ಧಾರವಾಡದಲ್ಲಿ ಹೊರನಾಡ ಕನ್ನಡಿಗರ ಸಭೆ
ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಕನ್ನಡಿಗರ ಸಭೆಯನ್ನು ಉದ್ಗಾಟಿಸಲಿದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕ.ವಿ.ವ.ಸಂಘದ ಹೊಸ ಅಂತರ್ಜಾಲ ತಾಣವನ್ನು ಉದ್ಗಾಟಿಸಲಿದ್ದಾರೆ. ವೀರಣ್ಣ ಮತ್ತಿಕಟ್ಟಿ, ವೀರಪ್ಪ ಮೊಯಿಲಿ, ಜಗದೀಶ್ ಶೆಟ್ಟರ್, ಬಿ.ಎಸ್.ಬೊಮ್ಮಾಯಿ, ಸಿ. ಎಮ್. ಉದಾಸಿ ಮುಂತಾದ ಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದ ಕೊನೆಯ ದಿನ ವಿಶ್ವೇಶ್ವರ ತೀರ್ಥಹಳ್ಳಿ ಮಠದ ಸ್ವಾಮೀಜಿ, ಮಾಜಿ ಮುಖ್ಯ ಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಕಾನೂನು ಸಚಿವ ಸುರೇಶ್ ಕುಮಾರ್ ಮತ್ತು ಮಾಜಿ ಮಂತ್ರಿಗಳಾದ ಎಚ್.ಕೆ. ಪಾಟೀಲ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ದೇಶದ ಬಗ್ಗೆ ಪಾ.ಪು.ರವರು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೊರರಾಜ್ಯಗಳಲ್ಲಿ ನೆಲೆಸಿ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿರುವ ಕನ್ನಡಿಗರನ್ನು ಒಟ್ಟು ಗೂಡಿಸುವುದು ಮತ್ತು ಆ ಮೂಲಕ ನಮ್ಮ ಹೊರನಾಡ ಕನ್ನಡಿಗ ಸಹೋದರ ಸಹೋದರಿಯರು ಮಾಡುತ್ತಿರುವ ಕೆಲಸಗಳಿಗೆ ಪ್ರೋತ್ಸಾಹ, ಸಹಕಾರ ಹಾಗೂ ಸಹಮತವನ್ನು ವ್ಯಕ್ತಪಡಿಸುವುದು. ಹಾಗೂ ಶಾಸ್ತ್ರೀಯ ಭಾಷೆಯಾಗಿರುವ ಕನ್ನಡ ಭಾಷೆಗೆ ಸಿಗಬೇಕಾದ ಹೆಚ್ಚಿನ ಮನ್ನಣೆಯನ್ನು ಪಡೆದುಕೊಳ್ಳಲು ಇರುವ ಅವಶ್ಯಕತೆಯನ್ನು ಅವರು ಒತ್ತಿ ಹೇಳಿದ್ದಾರೆ.