾ ಸೂಚಿಸಿದ್ದಾರೆ.
ತಂಡದ ಉತ್ತಮ ಆಟಗಾರರನ್ನು ತಡೆಗಟ್ಟುವುದು ಫುಟ್ಬಾಲ್ ಆಟದ ತಂತ್ರಗಳಲ್ಲಿ ಒಂದು. ಆ ಕಷ್ಟವನ್ನು ನಾನೂ ಕೂಡಾ ಅನುಭವಿಸಿದ್ದೇನೆ. ಈಗ ರೆಫ್ರಿಗಳು ತುಂಬಾ ಹುಷಾರಾಗಿದ್ದಾರೆ. ಸುಮ್ಮನೆ ಹಾರಿ ಬೀಳುವ ಆಟಗಾರರಿಗೆ ಫ್ರೀ ಕಿಕ್ ನೀಡುವ ಕಾಲ ಹೋಯ್ತು. ಮೆಸ್ಸಿ ಅಥವಾ ಕಾರ್ಲೊಸ್ ಟೆವೆಜ್ ಓಟಕ್ಕೆ ಕೊರಿಯಾ ಆಟಗಾರರು ಅಡ್ಡಿ ಪಡಿಸಿದರೆ ತಕ್ಷಣವೇ ಹಳದಿ ಕಾರ್ಡು ತೋರಿಸಿ, ಮತ್ತೆ ಫೌಲ್ ಮಾಡಿದರೆ ಹೊರಗಟ್ಟಿ ಎಂದು ಮರಡೋನಾ ಗುಡುಗಿದ್ದಾರೆ.
ಮೆಸ್ಸಿ ಹಾಗೂ ಟೆವೆಜ್ ತಂಡದ ಅತ್ಯುತ್ತಮ ಆಟಗಾರರು ಅರ್ಜೆಂಟೀನಾ ಮುಂದಿನ ಸುತ್ತುಗಳಲ್ಲಿ ಯಶ ಕಾಣಬೇಕಾದರೆ, ಈ ಇಬ್ಬರು ಆಟಗಾರರ ದೈಹಿಕ ಸಾಮರ್ಥ್ಯ ಕಾಯ್ದುಕೊಳ್ಳುವುದು ಅವಶ್ಯ. ಆದರೆ, ನಿರೀಕ್ಷೆಯಂತೆ ಎದುರಾಳಿ ತಂಡದ ಆಟಗಾರರು ಸಂಚು ಮಾಡಿ, ತಡೆಯೊಡ್ಡುತ್ತಾರೆ. ರೆಫ್ರಿ ಸರಿಯಾದ ನಿರ್ಣಯ ನೀಡಲಿ ಎಂದು ಬಯಸುತ್ತೇನೆ ಎಂದು ಮರಡೋನಾ ಹಲುಬಿದ್ದಾರೆ.
ಆದರೆ, ಸತ್ಯದ ಸಂಗತಿ ಎಂದರೆ, ರೆಫ್ರಿಗಳಿಗೆ ಪಂದ್ಯದಲ್ಲಿ ಆಡುವ ಆಟಗಾರರಲ್ಲಿ ಜಗದ್ವಿಖ್ಯಾತರೇ ಇದ್ದರೂ ಎಲ್ಲರನ್ನು ಒಂದೇ ಬಗೆಯಿಂದ ಕಾಣುತ್ತಾರೆ. ಅದರಲ್ಲೂ ವಿಶ್ವಕಪ್ ನಲ್ಲಿ ಜಿನದಿನ್ ಜಿದಾನೆ, ಡೇವಿಡ್ ಬೆಕ್ ಹ್ಯಾಮ್, ರಾಬರ್ಟೋ ಕರ್ಲೊಸ್ ರಂತಹ ಮಹಾನ್ ಆಟಗಾರರಿಗೆ ಮುಲಾಜಿಲ್ಲದೆ ಕೆಂಪು ಕಾರ್ಡ್ ತೋರಿಸಿ ಹೊರಗಟ್ಟಿದ್ದಾರೆ. ಮರಡೋನಾ ತನ್ನ ತಂಡದ ಆಟಗಾರರನ್ನು ರಕ್ಷಿಸಿ ಎನ್ನುವುದು ಮೂರ್ಖತನ ಎಂಬುದು ಫುಟ್ಬಾಲ್ ಪಂಡಿತರ ಅಭಿಪ್ರಾಯ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications