ರಾಜ್ಯದಲ್ಲಿ ಗುಡುಗು ಸಮೇತ ಮಾಯದಂತ ಮಳೆ

ಕರ್ನಾಟಕದ ಕರಾವಳಿ ತೀರ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಳೆಯ ಕಣ್ಣಾಮುಚ್ಚಾಲೆ ಶುರುವಾಗಿದೆ. ಮುಲ್ಕಿಯಲ್ಲಿ 11 ಸೆಂ.ಮೀನಷ್ಟು ದಾಖಲೆ ಮಳೆ ಸುರಿದಿದೆ. ಮಂಗಳೂರು, ಕೋಟಾ, ಜಮಖಂಡಿ, ಯದ್ರಾಮಿ, ರಾಯಚೂರು, ಸಿಂಧನೂರಿನಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ.
ಪಣಂಬೂರು, ಕುಂದಾಪುರ, ಚಿಕ್ಕೋಡಿ, ದೇವರಿಪ್ಪರಗಿಯಲ್ಲಿ ತಲಾ 3 ಸೆಂ.ಮೀ ಮಳೆ ದಾಖಲಾಗಿದೆ. ಸುಬ್ರಹ್ಮಣ್ಯ, ಹುಕ್ಕೇರಿ, ಸಂಕೇಶ್ವರ, ಹಾನಗಲ್, ಬೇವೂರು, ಬಸವನ ಬಾಗೇವಾಡಿ, ನಾರಾಯಣಪುರ, ಭಾಗಮಂಡಲ, ವಿರಾಜಪೇಟೆ ತಲಾ 2 ಸೆಂ.ಮೀ ಮಳೆಯನ್ನು ಸ್ವಾಗತಿಸಿದೆ.
ಮುಡಬಿದರೆ, ಪುತ್ತೂರು, ಕಾರ್ಕಳ, ಭಟ್ಕಳ, ಗೋಕಾಕ್, ಬಾಗಲಕೋಟೆ, ರಬಕವಿ, ಬಿಜಾಪುರ, ಗುಲ್ಬರ್ಗ, ಶಹಾಪುರ, ಕೊಟ್ಟಿಗೆಹಾರ, ಚೆನ್ನಗಿರಿ, ಚಿತ್ರದುರ್ಗದಲ್ಲಿ 1 ಸೆಂ.ಮೀ ಮಳೆ ಸುರಿದಿದೆ. ಕರ್ನಾಟಕದ ಒಳನಾಡಿನಾದ್ಯಂತ ಗುಡುಗು ಸಮೇತ ಮಳೆ ಬೀಳಲಿದೆ ಎಂದು ವಾತಾವರಣ ಇಲಾಖೆ ಎಚ್ಚರಿಸಿದೆ.












Click it and Unblock the Notifications