ಮೊಯ್ಲಿ ಕುತಂತ್ರದಿಂದ ಸೋಲು : ಪೂಜಾರಿ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೊಯ್ಲಿ ನನ್ನ ವಿರುದ್ದ ಯಾತಕ್ಕೆ ಕೆಲಸ ಮಾಡಿದರು ಮುಂತಾದ ಎಲ್ಲಾ ವಿವರಗಳನ್ನು ಮಾಧ್ಯಮದ ಮುಂದೆ ಹಂಚಿಕೊಳ್ಳಲಾಗುವುದಿಲ್ಲ. ಅಗತ್ಯ ಬಿದ್ದಾಗ ವರಿಷ್ಠರ ಮುಂದೆ ಸವಿವರವಾಗಿ ಹೇಳುತ್ತೇನೆ ಎಂದರು. ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ ಎನ್ನುವ ಆರೋಪ ಸುಳ್ಳು. ಈ ಭಾಗದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ನಮ್ಮ ಪಕ್ಷ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ ಎಂದು ಪೂಜಾರಿ ಹೇಳಿಕೆ ನೀಡಿದ್ದಾರೆ.
ಬಿಜೆಪಿ ನಾಯಕ ವೆಂಕಯ್ಯ ನಾಯ್ಡು ರಾಜ್ಯ ಸರಕಾರದ ಏಜೆಂಟ್ ಹಾಗೂ ಅವರಿಗೆ ಸಾಮಾನ್ಯ ಜ್ಞಾನ ಎನ್ನುವುದೇ ಇಲ್ಲ. ಎಲ್ಲರನ್ನೂ ಖರೀದಿಸುವ ಸಂಪ್ರದಾಯ ಹೊಂದಿರುವ ಬಿಜೆಪಿ ಯಾವ ಲೆಕ್ಕಾಚಾರದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಲು ಸಿಎಂ ರಾಜಭವನಕ್ಕೆ ತೆರಳಿದ್ದರೋ ಗೊತ್ತಿಲ್ಲ. ದುಡ್ಡಿನ ಅಹಂಕಾರದಿಂದ ಮೆರೆಯುತ್ತಿರುವ ರೆಡ್ಡಿ ಸಹೋದರರನ್ನು ಯಾವ ಪುರುಷಾರ್ಥಕ್ಕಾಗಿ ಇನ್ನೂ ಸಂಪುಟದಲ್ಲಿ ಯಡಿಯೂರಪ್ಪ ಉಳಿಸಿಕೊಂಡಿದ್ದಾರೋ ತಿಳಿಯುವುದಿಲ್ಲ ಎಂದು ಪೂಜಾರಿ ವ್ಯಂಗ್ಯವಾಡಿದ್ದಾರೆ.











Click it and Unblock the Notifications