ಅಫ್ಜಲ್ ಗುರುಗೆ ನೇಣು : ಯೆಸ್ ಅಂತು ದಿಲ್ಲಿ

2001ರಲ್ಲಿ ನಡೆದ ಸಂಸತ್ ದಾಳಿಯಲ್ಲಿ ಪ್ರಮುಖ ಅಪರಾಧಿಯಾಗಿರುವ ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ನೀಡಬೇಕೆಂದು ಸುಪ್ರಿಂಕೋರ್ಟ್ ನೀಡಿರುವ ಆದೇಶವನ್ನು ದೆಹಲಿ ಸರಕಾರ ಸ್ವಾಗತಿಸಿದ್ದು, ಅಪರಾಧಿಯನ್ನು ಕ್ಯಾಪಿಟಲ್ ಫನೀಷ್ ಮೆಂಟ್ ಗೆ ಕೂಡಲೇ ಗುರಿಪಡಿಸಬೇಕು ಎಂದು ರಾಜ್ಯಪಾಲ ಲೆಫ್ಟಿನೆಂಟ್ ತೇಜಿಂದರ್ ಖನ್ನಾ ಅವರ ಮೂಲಕ ಕೇಂದ್ರ ಸರಕಾರಕ್ಕೆ ಉತ್ತರ ಬರೆದಿದೆ.
ಸಂಸತ್ ದಾಳಿಯಲ್ಲಿ ಅಪರಾಧಿಯಾಗಿರುವ ಅಫ್ಜಲ್ ಗುರುಗೆ ಸುಪ್ರಿಂಕೋರ್ಟ್ ಮರಣದಂಡನೆ ಶಿಕ್ಷೆ ನೀಡಿದೆ. ಜೀವದಾನ ನೀಡಬೇಕೆಂದು ಕೋರಿ ಗುರು ರಾಷ್ಟ್ರಪತಿ ಬಳಿ ಅರ್ಜಿ ಸಲ್ಲಿಸಿದ್ದಾರೆ. ರಾಷ್ರಪತಿಗಳು ಅರ್ಜಿ ಪರಿಶೀಲನೆಗೆ ಕೇಂದ್ರ ಸರಕಾರಕ್ಕೆ ರವಾನಿಸಿದೆ. ಕೇಂದ್ರ ಸರಕಾರ ಸಂಬಂಧಿಸಿದ ರಾಜ್ಯ ಸರಕಾರಕ್ಕೆ ರವಾನಿಸಿತ್ತು. ಇದೀಗ ದಿಲ್ಲಿ ಸರಕಾರ ತನ್ನ ನಿಲುವನ್ನು ಪ್ರಕಟಿಸಿದೆ. ಆದರೆ, ಕೇಂದ್ರ ಮತ್ತು ರಾಷ್ಟ್ರಪತಿಗಳು ಯಾವ ನಿರ್ಧಾರ ಕೈಗೊಳ್ಳವರೆಂದು ಕಾಯ್ದು ನೋಡಬೇಕಿದೆ.












Click it and Unblock the Notifications